Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

'ಕನ್ಯಾಕುಮಾರಿ' ಖ್ಯಾತಿಯ ನಟ ಯಶವಂತ್ ಗೌಡ ತೆಲುಗಿನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. 22 ಅವಕಾಶಗಳನ್ನು ರಿಜೆಕ್ಟ್ ಮಾಡಿ 23ನೇ ಅವಕಾಶದ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ!

First published:

  • 18

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ ಧಾರಾವಾಹಿಯ ನಟ ಚರಣ್ ಅಂದ್ರೆ ಯಶವಂತ್ ಗೌಡ ಈಗ ತೆಲುಗಿನಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಧಾರಾವಾಹಿ ಮುಗಿದ ಕಾರಣ ತೆಲುಗಿನತ್ತ ಮುಖ ಮಾಡಿದ್ದಾರೆ.

    MORE
    GALLERIES

  • 28

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ಕನ್ಯಾಕುಮಾರಿಯಲ್ಲಿ ಕನ್ನಿಕಾಳ ಪ್ರೀತಿಯ ಗಂಡನಾಗಿ, ಬಡವರ ಮನೆಯಲ್ಲಿದ್ರೂ ಸ್ವಾಭಿಮಾನ ಬಿಡದ ಹುಡುಗನಾಡಿದ್ದ, ಅದಕ್ಕೆ ಕನ್ನಡಿಗರ ಮನಸ್ಸು ಕದ್ದಿದ್ದ. ಯಶವಂತ್ ಮುಗ್ಧ ಅಭಿನಯ ಎಲ್ಲರಿಗೂ ಇಷ್ಟವಾಗಿತ್ತು.

    MORE
    GALLERIES

  • 38

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ಕನ್ಯಾಕುಮಾರಿ ಧಾರಾವಾಹಿ ಯಶವಂತ್ ಗೌಡಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು. ಇದರಿಂದ ಬೇರೆ ಬೇರೆ ಭಾಷೆಯಲ್ಲಿ ನಟಿಸಲು ಅವಕಾಶ ಸಿಕ್ಕಿದೆ.

    MORE
    GALLERIES

  • 48

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ಬಿಗ್ ಬಾಸ್ ಸೀಸನ್ 09ನ್ನು ಪ್ರಸಾರ ಮಾಡಲು, ಕಲರ್ಸ್ ಕನ್ನಡದ ಕೆಲವು ಧಾರಾವಾಹಿಗಳು ತಮ್ಮ ಪ್ರಯಾಣ ಮುಗಿಸಿದ್ವು. ಅದರಲ್ಲಿ ಕನ್ಯಾಕುಮಾರಿ ಧಾರಾವಾಹಿ ಸಹ ಒಂದು

    MORE
    GALLERIES

  • 58

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ಯಶವಂತ್ ಗೌಡ ತೆಲುಗಿನ ಅಮ್ಮಾಯಿಗಾರು ಅನ್ನೋ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಾಯಕಿಯಾಗಿ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರಧಾರಿ ನಿಶಾ ರವಿಕೃಷ್ಣನ್ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 68

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ತೆಲುಗು ಕಿರುತೆರೆಯಿಂದ ಯಶವಂತ್‍ಗೆ ಬಂದ 22 ಅವಕಾಶಗಳನ್ನು ಬೇಡ ಅಂದಿದ್ರಂತೆ. ಈ ಧಾರಾವಾಹಿ 23 ನೇ ಆಫರ್. ಕನ್ಯಾಕುಮಾರಿಯಲ್ಲಿ ನಟಿಸುತ್ತಿದ್ದಾಗ, ಬೇರೆ ಅವಕಾಶಗಳು ದೊರೆತಿದ್ವು. ಆದ್ರೆ ನಾನು ಬೇಡ ಎಂದಿದ್ದೆ ಎಂದು ಯಶವಂತ್ ಹೇಳಿದ್ದಾರೆ.

    MORE
    GALLERIES

  • 78

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ಕನ್ಯಾಕುಮಾರಿ ನನ್ನ ಮೊದಲ ಧಾರಾವಾಹಿ. ಕನ್ನಡ ಧಾರಾವಾಹಿಯಲ್ಲಿ ಬ್ಯುಸಿ ಇದ್ದ ಕಾರಣ ಆ ಆಫರ್ ಗಳನ್ನು ಒಪ್ಪಿಲ್ಲ. ಕನ್ಯಾಕುಮಾರಿ ಮುಗಿದ ಮೇಲೆ ಅಮ್ಮಾಯಿಗಾರು ಧಾರಾವಾಹಿಗೆ ಒಪ್ಪಿದೆ ಎಂದು ಯಶವಂತ್ ಹೇಳಿದ್ದಾರೆ.

    MORE
    GALLERIES

  • 88

    Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?

    ನನಗೆ ತೆಲುಗು ಭಾಷೆ ಬರಲ್ಲ. ಇನ್ನೂ ತೆಲುಗು ಕಲಿಯಬೇಕು. ಹಾಗಾಗಿ ಸವಾಲಿನ ಕೆಲಸವಾಗಿದೆ. ಶೀಘ್ರದಲ್ಲೇ ತೆಲುಗು ಕಲಿಯುತ್ತೇನೆ ಎಂದು ನಟ ಯಶವಂತ್ ಗೌಡ ಹೇಳಿದ್ದಾರೆ.

    MORE
    GALLERIES