'ಕನ್ನಡತಿ' ಧಾರಾವಾಹಿ ಮೂಲಕ 'ಭುವಿ' ಆಗಿ ಗಮನ ಸೆಳೆದಿದ್ದ ನಟಿ ರಂಜನಿ ರಾಘವನ್ ಅವರು 'ಸತ್ಯಂ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ. ಹಾಗಾದ್ರೆ 'ಭುವಿ ಟೀಚರ್' ಯಾವ ಪಾತ್ರ ಮಾಡ್ತಿದ್ದಾರೆ?
'ಕನ್ನಡತಿ' ಧಾರಾವಾಹಿ ಮೂಲಕ ಫೇಮಸ್ ಆಗಿರುವ 'ಭುವಿ ಟೀಚರ್'ನ ಮರೆಯೋಕೆ ಆಗುತ್ತಾ? ಹೌದು ಈ ಪಾತ್ರದಲ್ಲಿ ನಟಿಸಿದ್ದ ರಂಜನಿ ರಾಘವನ್ ಅವರು ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.
2/ 8
ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಮುಂದೆ ನಟಿ ಏನ್ ಮಾಡ್ತಾರೆ ಎಂದು ಎಲ್ಲರೂ ಕೇಳ್ತಾ ಇದ್ರು. ಈಗ ಅದಕ್ಕೆ ನಟಿ ಉತ್ತರ ಕೊಟ್ಟಿದ್ದಾರೆ. ರಂಜನಿ ರಾಘವನ್ ಅವರು ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ.
3/ 8
ಕೆಂಪ, ಕರಿಯ 2, ಗಣಪ ನಟಿಸಿದ್ದ ಸಂತೋಷ್ ಬಾಲರಾಜ್ ಸತ್ಯಂ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಬಹಳ ದಿನಗಳ ನಂತರ ಫ್ಯಾಮಿಲಿ ಎಂಟರ್ ಟೈನರ್ ಚಿತ್ರದ ಮೂಲಕ ಮರಳಿದ್ದಾರೆ.
4/ 8
ಈ ಸಿನಿಮಾವನ್ನು ಅಶೋಕ್ ಕಡಬ ಅವರು ನಿರ್ದೇಶನ ಮಾಡ್ತಾ ಇದ್ದಾರೆ. 40 ವರ್ಷಗಳ ಹಿಂದೆ ರಾಜಮನೆತನವೊಂದರಲ್ಲಿ ನಡೆದ ಕಳಂಕದಿಂದಾಗಿ ವಂಶವೇ ಬಲಿಯಾದ ಕಥೆಯೇ ಸತ್ಯಂ.
5/ 8
ಸತ್ಯಂ ಸಿನಿಮಾವನ್ನು ಶ್ರೀಮಾತಾ ಕ್ರಿಯೇಶನ್ಸ್ ಮೂಲಕ ಮಹಂತೇಶ್ ವಿ.ಕೆ. ಅವರು ನಿರ್ಮಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ.
6/ 8
ಇದು ನನ್ನ 6ನೇ ಚಿತ್ರ. ಆಕ್ಷನ್ ಚಿತ್ರಗಳಲ್ಲೇ ನಟಿಸಿದ್ದ ನಾನು ಫ್ಯಾಮಿಲಿ ಮೇಲೆ ನಡೆಯುವ ಕಥೆಯಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕ ಸಂತೋಷ್ ಹೇಳಿದ್ದಾರೆ.
7/ 8
ಇದು ನನ್ನ 4ನೇ ಚಿತ್ರ. ಗೀತಾ ಎಂಬ ಹುಡುಗಿ, ನಾಯಕನ ಜೊತೆ ತುಂಬಾ ಸಲುಗೆಯಿಂದಿರುತ್ತಾಳೆ. ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ರಂಜನಿ ಅವರು ಹೇಳಿದ್ದಾರೆ.
8/ 8
ಅಲ್ಲದೇ ಕೋವಿಡ್ನಿಂದ ಈ ಸಿನಿಮಾ 2 ವರ್ಷ ತಡವಾದರೂ ನಿರ್ಮಾಪಕರು ಈ ಹಂತಕ್ಕೆ ತಂದಿದ್ದಾರೆ ಎಂದು ರಂಜನಿ ರಾಘವನ್ ಅವರು ಹೇಳಿದ್ದಾರೆ.
'ಕನ್ನಡತಿ' ಧಾರಾವಾಹಿ ಮೂಲಕ ಫೇಮಸ್ ಆಗಿರುವ 'ಭುವಿ ಟೀಚರ್'ನ ಮರೆಯೋಕೆ ಆಗುತ್ತಾ? ಹೌದು ಈ ಪಾತ್ರದಲ್ಲಿ ನಟಿಸಿದ್ದ ರಂಜನಿ ರಾಘವನ್ ಅವರು ಅದ್ಭುತ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಮುಂದೆ ನಟಿ ಏನ್ ಮಾಡ್ತಾರೆ ಎಂದು ಎಲ್ಲರೂ ಕೇಳ್ತಾ ಇದ್ರು. ಈಗ ಅದಕ್ಕೆ ನಟಿ ಉತ್ತರ ಕೊಟ್ಟಿದ್ದಾರೆ. ರಂಜನಿ ರಾಘವನ್ ಅವರು ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ.