Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

ನಟ ಕಿಶೋರ್ ಅವರ ಪೋಸ್ಟ್​ಗಳು, ಅವರು ಶೇರ್ ಮಾಡುವಂತಹ ವಿಚಾರಗಳು ಸೂಕ್ಷ್ಮವಾಗಿರುತ್ತವೆ. ಈಗ ಕಾಂತಾರ ನಟ ಕಿಶೋರ್ ಅವರು ವರನಟ ರಾಜ್​ಕುಮಾರ್ ಕುರಿತು ಹಾಕಿದ ಪೋಸ್ಟ್ ವೈರಲ್ ಆಗಿದೆ.

First published:

  • 17

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ಕಾಂತಾರ ನಟ ಕಿಶೋರ್ ಅವರು ಬಹಳಷ್ಟು ಪೋಸ್ಟ್​ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಅವರ ಬಹುತೇಕ ಪೋಸ್ಟ್ ವಿವಾದಗಳಿಗೆ ದಾರಿ ಮಾಡುವಂತೆಯೇ ಇರುತ್ತವೆ.

    MORE
    GALLERIES

  • 27

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ಬಹಳಷ್ಟು ಸೂಕ್ಷ್ಮ ಸಂಗತಿಗಳನ್ನು ತಮ್ಮ ಅಭಿಪ್ರಾಯಗಳೊಂದಿಗೆ ನಟ ಮುಕ್ತವಾಗಿ ಇನ್​ಸ್ಟಾಗ್ರಾಮ್ ಅಥವಾ ಫೇಸ್​ಬುಕ್​ನಲ್ಲಿ ಶೇರ್ ಮಾಡುತ್ತಾರೆ. ಆ ಪೋಸ್ಟ್​ಗಳಿಗೆ ನೆಟ್ಟಿಗರು ಕಮೆಂಟ್ ಮಾಡಿ ತಮ್ಮ ನಿಲುವುಗಳನ್ನೂ ಹೇಳುತ್ತಾರೆ.

    MORE
    GALLERIES

  • 37

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ಇತ್ತೀಚೆಗೆ ನಟ ಕಿಶೋರ್ ಅವರು ನಟ ರಾಜ್​ಕುಮಾರ್ ಅವರು ಚಪ್ಪಲಿ ತೆಗೆದಿಟ್ಟು ಭಕ್ತಿಗೀತೆಯನ್ನು ಹಾಡಿದ ಹಳೆಯ ಫೋಟೋ ಒಂದನ್ನು ಶೇರ್ ಮಾಡಿ ಅದರೊಂದಿಗೆ ಕೆಲವೊಂದು ವಿಚಾರಗಳನ್ನು ಬರೆದಿದ್ದಾರೆ.

    MORE
    GALLERIES

  • 47

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ಇತ್ತೀಚೆಗೆ ಡಾ. ರಾಜ್ ಕುಮಾರ್ ಅವರ ಒಂದು ವಿಡಿಯೋ ಜೊತೆ ಅವರ ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ಸಂಸ್ಕೃತಿಯನ್ನು ಹೊಗಳಿ ನಮ್ಮ ಸಂಸ್ಕೃತಿಯ ವಾರಸುದಾರರು ಹಾಕಿದ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡಿ ನನಗೂ ಬಂತು ಎಂದಿದ್ದಾರೆ ಕಿಶೋರ್.

    MORE
    GALLERIES

  • 57

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ನನಗೆ ಕುತೂಹಲ ಮೂಡಿಸಿದ್ದೇನೆಂದರೆ ಆ ಹಾಡು ಹೇಳಿದ್ದು ಇದಕ್ಕೆ ತದ್ವಿರುದ್ಧ. ಭಕ್ತಿಯಂತೆ ಪೂಜೆಯಂತೆ ಒಂದು ಅರಿಯೆ, ಪಾಪವಂತೆ ಪುಣ್ಯವಂತೆ ಕಾಣೆ, ನಾದವಂತೆ ವೇದವಂತೆ ಒಂದೂ ತಿಳಿಯೆ, ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ. ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ? ಇದರಲ್ಲಿ ಯಾವುದು ಸರಿ? ಎಂದು ಬರೆದಿದ್ದಾರೆ ನಟ ಕಿಶೋರ್.

    MORE
    GALLERIES

  • 67

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ನನ್ನ ಪ್ರಕಾರ ನಾವಿಲ್ಲಿ ನೋಡಬೇಕಾದ್ದು ಅಣ್ಣಾವ್ರ ಚಪ್ಪಲಿಯನ್ನಲ್ಲ. ನಮ್ಮಣ್ಣ ರಾಜಕುಮಾರ ಸಮಾಜದ ಯಾವ ನಂಬಿಕೆ ನಿಲುವುಗಳನ್ನೂ ಸಾರ್ವಜನಿಕವಾಗಿ ಅಲ್ಲಗಳೆಯಲೇ ಇಲ್ಲ. ಅವರಿಗೆ ತನ್ನ ಪ್ರತಿಭೆಯ ಮತ್ತದರ ಸಾಧ್ಯತೆಗಳ ಬಗ್ಗೆ ಇದ್ದ ಅರಿವು ಮತ್ತು ಅದರ ಮೂಲಕ ಮಾತ್ರ ಅವರ ಬಂಡಾಯ ಎಂದಿದ್ದಾರೆ.

    MORE
    GALLERIES

  • 77

    Rajkumar-Kishore: ಚಪ್ಪಲಿ ಬಿಟ್ಟು ದೇವರ ನಾಮ ಹಾಡಿದ ರಾಜ್​ಕುಮಾರ್ ಬಗ್ಗೆ ಕಾಂತಾರ ನಟ ಹೀಗ್ಯಾಕಂದ್ರು?

    ಅದರ ಸೊಗಸು ಏನೆಂದರೆ ಚಪ್ಪಲಿ ಬಿಟ್ಟು ಮಡಿವಂತರನ್ನು ಮೆಚ್ಚಿಸುತ್ತಾ ಅವರನ್ನೂ ಒಳಗೊಳ್ಳುತ್ತಲೇ ಭಕ್ತಿ ಪ್ರೀತಿಯ ನಿಯಮಗಳ ಮುರಿದು ಅವುಗಳ ನಿಜಾರ್ಥ ಹಾಡಿ ಮೆರೆಯುವರು, ಮಡಿವಂತರಲ್ಲೂ ಭಾವ ಬಿಂಬಿಸುವರು. ಹಾಗಾಗಿ ಅಣ್ಣ ಬಿಟ್ಟಿದ್ದು ಚಪ್ಪಲಿಯಲ್ಲ, ಢಂಬಾಚಾರವನ್ನು. ಇದನ್ನೇ ನಾವು ಜಾಣಪದ ಪ್ರತಿಭೆ ಎನ್ನುವುದು. ಅಣ್ಣನೇ ಕಣ್ ಹೊಡೆದಂತೆ ಎಂದು ಕಣ್ ಹೊಡೆಯುವ ಎಮೋಜಿಯನ್ನು ಹಾಕಿದ್ದಾರೆ ಕಿಶೋರ್.

    MORE
    GALLERIES