Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

ಸ್ಯಾಂಡಲ್​ವುಡ್ ನಿರ್ದೇಶಕ ಕಿರಣ್ ಗೋವಿ (Kiran Govi) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಿರಣ್ ಗೋವಿ ಅವ್ರಿಗೆ ಹೃದಯಾಘಾತ ಸಂಭವಿಸಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯ್ತು. ಚಿಕಿತ್ಸೆ ಫಲಿಸದೇ ನಿರ್ದೇಶಕರು ಕೊನೆಯುಸಿರೆಳೆದಿದ್ದಾರೆ.

First published:

  • 17

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ಕಿರಣ್ ಗೋವಿ ಅವರಿಗೆ 50 ವರ್ಷ ವಯಸ್ಸಾಗಿತ್ತು. ತಮ್ಮ ಕಚೇರಿಯಲ್ಲಿ ಕೆಲಸ ಮಾಡ್ತಿದ್ದ ವೇಳೆ ನಿರ್ದೇಶಕ ಕಿರಣ್ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

    MORE
    GALLERIES

  • 27

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ಸ್ಯಾಂಡಲ್​ವುಡ್​ಗೆ ಅನೇಕ ಸಿನಿಮಾಗಳನ್ನು ನಿರ್ದೇಶಕ ಕಿರಣ್ ಗೋವಿ ನೀಡಿದ್ದಾರೆ. ಸಂಚಾರಿ (Sanchari), ಪಯಣ (Payana), ಯಾರಿಗುಂಟು-ಯಾರಿಗಿಲ್ಲ. ಪಾರು w/o ದೇವದಾಸ್ ಇನ್ನಿತರೆ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

    MORE
    GALLERIES

  • 37

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ನಿರ್ದೇಶಕ ಕಿರಣ್ ಗೋವಿ ನಿಧನಕ್ಕೆ ಅನೇಕ ಸ್ಯಾಂಡಲ್​​ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ. ಉತ್ತಮ ನಿರ್ದೇಶಕರಾಗಿ ಹೆಸರು ಮಾಡಿದ್ದ ಕಿರಣ್ ಗೋವಿ ಅವರು ಅಪಾರ ಶಿಷ್ಯ ಬಳಗವನ್ನು ಹೊಂದಿದ್ದರು.

    MORE
    GALLERIES

  • 47

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ರವಿಶಂಕರ್ ನಾಯಕ ನಟರಾಗಿ ನಟಿಸಿದ್ದ ಪಯಣ ಸಿನಿಮಾವನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಜೊತೆಗೆ ಒರಟ ಖ್ಯಾತಿಯ ಪ್ರಶಾಂತ್ ಜೊತೆಗೆ ಸಂಚಾರಿ ಹೆಸರಿನ ಸಿನಿಮಾವನ್ನು ಮಾಡಿದ್ದರು.

    MORE
    GALLERIES

  • 57

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ಕಿರಣ್ ಗೋವಿ ಅವರು ಮೂಲತಃ ತುಮಕೂರಿನವರಾಗಿದ್ದಾರೆ. ಅಲ್ಲೇ ತಮ್ಮ ಶಿಕ್ಷಣ ಪೂರ್ಣಗೊಳಿಸಿ ಬೆಂಗಳೂರಿಗೆ ಆಗಮಿಸಿದ್ರು. ಸಿನಿಮಾ ಹುಚ್ಚು ಬೆಳೆಸಿಕೊಂಡಿದ್ದ ಕಿರಣ್ ಗೋವಿ ಕೆಲವು ಸಿನಿಮಾಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳಲ್ಲಿಯೂ ನಟಿಸಿದ್ದರು.

    MORE
    GALLERIES

  • 67

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ಶಿಕ್ಷಣದಲ್ಲಿ ಹಿಂದುಳಿದ ಕಿರಣ್ ಗಾಯನದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದರು. ಹಾಗಾಗಿ ಆರ್ಕೆಸ್ಟ್ರಾ ಸೇರಿಕೊಂಡು ಗಾಯನ ಆರಂಭಿಸಿದರು. ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ದೇಶಕರಾಗಿ ಬೆಳೆದಿದ್ದಾರೆ. ನಟಿ ಪ್ರೇಮ ಅವರಿಗೆ ತಮ್ಮ ನಾಟಕದಲ್ಲಿ ಪಾತ್ರಗಳನ್ನು ನೀಡಿದ್ದರು.

    MORE
    GALLERIES

  • 77

    Director Kiran Govi: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ, ಹೃದಯಾಘಾತದಿಂದ ನಿರ್ದೇಶಕ ಕಿರಣ್ ಗೋವಿ ನಿಧನ

    ಅನೇಕರನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಿದ ಕೀರ್ತಿ ಕಿರಣ್​ ಅವ್ರಿಗೆ ಸಲ್ಲುತ್ತದೆ.  ಸಣ್ಣ ಪಾತ್ರಗಳಲ್ಲಿ ನಟಿಸುವ ಜೊತೆಗೆ ಸಹಾಯಕ ನಿರ್ದೇಶರಾಗಿಯೂ ಕೆಲಸ ಮಾಡಿದ್ರು. ಸುನಿಲ್ ಪುರಾಣಿಕ್, ಅಕ್ರಂ, ರವಿಕಿರಣ್ ಅವರುಗಳ ಧಾರಾವಾಹಿಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು.

    MORE
    GALLERIES