ಪವನ್ ಕಲ್ಯಾಣ್ ಸಣ್ಣ ಜ್ವರದಿಂದ ಬಳಲುತ್ತಿದ್ದರು. ಇದೇ ಹಿನ್ನಲೆ ಅವರು ಇಂದು ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದರು. ಜ್ವರ ಹೊರತಾಗಿ ಅವರು ಎದೆ ನೋವಿನಿಂದ ಕೂಡ ಬಳಲುತ್ತಿದ್ದು, ಹೃದಯತಜ್ಞರು ಅವರ ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಅವರು ಶ್ವಾಸಕೋಶದಲ್ಲಿ ಸೋಂಕು ಕಂಡು ಬಂದಿದೆ. ಈ ಹಿನ್ನಲೆ ಅವರಿಗೆ ಆಂಟಿವೈರಲ್ ಔಷಧಗಳನ್ನು ನೀಡಲಾಗಿದೆ. ಜೊತೆಗೆ ಆಕ್ಸಿಜನ್ ಕೂಡ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪವನ್ ಕಲ್ಯಾಣ್ ಇತ್ತೀಚೆಗಷ್ಟೇ ತಿರುಪತಿಯಲ್ಲಿ ಪಾದಯಾತ್ರೆ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಕಳೆದ ವಾರವಷ್ಟೇ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರ ತೆರೆಕಂಡಿದ್ದು, ಅದ್ಧೂರಿ ಪ್ರದರ್ಶನ ಕಾಣುತ್ತಿದೆ, ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಅವರ ಅಣ್ಣ ಚಿರಂಜೀವಿ ಮತ್ತು ಅಣ್ಣನ ಮಗ ರಾಮ್ ಚರಣ್ ತೇಜ ಅವರ ಚಿಕಿತ್ಸೆ ಏರ್ಪಡಿಗೆ ಮುಂದಾಗಿದ್ದಾರೆ. ಸೋಂಕಿಗೆ ತುತ್ತಾಗುತ್ತಿದ್ದಂತೆ ತಮ್ಮ ಸಂಪರ್ಕಕ್ಕೆ ಒಳಗಾದವರಿಗೆ ಎಚ್ಚರವಹಿಸುವಂತೆ ಜನಾಸೇನಾ ನಾಯಕ ಮನವಿ ಮಾಡಿದ್ದಾರೆ.