Darhsan: ವನ್ಯಜೀವಿಗಳನ್ನು ಉಳಿಸಿ ಎಂದು ಮನವಿ ಮಾಡಿದ ನಟ ದರ್ಶನ್..!
World Wildlife Day 2021: ವನ್ಯಜೀವಿಗಳು ಹಾಗೂ ಕಾಡಿನ ರಕ್ಷಣೆ ವಿಷಯದಲ್ಲಿ ಸದಾ ಮುಂದಿರುವ ನಟ ದರ್ಶನ್ ಈಗ ಮತ್ತೊಮ್ಮೆ ವನ್ಯಜೀವಿಗಳ ರಕ್ಷಣೆಗಾಗಿ ಮನವಿ ಮಾಡಿದ್ದಾರೆ. ಅಭಿಮಾನಿಗಳಲ್ಲಿ ಮನವಿ ಮಾಡಿರುವ ದರ್ಶನ್ ತಾವೇ ತೆಗೆದ ಕೆಲವು ವನ್ಯಜೀವಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ದರ್ಶನ್ ಟ್ವಿಟರ್ ಖಾತೆ)
ಪ್ರಾಣಿ-ಪಕ್ಷಿಗಳು ಎಂದರೆ ದರ್ಶನ್ ಅವರಿಗೆ ಎಷ್ಟು ಪ್ರೀತಿ ಹಾಗೂ ಕಾಳಜಿ ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಹೇಳುವಂತಿಲ್ಲ. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರು ಸದಾ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ವಿಷಯವಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ.
2/ 8
ಇಂದು ವಿಶ್ವ ವನ್ಯಜೀವಿ ದಿನ. ಅದರ ಅಂಗವಾಗಿ ಅಭಿಮಾನಿಗಳಿಗೆ ವಿಶ್ ಮಾಡಿರುವ ದರ್ಶನ್ ವನ್ಯಜೀವಿಗಳನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ.
3/ 8
ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ, ನಿಮಗೆ ಕಾಳಜಿಯನ್ನು ತೋರಿಸುತ್ತದೆ. ಅಪರಿಚಿತರಾಗಬೇಡಿ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
4/ 8
ಪ್ರಾಣಿಗಳನ್ನು ಉಳಿಸಿ ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗ. ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ ಇದು ಎಂದು ಮನವಿ ಮಾಡಿದ್ದಾರೆ.
5/ 8
ಜೊತೆಗೆ ತಾವು ತೆಗೆದ ಕೆಲವು ವನ್ಯಜೀವಿಗಳ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
6/ 8
ದರ್ಶನ್ ತೆಗೆದಿರುವ ಹುಲಿಯ ಫೋಟೋ
7/ 8
ದರ್ಶನ್ ತೆಗೆದಿರುವ ಆನೆಯ ಫೋಟೋ
8/ 8
ದರ್ಶನ್ ತೆಗೆದಿರುವ ಚಿರತೆಯ ಫೋಟೋ
First published:
18
Darhsan: ವನ್ಯಜೀವಿಗಳನ್ನು ಉಳಿಸಿ ಎಂದು ಮನವಿ ಮಾಡಿದ ನಟ ದರ್ಶನ್..!
ಪ್ರಾಣಿ-ಪಕ್ಷಿಗಳು ಎಂದರೆ ದರ್ಶನ್ ಅವರಿಗೆ ಎಷ್ಟು ಪ್ರೀತಿ ಹಾಗೂ ಕಾಳಜಿ ಎನ್ನುವುದರ ಬಗ್ಗೆ ಪ್ರತ್ಯೇಕವಾಗಿ ಹೇಳುವಂತಿಲ್ಲ. ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರು ಸದಾ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ವಿಷಯವಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ.