ಹೋಟೆಲ್ ಘಟನೆಯಿಂದಾಗಿ ಇವರಿಬ್ಬರ ಬಗ್ಗೆ ವಿವಿಧ ಸುದ್ದಿಗಳು ವೈರಲ್ ಆಗಿವೆ. ಪವಿತ್ರಾ ಲೋಕೇಶ್ ಅವರು ತಮ್ಮ ವಿರುದ್ಧ ಸುಳ್ಳು ಮತ್ತು ಅಶ್ಲೀಲ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪವಿತ್ರಾ ಲೋಕೇಶ್ ಅವರು ನರೇಶ್ ಪತ್ನಿ ರಮ್ಯಾ ರಘುಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ರಮ್ಯಾ ಮತ್ತು ನರೇಶ್ ನಡುವೆ ಕೌಟುಂಬಿಕ ಕಲಹಗಳಿವೆ. ರಮ್ಯಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅನುಚಿತ ಕಾಮೆಂಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ
ಸೂಪರ್ಸ್ಟಾರ್ ಕೃಷ್ಣ ನಿಧನರಾದಾಗ ಪವಿತ್ರ ಹಾಗೂ ನರೇಶ್ ತೀವ್ರವಾಗಿ ನೊಂದುಕೊಂಡಿದ್ದರು. ಅದೇ ಸಮಯಕ್ಕೆ ನರೇಶ್ ಅವರ ಮಾಜಿ ಹೆಂಡತಿ ರಮ್ಯಾ ಅಲ್ಲಿಗೆ ಬಂದಿದ್ದರು. ಇದರಿಂದಾಗಿ ಅಂದು ಪವಿತ್ರಾ ಲೋಕೇಶ್ ಟ್ರೋಲಿಂಗ್ ಹೆಚ್ಚಾಗಿತ್ತು. ಈ ಟ್ರೋಲಿಂಗ್ ಹಿಂದೆ ರಮ್ಯಾ ಕೈವಾಡವಿದೆ ಎಂದು ಪವಿತ್ರಾ ಭಾವಿಸಿದ್ದಾರೆ ಎಂದು ವರದಿಯಾಗಿದೆ. ಹಾಗಾಗಿ ಟ್ರೋಲರ್ಗಳ ವಿರುದ್ಧ ಮಾತ್ರವಲ್ಲದೆ ರಮ್ಯಾ ವಿರುದ್ಧವೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರಂತೆ ಪವಿತ್ರಾ ಲೋಕೇಶ್.