14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಖ್ಯಾತ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಆಗಮಿಸಿದ್ದರು. ಇವರು ನಿರ್ದೇಶಕ ರಾಜಮೌಳಿ ಅವರ ತಂದೆ.
2/ 8
ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.ಮೆಟ್ಟಿದರೆ ಕನ್ನಡ ಮಣ್ಣಿನಲ್ಲಿ ಮೆಟ್ಟಬೇಕು. ಆದ್ರೆ ನನಗೆ ಇಲ್ಲಿ ಹುಟ್ಟುವ ಅದೃಷ್ಟ ಇರಲಿಲ್ಲ. ಆದ್ರೆ ನಾನು ಇಲ್ಲೇ ಮದುವೆ ಆಗಿದ್ದು ಎಂದು ಹೇಳಿದ್ದಾರೆ.
3/ 8
ನನ್ನ ಮಗ, ನನ್ನ ಮಗಳು ಇಲ್ಲೇ ಹುಟ್ಟಿದ್ದಾರೆ ಎಂದು ಕನ್ನಡ ನೆಲದ ಬಗ್ಗೆ ಅಭಿಮಾನದಿಂದ ಮಾತನಾಡಿದರು. ನನ್ನ ಮಗ ರಾಜಮೌಳಿ ಸಾಧನೆ ಮಾಡುವುದಕ್ಕೆ ಕನ್ನಡ ತಾಯಿಯ ದಯೆಯೇ ಕಾರಣ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
4/ 8
'ಕನ್ನಡ ತಾಯಿಯ ದಯೆಯಿಂದಲೇ ನನ್ನ ಮಗನಿಗೆ ಎಲ್ಲವೂ ಸಿಕ್ಕಿದೆ. ಕನ್ನಡ ತಾಯಿಗೆ ನಾನು ಹೇಗೆ ಧನ್ಯವಾದ ತಿಳಿಸಲಿ ಎಂದು ಕನ್ನಡದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ರು.
5/ 8
'ನನ್ನ ಮಗನಿಗೆ ಸಿಕ್ಕಿರುವ ಯಶಸ್ಸಿನಂತೆ, ಕನ್ನಡ ನೆಲೆದಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಯಶಸ್ಸು ಸಿಗಲಿ, ಇಲ್ಲಿನ ಪ್ರತಿಯೊಬ್ಬರೂ ಸಾಧನೆ ಮಾಡಲಿ ಅಂತ ನಾನು ಕನ್ನಡ ತಾಯಿಯಲ್ಲಿ ಪ್ರಾರ್ಥನೆ ಮಾಡ್ತೇನೆ' ಎಂದು ವಿಜಯೇಂದ್ರ ಕೈ ಮಗಿದು ತಲೆ ಬಾಗಿದ್ರು.
6/ 8
'ಇಲ್ಲಿಗೆ ಬಂದಿರೋದಕ್ಕೆ ನನಗೆ ತುಂಬಾ ಖುಷಿ ಆಗ್ತಿದೆ. ನನ್ನ ಮಗ ಹುಟ್ಟಿದ ನಾಡಿಗೆ ಬಂದಿದ್ದೇನೆ. ಮತ್ತು ನಾನು 10 ವರ್ಷಗಳ ಕಾಲ ಇದ್ದ ಭೂಮಿಗೆ ಕಾಲಿಟ್ಟಿದ್ದೇನೆ' ಎಂದು ಖುಷಿಯಾಗಿ ಮಾತಾನಾಡಿದ್ರು.
7/ 8
'ಕನ್ನಡ ಚಿತ್ರರಂಗಕ್ಕೆ ಈ ಹಿಂದೆಯೇ ಸಂದಾಯವಾಗಬೇಕಿದ್ದ ಗೌರವ ಈಗ ಸಲ್ಲಿಕೆಯಾಗುತ್ತಿದೆ. ಕೆಜಿಎಫ್ ಚಾಪ್ಟರ್ 1, ಕೆಜಿಎಫ್: ಚಾಪ್ಟರ್ 2, ಕಾಂತಾರ ಸಿನಿಮಾಗಳ ಮೂಲಕ ಕನ್ನಡ ಸಿನಿಮಾರಂಗ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದೆ' ಎಂದರು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
8/ 8
ಜಾನಕಿ ರಾಮುಡು, ಬೊಬ್ಬಿಲಿ ಸಿಂಹಂ, ಸಮರ ಸಿಂಹ ರೆಡ್ಡಿ, ವಿಕ್ರಮಾರ್ಕುಡು, ಮಗಧೀರ, ರೌಡಿ ರಾಥೋರ್, ಭಜರಂಗಿ ಭಾಯ್ಜಾನ್ ಮುಂತಾದ ಸಿನಿಮಾಗಳಿಗೆ ವಿಜಯೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ರಚಿಸಿದ್ದಾರೆ.
First published:
18
Vijayendra Prasad: ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೆಮ್ಮೆಯ ನುಡಿಗಳು!
14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಖ್ಯಾತ ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್ ಆಗಮಿಸಿದ್ದರು. ಇವರು ನಿರ್ದೇಶಕ ರಾಜಮೌಳಿ ಅವರ ತಂದೆ.
Vijayendra Prasad: ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೆಮ್ಮೆಯ ನುಡಿಗಳು!
ಕಾರ್ಯಕ್ರಮದಲ್ಲಿ ವಿಜಯೇಂದ್ರ ಪ್ರಸಾದ್ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು.ಮೆಟ್ಟಿದರೆ ಕನ್ನಡ ಮಣ್ಣಿನಲ್ಲಿ ಮೆಟ್ಟಬೇಕು. ಆದ್ರೆ ನನಗೆ ಇಲ್ಲಿ ಹುಟ್ಟುವ ಅದೃಷ್ಟ ಇರಲಿಲ್ಲ. ಆದ್ರೆ ನಾನು ಇಲ್ಲೇ ಮದುವೆ ಆಗಿದ್ದು ಎಂದು ಹೇಳಿದ್ದಾರೆ.
Vijayendra Prasad: ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೆಮ್ಮೆಯ ನುಡಿಗಳು!
ನನ್ನ ಮಗ, ನನ್ನ ಮಗಳು ಇಲ್ಲೇ ಹುಟ್ಟಿದ್ದಾರೆ ಎಂದು ಕನ್ನಡ ನೆಲದ ಬಗ್ಗೆ ಅಭಿಮಾನದಿಂದ ಮಾತನಾಡಿದರು. ನನ್ನ ಮಗ ರಾಜಮೌಳಿ ಸಾಧನೆ ಮಾಡುವುದಕ್ಕೆ ಕನ್ನಡ ತಾಯಿಯ ದಯೆಯೇ ಕಾರಣ ಎಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.
Vijayendra Prasad: ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೆಮ್ಮೆಯ ನುಡಿಗಳು!
'ನನ್ನ ಮಗನಿಗೆ ಸಿಕ್ಕಿರುವ ಯಶಸ್ಸಿನಂತೆ, ಕನ್ನಡ ನೆಲೆದಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಯಶಸ್ಸು ಸಿಗಲಿ, ಇಲ್ಲಿನ ಪ್ರತಿಯೊಬ್ಬರೂ ಸಾಧನೆ ಮಾಡಲಿ ಅಂತ ನಾನು ಕನ್ನಡ ತಾಯಿಯಲ್ಲಿ ಪ್ರಾರ್ಥನೆ ಮಾಡ್ತೇನೆ' ಎಂದು ವಿಜಯೇಂದ್ರ ಕೈ ಮಗಿದು ತಲೆ ಬಾಗಿದ್ರು.
Vijayendra Prasad: ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೆಮ್ಮೆಯ ನುಡಿಗಳು!
'ಇಲ್ಲಿಗೆ ಬಂದಿರೋದಕ್ಕೆ ನನಗೆ ತುಂಬಾ ಖುಷಿ ಆಗ್ತಿದೆ. ನನ್ನ ಮಗ ಹುಟ್ಟಿದ ನಾಡಿಗೆ ಬಂದಿದ್ದೇನೆ. ಮತ್ತು ನಾನು 10 ವರ್ಷಗಳ ಕಾಲ ಇದ್ದ ಭೂಮಿಗೆ ಕಾಲಿಟ್ಟಿದ್ದೇನೆ' ಎಂದು ಖುಷಿಯಾಗಿ ಮಾತಾನಾಡಿದ್ರು.
Vijayendra Prasad: ಮಗನ ಸಾಧನೆಗೆ ಕನ್ನಡ ತಾಯಿಯೇ ಕಾರಣ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಹೆಮ್ಮೆಯ ನುಡಿಗಳು!
'ಕನ್ನಡ ಚಿತ್ರರಂಗಕ್ಕೆ ಈ ಹಿಂದೆಯೇ ಸಂದಾಯವಾಗಬೇಕಿದ್ದ ಗೌರವ ಈಗ ಸಲ್ಲಿಕೆಯಾಗುತ್ತಿದೆ. ಕೆಜಿಎಫ್ ಚಾಪ್ಟರ್ 1, ಕೆಜಿಎಫ್: ಚಾಪ್ಟರ್ 2, ಕಾಂತಾರ ಸಿನಿಮಾಗಳ ಮೂಲಕ ಕನ್ನಡ ಸಿನಿಮಾರಂಗ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯುತ್ತಿದೆ' ಎಂದರು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ.