ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಹೆಸರು ಈಗ ಮತ್ತೊಂದು ವಿವಾದದಲ್ಲಿ ಕೇಳಿ ಬರುತ್ತಿದೆ. ಸಲ್ಮಾನ್ ಹೆಸರು ಹೇಳಿಕೊಂಡು ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿರುವ ಪ್ರಕರಣ ಜೋಧಪುರದಲ್ಲಿ ನಡೆದಿದೆ. ಈ ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ರಾಜಸ್ಥಾನದ ಹೈಕೋರ್ಟ್ ಆದೇಶ ನೀಡಿದೆ. (ಚಿತ್ರಗಳು ಕೃಪೆ: ಸಲ್ಮಾನ್ ಖಾನ್ ಇನ್ಸ್ಟಾಗ್ರಾಂ ಖಾತೆ)
ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ನಟ ಸಲ್ಮಾನ್ ಖಾನ್. ಅದಕ್ಕೆ ಇವರನ್ನು ಬ್ಯಾಡ್ ಬಾಯ್ ಆಫ್ ಬಾಲಿವುಡ್ ಎನ್ನಲಾಗುತ್ತದೆ.
2/ 10
ಈಗಲೂ ಸಹ ಒಂದು ವಿವಾದದಲ್ಲಿ ಸಲ್ಮಾನ್ ಹೆಸರು ಕೇಳಿ ಬಂದಿದೆ.
3/ 10
ಈ ಪ್ರಕರಣದಲ್ಲಿ ತನಿಖೆ ನಡೆಸುವಂತೆ ರಾಜಸ್ಥಾನದ ಹೈ ಕೋರ್ಟ್ ಆದೇಶ ನೀಡಿದೆ.
4/ 10
ಹೌದು, ಸಲ್ಮಾನ್ ಅವರು ತಮ್ಮ ತೋಟದ ಮನೆಯಲ್ಲಿ ಕುದುರೆಗಳನ್ನು ಸಾಕಿರುವ ವಿಷಯ ಗೊತ್ತೇ ಇದೆ.
5/ 10
ಅವರು ಆಗಾಗ ತಮ್ಮ ಕುದುರೆಗಳೊಂದಿಗೆ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
6/ 10
ಸಲ್ಮಾನ್ ಅವರ ಜೊತೆಗಿರುವ ಕುದುರೆಯನ್ನು ಮಾರುವುದಾಗಿ ಹೇಳಿ ಮೂರು ಮಂದಿ ಮಹಿಳೆಯೊಬ್ಬರಿಗೆ 12 ಲಕ್ಷ ವಂಚಿಸಿದ್ದಾರೆ.
7/ 10
ಈ ಸಂಬಂಧ ಈಗಾಗಲೇ ಜೋಧಪುರದಲ್ಲಿ ಪ್ರಕರಕಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಇರುವುದರಿಂದ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ವಂಚನೆಗೊಳಗಾದವರು ರಾಜಸ್ಥಾನದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
8/ 10
ಕುದುರೆ ಖರೀದಿಸಲು ಮಹಿಳೆ 11 ಲಕ್ಷದ ಚೆಕ್ ಹಾಗೂ ಒಂದು ಲಕ್ಷ ನಗದು ನೀಡಿದ್ದು, ನಂತರ ಆರೋಪಿಗಳು ಕುದುರೆ ಕೊಡದೆ ಯಾಮಾರಿಸಿದ್ದಾರಂತೆ.
9/ 10
ಸಲ್ಮಾನ್ ಖಾನ್ ತಮ್ಮ ಕುದುರೆಯನ್ನು ಮಾರುತ್ತಿದ್ದು, ಅದನ್ನು ನೀವು ಖರೀದಿಸಿದ ನಂತರ ಮಾರಿದರೆ ಲಕ್ಷಗಟ್ಟಲೆ ಲಾಭ ಸಿಗುತ್ತದೆ ಎಂದು ಆರೋಪಿಗಳು ಸಲ್ಮಾನ್ ಜೊತೆಗಿರುವ ಕುದುರೆಯ ಫೋಟೋ ತೋರಿದ್ದರಂತೆ.
10/ 10
ದಾಣಿ ಸಾಂಗರಿಯಾ ನಿವಾಸಿಯಾಗಿರುವ ವಂಚಿತ ಮಹಿಳೆ ಹೆಸರು ಸಂತೋಷ್ ಬಾಟಿ. ವಂಚಿತರಾದ ನಿಭರ್ಯ್ ಸಿಂಗ್, ರಾಜ್ ಪ್ರೀತ್ ಹಾಗೂ ಇತರರ ವಿರುದ್ಧ ಈಗ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಈಗಾಗಲೇ ಜೋಧಪುರದಲ್ಲಿ ಪ್ರಕರಕಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೆಸರು ಇರುವುದರಿಂದ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿ ವಂಚನೆಗೊಳಗಾದವರು ರಾಜಸ್ಥಾನದ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಲ್ಮಾನ್ ಖಾನ್ ತಮ್ಮ ಕುದುರೆಯನ್ನು ಮಾರುತ್ತಿದ್ದು, ಅದನ್ನು ನೀವು ಖರೀದಿಸಿದ ನಂತರ ಮಾರಿದರೆ ಲಕ್ಷಗಟ್ಟಲೆ ಲಾಭ ಸಿಗುತ್ತದೆ ಎಂದು ಆರೋಪಿಗಳು ಸಲ್ಮಾನ್ ಜೊತೆಗಿರುವ ಕುದುರೆಯ ಫೋಟೋ ತೋರಿದ್ದರಂತೆ.