Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

ತೆಲುಗು ನಟ ನರೇಶ್​ ಹಾಗೂ ನಟಿ ಪವಿತ್ರಾ ಲೋಕೇಶ್ (Pavithra Lokesh) ಸಂಬಂಧದ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿದೆ. ಮತ್ತೆ ಮದುವೆ ಸಿನಿಮಾ ಮೂಲಕ ಸುದ್ದಿಯಲ್ಲಿರುವ ಈ ಪವಿತ್ರಾ ಲೋಕೇಶ್​, ನರೇಶ್​ ಅವರನ್ನು ಕೊಂಡಾಡಿದ್ದಾರೆ

First published:

  • 18

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ಮತ್ತೆ ಮದುವೆ (Malli Pelli) ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತಾಡಿದ ಪವಿತ್ರಾ ಲೋಕೇಶ್ ನಾನು ಹೊಸ ಜೀವನ ಆರಂಭಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಬೇಕು ಅಂತ ಹೇಳಿದ್ರು. ಎಲ್ಲರಿಗೂ ಹೊಸ ಜೀವನ ಆರಂಭಿಸುವ ಅವಕಾಶ ಸಿಗುವುದಿಲ್ಲ ನನಗೆ ಸಿಕ್ಕಿದೆ ಎಂದು ಹೇಳಿದ್ರು,

    MORE
    GALLERIES

  • 28

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ನೂರಾರು ಕನಸುಗಳಿರುತ್ತದೆ. ನನ್ನ ಬದುಕು ಹೀಗೇಬೇಕು, ಮನೆ, ಕಾರು ಒಳ್ಳೆ ಹೆಸರು ಹೀಗೆ ಅನೇಕ ಆಸೆಗಳು ನನಗೂ ಇತ್ತು. ಆದರೆ ನನ್ನ ತಂದೆ ನಾನು ಚಿಕ್ಕವಳಿದ್ದಾಗಲೇ ತೀರಿಕೊಂಡರು. ಆ ಕನಸುಗಳನ್ನು ನನಸು ಮಾಡಿಕೊಳ್ಳಲೆಂದು ನಾನು ಚಿತ್ರರಂಗಕ್ಕೆ ಬಂದೆ .

    MORE
    GALLERIES

  • 38

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ನನ್ನ ಎಲ್ಲಾ ಕನಸುಗಳನ್ನು ನಾನು ಯಾರೊಬ್ಬರ ಸಹಾಯವಿಲ್ಲದೆ ನನಸು ಮಾಡಿಕೊಂಡಿದ್ದೇನೆ. ಕಾರು, ಮನೆ ಎಲ್ಲವನ್ನೂ ಕಟ್ಟಿಕೊಂಡೆ. ನಾನು ಕಟ್ಟಿಕೊಂಡ ಬದುಕನ್ನು ಒಡೆಯುವ ಅಧಿಕಾರವನ್ನು ನಾನು ಯಾರಿಗೂ ಕೊಟ್ಟಿರಲಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ರು.

    MORE
    GALLERIES

  • 48

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ಆದರೆ ಕೆಲವು ದುಷ್ಟ ಶಕ್ತಿಗಳು ನಾನು ಕಟ್ಟಿದ ನನ್ನ ಪ್ರಪಂಚವನ್ನು ನನ್ನ ಅನುಮತಿ ಇಲ್ಲದೆ ಒಡೆದು ಹಾಕಿದ್ರು. ಇದ್ರಿಂದ ನನ್ನ ಜೀವನವೂ ಮುರಿದು ಹೊಯ್ತು. ನಾನು ಸೋತು ಹೋಗಿದ್ದೆ. ಆ ನೆನಪು ನನ್ನನ್ನು ಕಾಡುತ್ತಿದೆ.

    MORE
    GALLERIES

  • 58

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ನಾನು ಸಂಪೂರ್ಣವಾಗಿ ಕುಗ್ಗಿದಾಗ ನನಗೆ ಬೆಂಬಲವಾಗಿ ಒಂದು ಶಕ್ತಿ ನಿಂತಿತ್ತು. ಆ ಶಕ್ತಿಯ ಹೆಸರೇ ನರೇಶ್. ದುಷ್ಟ ಶಕ್ತಿಗಳಿಗೆ ನರೇಶ್ ಬಗ್ಗೆ ತಿಳಿದಿಲ್ಲ. ಈಗ ನಾನು ಹೊಸ ಜೀವನ ಶುರು ಮಾಡಿದ್ದೇನೆ.

    MORE
    GALLERIES

  • 68

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ನನ್ನದ್ದೆಲ್ಲವನ್ನೂ ಮುರಿದು ಹಾಕಿದರೂ ದೇವರು ನನಗಾಗಿ ಹೊಸ ನೆಲವನ್ನು ಕೊಟ್ಟಿದ್ದಾನೆ. ಮತ್ತೆ ಎಲ್ಲವನ್ನೂ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾನೆ ಎಂದು ಹೇಳುತ್ತಾ ಪವಿತ್ರಾ ಲೋಕೇಶ್ ಭಾವುಕರಾದ್ರು ಹಾಕಿದ್ರು.

    MORE
    GALLERIES

  • 78

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ನರೇಶ್ ಒಳ್ಳೆ ಕುಟುಂಬದಿಂದ ಬಂದವರು ಅವರ ತಾಯಿ ವಿಜಯ್ ನಿರ್ಮಲಾ ಅವರು ನರೇಶ್ಗೆ ಒಳ್ಳೆಯ ಸಂಸ್ಕಾರ ನೀಡಿದ್ದಾರೆ. ನನ್ನಂಥಹಾ ಕಷ್ಟದಲ್ಲಿರುವ ಮಹಿಳೆಯನ್ನು ಕಾಪಾಡುವ ಸಂಸ್ಕಾರ, ನನಗೆ ಹೆಚ್ಚು ಹೆಚ್ಚು ಪ್ರೀತಿ ಕೊಡುವ ಸಂಸ್ಕಾರ ನೀಡಿದ್ದಾರೆ.

    MORE
    GALLERIES

  • 88

    Pavithra Lokesh: ದುಷ್ಟರಿಂದ ರಕ್ಷಿಸಿ ಹೊಸ ಬಾಳು ಕೊಟ್ಟ ಮಹಾಪುರುಷ ನರೇಶ್, ಶುರುವಾಗ್ತಿದೆ ಹೊಸ ಬದುಕು ಎಂದ್ರು ಪವಿತ್ರಾ ಲೋಕೇಶ್!

    ನರೇಶ್ ಹಾಗೂ ನಾನು ನಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ಮುಂದಾಗಿದ್ದೇವೆ. ವಿಜಯ್ ಕೃಷ್ಣ ಮೂವೀಸ್ ಅನ್ನು ಮತ್ತೆ ಪ್ರಾರಂಭ ಮಾಡಿದ್ದೇವೆ. ಆ ನಿರ್ಮಾಣ ಸಂಸ್ಥೆಯಿಂದ ಹಲವು ಒಳ್ಳೆಯ ಸಿನಿಮಾಗಳು ಬರಲಿವೆ ಎಂದು ಪವಿತ್ರಾ ಲೋಕೇಶ್ ಹೇಳಿದ್ದಾರೆ.

    MORE
    GALLERIES