Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

ಸದಾ ವಿವಾದದಲ್ಲೇ ಇರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ವಿಷ್ಣವರ್ಧನ್ ಸ್ಮಾರಕ ವಿಚಾರದಲ್ಲಿ ವಿವಾದಕ್ಕೀಡಾಗಿದ್ದಾರೆ. ಅವರು ಯಾವುದೇ ಸರ್ಕಾರಿ ಜಮೀನನ್ನು ಚಲನಚಿತ್ರ ನಟರ ಸ್ಮಾರಕಗಳಿಗೆ ಸರ್ಕಾರಿ ಜಮೀನು ನೀಡುವುದನ್ನು ನಿಲ್ಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ

First published:

  • 18

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ಸದಾ ವಿವಾದದಲ್ಲೇ ಇರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್ ಅಹಿಂಸಾ ವಿಷ್ಣುವರ್ಧನ್ ಸ್ಮಾರಕ ವಿಚಾರದಲ್ಲಿ ವಿವಾದಕ್ಕೀಡಾಗಿದ್ದಾರೆ. ಅವರು ಯಾವುದೇ ಸರ್ಕಾರಿ ಜಮೀನನ್ನು ಚಲನಚಿತ್ರ ನಟರ ಸ್ಮಾರಕಗಳಿಗೆ ಸರ್ಕಾರಿ ಜಮೀನು ನೀಡುವುದನ್ನು ನಿಲ್ಲಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ

    MORE
    GALLERIES

  • 28

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ಚಲನಚಿತ್ರ ನಟರ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ ಮತ್ತು ಸಂಪನ್ಮೂಲ ಬಳಸಬಾರದು. ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸಿಕೊಂಡಿರುವ ಸ್ಟಾರ್​ಗಿರಿಯನ್ನು ತಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    MORE
    GALLERIES

  • 38

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ಸರ್ಕಾರಿ ಜಮೀನಗಳನ್ನು ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯಗಳಿಗೆ ಸ್ಮಾರಕಕ್ಕೆ ನೀಡಿದಂತಹ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ ಎಂದು ಚೇತನ್​ ಸಲಹೆ ನೀಡಿದ್ದಾರೆ.

    MORE
    GALLERIES

  • 48

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕವನ್ನು ಲೋಕಾರ್ಪಣೆ ಮಾಡಲಾಗಿದೆ. ಇದಕ್ಕೆ ಹಾಲಾಳು ಗ್ರಾಮದ 5 ಎಕರೆ ಜಮೀನನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.

    MORE
    GALLERIES

  • 58

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ಡಾ. ವಿಷ್ಣುವರ್ಧನ್ ಪ್ರತಿಷ್ಠಾನ ಹಾಗೂ ವಿಷ್ಣು ಕುಟುಂಬದವರ ಸತತ 13 ವರ್ಷಗಳ ಹೋರಾಟದ ಫಲವಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಐದು ಎಕರೆ ಪ್ರದೇಶದಲ್ಲಿ 3 ಎಕರೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಈ ಸ್ಮಾರಕಕ್ಕೆ ಸುಮಾರು 11 ಕೋಟಿ ರೂ ಖರ್ಚು ಮಾಡಲಾಗಿದೆ.

    MORE
    GALLERIES

  • 68

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕದಲ್ಲಿ ಮ್ಯೂಸಿಯಂ ಇದ್ದು, ಇದರಲ್ಲಿ ಅವರ ಸಿನಿ ಪ್ರಯಾಣದ ಗ್ಯಾಲರಿ, ವಿಷ್ಣು ಅವರ 600ಕ್ಕೂ ಅಧಿಕ ಅಪರೂಪದ ಫೋಟೋಗಳು, ವಿಷ್ಣು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇತ್ಯಾದಿಗಳನ್ನು ಇಡಲಾಗಿದೆ.

    MORE
    GALLERIES

  • 78

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    2013ರಲ್ಲೇ ವಿಷ್ಣು ಸ್ಮಾರಕಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಬಿಎಸ್​ ಯಡಿಯೂರಪ್ಪ ವಿಷ್ಣುವರ್ಧನ್​ ಸ್ಮಾರಕಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದರು. ಇದೀಗ ಬರೋಬ್ಬರಿ 10 ವರ್ಷಗಳ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದಾರೆ.

    MORE
    GALLERIES

  • 88

    Chetan Ahimsa: ವಿಷ್ಣು ಸ್ಮಾರಕದ ಬೆನ್ನಲ್ಲೇ ಚೇತನ್ ಮತ್ತೊಂದು ತಗಾದೆ! ಸಿನಿಮಾ ಸ್ಟಾರ್​ಗಳ ಸ್ಮಾರಕಕ್ಕೆ ಸರ್ಕಾರಿ ಜಾಗ ಬೇಡ ಎಂದ ನಟ!

    ನಟ ಚೇತನ್​ ಅವರು ತಮ್ಮ ಹೇಳಿಕೆಗಳಿಂದ ಆಗಾಗ ಸುದ್ದಿ ಆಗುತ್ತಿದ್ದಾರೆ. ಅವರ ಮಾತುಗಳಿಗೆ ಪರ-ವಿರೋಧ ಚರ್ಚೆ ನಡೆಯುತ್ತಿರುತ್ತದೆ. ಇದೀಗ ಚಲನಚಿತ್ರ ನಟರ ಸ್ಮಾರಕ ವಿಚಾರದಲ್ಲೂ ಅದು ಮುಂದುವರಿದಿದೆ. ಆದರೆ ವಿಷ್ಣುಸ್ಮಾರಕ ಆದ ಬೆನ್ನಲ್ಲೇ ಸ್ಮಾರಕ ವಿಚಾರ ತೆಗೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಚೇತನ್​ ಅವರ ಪರ ಹಾಗೂ ಕೆಲವರು ವಿರೋಧವಾಗಿ ಕಮೆಂಟ್​ ಮಾಡಿದ್ದಾರೆ.

    MORE
    GALLERIES