ಕೆಂಡಸಂಪಿಗೆ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದಾಗಿನಿಂದ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಧಾರಾವಾಹಿಯನ್ನು ಈಗಾಗಲೇ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬೇರೆಯವರ ಜೊತೆ ಮದುವೆ ಆಗ ಬೇಕಿದ್ದ ಸುಮನಾ ಕಾರ್ಪೊರೇಟರ್ ತೀರ್ಥಂಕರ್ ಜೊತೆ ಮದುವೆ ಆಗಿದ್ದಾರೆ. ಸುಮನಾ ವಿಚಾರವಾಗಿ ತೀರ್ಥಂಕರ್ ಮನೆಯಲ್ಲಿ ಜಗಳವಾಗುತ್ತಲೇ ಇದೆ. ಅತ್ತೆ ಪದ್ಮಾ ಮಾತ್ರ ಸುಮನಾಳನ್ನು ಸೊಸೆ ಎಂದು ಒಪ್ಪಿಕೊಂಡಿದ್ದಾಳೆ. ಸುಮನಾ ಹೂವು ಮಾರುವ ಹುಡುಗಿ, ಇಷ್ಟು ದೊಡ್ಡ ಮನೆಯಲ್ಲಿ ಹೇಗಿರಬೇಕು ಎಂದು ಗೊತ್ತಿಲ್ಲ ಎಂದು ಎಲ್ಲರೂ ಬೈಯುತ್ತಲೇ ಇರುತ್ತಾರೆ. ಸುಮನಾ ಹಳೇ ಚೂಡಿದಾರ್ ಗಳನ್ನು ಮಾತ್ರ ಹಾಕ್ತಾಳೆ. ಧಾರಾವಾಹಿಯಲ್ಲಿ ಸುಮನಾ ಲುಕ್ ಚೇಂಜ್ ಆಗಿದೆ. ಸೀರೆ ಉಡುತ್ತಿದ್ದಾಳೆ. ಸೀರೆಯಲ್ಲಿ ಸುಮನಾ ಸುಂದರವಾಗಿ ಕಾಣ್ತ ಇದ್ದಾರೆ. ಚೆಂದವಾಗಿ ರೆಡಿಯಾಗುತ್ತಿದ್ದಾರೆ. ತೀರ್ಥ ಸುಮನಾಳನ್ನು ಮದುವೆ ಆಗಿರುವುದೇ ವೋಟಿಗಾಗಿ. ಆದ್ರೆ ಈಗ ಸುಮನಾ ಗುಣ ಇಷ್ಟ ಆಗಿದೆ. ಅಲ್ಲದೇ ಸುಮನಾ ನೋಟವೂ ಸಹ ಪತಿಯನ್ನು ಸೆಳೆಯುತ್ತಿದೆ. ತೀರ್ಥ ಅತ್ತಿಗೆ ಸುಮನಾಳಿಗೆ ಕಾಟ ಕೊಡುತ್ತಿದ್ದಾಳೆ. ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಪ್ರಯತ್ನ ಪಡ್ತಾ ಇದ್ದಾಳೆ. ಆದ್ರೆ ಸುಮನಾ ಅದ್ಯಾವುದಕ್ಕೂ ಬಗ್ಗುತ್ತಿಲ್ಲ. ಸದ್ಯ ಸೀರಿಯಲ್ ಚೆನ್ನಾಗಿ ಓಡ್ತಾ ಇದೆ. ಈಗ ಸುಮನಾ ಲುಕ್ ಸಹ ಜನರಿಗೆ ಇಷ್ಟವಾಗಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಕೆಂಡಸಂಪಿಗೆ ಸೀರಿಯಲ್ ನೋಡಬೇಕು.