ಆಂಧ್ರಪ್ರದೇಶ ಪ್ರವಾಸೋದ್ಯಮ ಸಚಿವೆ ಆರ್ಕೆ ರೋಜಾ ಅವರು ರಜನೀಕಾಂತ್ ಅವರನ್ನು ಜೀರೋ ಎಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ನಟಿಯ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಸೂಪರ್ಸ್ಟಾರ್ ರಜನಿ ಅಭಿಮಾನಿಗಳು ನಟಿ ಬಗ್ಗೆ ಕಿಡಿ ಕಾರಿದ್ದಾರೆ.
2/ 8
ನಟಿ ಹಾಗೂ ರಾಜಕಾರಣಿ ರೋಜಾ ಅವರು ಪುದುಚೇರಿಯಲ್ಲಿ ತಿರುಕಂಚಿ ಗಂಗೈ ವರದರಾಜು ನದೀಶ್ವರರ್ ಪುಷ್ಕರಣಿ ಆಚರಣೆಯಲ್ಲಿ ಭಾಗವಹಿಸಲು ಬಂದಿದ್ದರು. ಇದು 12 ವರ್ಷಗಳಿಗೊಮ್ಮೆ ನಡೆಯುವ ಆಚರಣೆ.
3/ 8
ನಂದಮೂರಿ ತಾರಕ ರಾಮ ರಾವ್ ಇವೆಂಟ್ನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಜನೀಕಾಂತ್ ಹೊಗಳಿದ ಬಗ್ಗೆ ರೋಜಾ ಮಾತನಾಡಿದ್ದಾರೆ. ರಜನೀಕಾಂತ್ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿರುವಾಗ ಅವರು ರಾಜಕೀಯದ ಬಗ್ಗೆ ಮಾತು ಕೂಡಾ ಆಡಬಾರದು ಎಂದಿದ್ದಾರೆ ರೋಜಾ.
4/ 8
ಎನ್ಟಿಆರ್ ಅವರು ನಮ್ಮಂತೆಯೇ ಒಬ್ಬ ಕಲಾವಿದ. ಅವರನ್ನು ದೇವರಂತೆ ಕಾಣುತ್ತಾರೆ. ನೀವು ಕೃಷ್ಣನನ್ನು ನೋಡಬೇಕಾದರೆ ನಾವು ಕೃಷ್ಣನನ್ನು ಎನ್ಟಿಆರ್ನಲ್ಲಿ ಕಾಣುತ್ತೇವೆ. ಹಾಗಾಗಿ ಅವರು ಹೇಗೆ ಮೃತಪಟ್ಟರು, ಅವರ ಪಕ್ಷವನ್ನು ಬೇರೆಯವರು ಒಯ್ದರು ಎನ್ನುವುದು ರಜನೀಕಾಂತ್ ಅವರಿಗೆ ಗೊತ್ತು ಎಂದಿದ್ದಾರೆ.
5/ 8
ತೆಲುಗು ಮಂದಿ ರಜನೀಕಾಂತ್ ಅವರನ್ನು ಒಬ್ಬ ಸೂಪರ್ಸ್ಟಾರ್ ಆಗಿ ಕಾಣುತ್ತಾರೆ. ಆದರೆ ಅವರ ಭಾಷಣದ ನಂತರ ಎಲ್ಲರೂ ಅವರ ಬಗ್ಗೆ ಸಿಟ್ಟಾಗಿದ್ದಾರೆ. ಎನ್ಟಿಆರ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಚಂದ್ರ ಬಾಬು ನಾಯ್ಡು ಅವರನ್ನು ರಜನಿ ಹೊಗಳಿದ್ದಾರೆ. ಎನ್ಟಿಆರ್ ಅವರನ್ನು ಸ್ವರ್ಗದಿಂದ ಆಶಿರ್ವದಿಸುತ್ತಾರೆ ಎಂದಿದ್ದು ತಪ್ಪು ಎಂದಿದ್ದಾರೆ ರೋಜಾ.
6/ 8
ನಾವು ರಜನೀಕಾಂತ್ ಅವರನ್ನು ಬೇರೆ ಲೆವೆಲ್ನಲ್ಲಿಟ್ಟಿದ್ದೆವು. ಆದರೆ ಅವರು ಈಗ ಝೀರೋ ಆದರು. ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿಯ ರಾಜಕೀಯದ ಬಗ್ಗೆ ಕಮೆಂಟ್ ಮಾಡುವ ಮೊದಲು ಅಲ್ಲಿನ ರಾಜಕೀಯ ತಿಳಿದುಕೊಳ್ಳಿ ಎಂದು ರೋಜಾ ಕಿಡಿ ಕಾರಿದ್ದಾರೆ.
