ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Power Star Puneeth Rajkumar) ನಮ್ಮನ್ನು ಅಗಲಿ ಒಂದಷ್ಟು ತಿಂಗಳುಗಳೇ ಕಳೆದಿದೆ. ಆದ್ರೆ ಅವರ ನೆನಪುಗಳು ಮಾತ್ರ ಜನರ ಮನಸ್ಸಿಂದ ಮರೆಯಾಗದೆ ಹಾಗೆ ಉಳಿದಿವೆ. ಇದಕ್ಕೆ ಕಾರಣ ಅವರ ಮೇಲೆ ಅವರ ಅಭಿಮಾನಿಗಳಿಗೆ ಇದ್ದ ಅಪಾರ ಅಭಿಮಾನ. ಅದೇ ರೀತಿ ಮಂಡ್ಯದಲ್ಲೊಬ್ಬ(Mandya) ಅಭಿಮಾನಿ(Fan) ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಶ್ರದ್ಧಾಂಜಲಿಯನ್ನ ವಿಭಿನ್ನವಾಗಿ ಮಾಡಿದ್ದ. ಆ ವಿಭಿನ್ನ ಇಂದು ಮೊಳಕೆಯೊಡೆದು ಪೈರಾಗಿದೆ. ಹೀಗಾಗಿ ಆತನ ಅಭಿಮಾನಕ್ಕೆ ಸುತ್ತಳ್ಳಿ ಜನ್ರು ಭೇಷ್ ಅಂತಿದ್ದಾರೆ. ಹಾಗಾದ್ರೆ ಆತ ಮಾಡಿದ್ದು ಎನೂ ಅಂತ ಯೋಚಿಸ್ತಿದ್ದೀರಾ..? ಇದ್ರ ಕಂಪ್ಲೀಟ್ ವರದಿ ಇಲ್ಲಿದೆ.
ಇನ್ನು ರೈತ ಕಾಳಪ್ಪ ರಾಜು ಮಾತನಾಡಿ, ನಟ ಪುನೀತ್ ರಾಜ್ಕುಮಾರ್ ಅವರು ಅಂದರೆ ನನಗೆ ತುಂಬಾ ಇಷ್ಟ. ಅವರ ನಟನೆಯಿಂದ ನಾನು ಅವರ ಅಭಿಮಾನಿಯಾಗಿದ್ದೆ. ಆದ್ರೆ ಅವರ ಸಾವು ನಮಗೆ ಸಾಕಷ್ಟು ನೋವು ತರಿಸಿದೆ. ಹೀಗಾಗಿ ಅವರ ಶ್ರದ್ಧಾಂಜಲಿಯನ್ನ ನನ್ನ ಜಮೀನಿನಲ್ಲಿ ಭತ್ತದಲ್ಲಿ ಅವರ ಹೆಸರನ್ನು ಬರೆದಿದ್ದೆ. ಇದೀಗ ಆ ಜಾಗದಲ್ಲಿ ಪೈರು ಬೆಳೆದಿದ್ದು, ಸುತ್ತ ಮುತ್ತಲಿನ ಜನರು ಅದನ್ನ ನೋಡಲು ಬರ್ತಿದ್ದಾರೆ ಅಂತಿದ್ದಾರೆ. ಒಟ್ಟಾರೆ ಪುನೀತ್ ರಾಜ್ಕುಮಾರ್ ಎಲ್ಲರನ್ನ ಅಗಲಿದ್ರು ಕೂಡ, ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆ ಉಳಿದಿದ್ದಾರೆ.