ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದೆ. ಕಲಾವಿದರೆಲ್ಲಾ ಬಿಡುವಿನಲ್ಲಿದ್ದಾರೆ. ಧಾರಾವಾಹಿಯಲ್ಲಿ ನಟನಾಗಿದ್ದ ಹರ್ಷ ಅಂದ್ರೆ ಕಿರಣ್ ರಾಜ್ ದುಬೈಗೆ ಹೋಗಿದ್ದಾರೆ. ದುಬೈನಲ್ಲಿ ಕಿರಣ್ ರಾಜ್ ಮರುಭೂಮಿಯಲ್ಲಿ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ. ಫೋಟೋಗಳು ಚೆನ್ನಾಗಿ ಮೂಡಿ ಬಂದಿವೆ. ಎಲ್ಲರು ಮೆಚ್ಚಿಕೊಂಡಿದ್ದಾರೆ. ಸೂಪರ್, ಹ್ಯಾಂಡ್ಸಮ್, ಲವ್ಲಿ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ. ಅಲ್ಲದೇ ಹೊಸ ಪ್ರಾಜೆಕ್ಟ್ ನೊಂದಿಗೆ ಬನ್ನಿ. ನಿಮ್ಮ ಫೋನ್ ನಂಬರ್ ಕೊಡಿ ಎಂದು ಕೇಳಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿ ಎಲ್ಲಾ ಪಾತ್ರಗಳು ಜನರ ಗಮನ ಸೆಳೆದಿವೆ. ಹರ್ಷನ ಪಾತ್ರ ಮಾಡಿದ್ದ ಕಿರಣ್ ರಾಜ್ ಸಹ ಜನರಿಗೆ ತುಂಬಾ ಇಷ್ಟ ಆಗಿದ್ದರು. ಕಿರಣ್ ರಾಜ್ ಸಹ ಆ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದರು. ಅಮ್ಮಮ್ಮನ ಮುದ್ದಿನ ಮಗನಾಗಿ, ಭುವಿಯ ಪ್ರೀತಿಯ ಗಂಡನಾಗಿ, ಸ್ವಲ್ಪ ಕೋಪಿಷ್ಠ. ತುಂಬಾ ಕೇರ್ ಮಾಡುವ ವ್ಯಕ್ತಿ ಆಗಿದ್ದರು. ಜೀವನವು ಅನೇಕ ಆಯ್ಕೆಗಳನ್ನು ಒದಗಿಸುತ್ತದೆ, ನಾವು ಮಾಡುವ ಆಯ್ಕೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಕಿರಣ್ ರಾಜ್ ಕೆಲ ದಿನಗಳ ಹಿಂದೆ ಪೋಸ್ಟ್ ಹಾಕಿಕೊಂಡಿದ್ದರು. ಕಿರಣ್ ರಾಜ್ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಹಲವು ಅವಕಾಶಗಳು ಹುಡುಕಿಕೊಂಡು ಬಂದಿದ್ವು. ಈಗ ಪೂರ್ತಿ ತಮ್ಮ ಸಮಯವನ್ನು ಸಿನಿಮಾಗೆ ಮೀಸಲಿಡಲಿದ್ದಾರೆ. ಕಿರಣ್ ರಾಜ್ರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಕಿರಣ್ ಸಿನಿಮಾ ಆದಷ್ಟು ಬೇಗ ಬರಲಿ ಎನ್ನುತ್ತಿದ್ದಾರೆ.