7/ 8
ನಾನು ಅವರು ಕ್ಷಮೆ ಕೇಳಬೇಕೆಂದು ಬಯಸುವುದಿಲ್ಲ. ಯಾಕೆಂದರೆ ಅವರು ಪಾಲಿಟಿಕ್ಸ್ಗೆ ಎಂಟ್ರಿ ಕೊಡುವುದಿಲ್ಲ. ಆಂಧ್ರಪ್ರದೇಶಕ್ಕೂ ಹೆಚ್ಚು ಬರುವುದಿಲ್ಲ. ಗೊತ್ತಿದ್ದೋ ಇಲ್ಲದೆಯೋ ಅವರು ಮಾತನಾಡಿದ್ದಾರೆ. ಹಾಗಾಗಿ ಒಂದು ಹೇಳಿಕೆ ಬಿಡುಗಡೆ ಮಾಡಬೇಕು ಎಂದಿದ್ದಾರೆ ನಟಿ.
8/ 8
ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವವರಿದ್ದರು. ಆದರೆ ನಂತರ ತಮ್ಮ ಆರೋಗ್ಯ ಸ್ಥಿತಿಯಿಂದಾಗಿ ಪಕ್ಷವನ್ನು ಘೋಷಿಸಲಿಲ್ಲ. ಬದಲಾಗಿ ಸಿನಿಮಾಗಳಲ್ಲಿಯೇ ಆ್ಯಕ್ಟಿವ್ ಆದರು.
First published:
18
Rajinikanth: ಸೂಪರ್ಸ್ಟಾರ್ ರಜನೀಕಾಂತ್ ಜೀರೋ ಎಂದ ನಟಿ
ಆಂಧ್ರಪ್ರದೇಶ ಪ್ರವಾಸೋದ್ಯಮ ಸಚಿವೆ ಆರ್ಕೆ ರೋಜಾ ಅವರು ರಜನೀಕಾಂತ್ ಅವರನ್ನು ಜೀರೋ ಎಂದು ವಿವಾದ ಮೈಮೇಲೆಳೆದುಕೊಂಡಿದ್ದಾರೆ. ನಟಿಯ ಹೇಳಿಕೆ ಬಗ್ಗೆ ಭಾರೀ ವಿರೋಧ ವ್ಯಕ್ತವಾಗಿದ್ದು ಸೂಪರ್ಸ್ಟಾರ್ ರಜನಿ ಅಭಿಮಾನಿಗಳು ನಟಿ ಬಗ್ಗೆ ಕಿಡಿ ಕಾರಿದ್ದಾರೆ.
ನಂದಮೂರಿ ತಾರಕ ರಾಮ ರಾವ್ ಇವೆಂಟ್ನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ರಜನೀಕಾಂತ್ ಹೊಗಳಿದ ಬಗ್ಗೆ ರೋಜಾ ಮಾತನಾಡಿದ್ದಾರೆ. ರಜನೀಕಾಂತ್ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿರುವಾಗ ಅವರು ರಾಜಕೀಯದ ಬಗ್ಗೆ ಮಾತು ಕೂಡಾ ಆಡಬಾರದು ಎಂದಿದ್ದಾರೆ ರೋಜಾ.
ಎನ್ಟಿಆರ್ ಅವರು ನಮ್ಮಂತೆಯೇ ಒಬ್ಬ ಕಲಾವಿದ. ಅವರನ್ನು ದೇವರಂತೆ ಕಾಣುತ್ತಾರೆ. ನೀವು ಕೃಷ್ಣನನ್ನು ನೋಡಬೇಕಾದರೆ ನಾವು ಕೃಷ್ಣನನ್ನು ಎನ್ಟಿಆರ್ನಲ್ಲಿ ಕಾಣುತ್ತೇವೆ. ಹಾಗಾಗಿ ಅವರು ಹೇಗೆ ಮೃತಪಟ್ಟರು, ಅವರ ಪಕ್ಷವನ್ನು ಬೇರೆಯವರು ಒಯ್ದರು ಎನ್ನುವುದು ರಜನೀಕಾಂತ್ ಅವರಿಗೆ ಗೊತ್ತು ಎಂದಿದ್ದಾರೆ.
ತೆಲುಗು ಮಂದಿ ರಜನೀಕಾಂತ್ ಅವರನ್ನು ಒಬ್ಬ ಸೂಪರ್ಸ್ಟಾರ್ ಆಗಿ ಕಾಣುತ್ತಾರೆ. ಆದರೆ ಅವರ ಭಾಷಣದ ನಂತರ ಎಲ್ಲರೂ ಅವರ ಬಗ್ಗೆ ಸಿಟ್ಟಾಗಿದ್ದಾರೆ. ಎನ್ಟಿಆರ್ ಅವರನ್ನು ಕೊಲ್ಲಲು ಪ್ರಯತ್ನಿಸಿದ ಚಂದ್ರ ಬಾಬು ನಾಯ್ಡು ಅವರನ್ನು ರಜನಿ ಹೊಗಳಿದ್ದಾರೆ. ಎನ್ಟಿಆರ್ ಅವರನ್ನು ಸ್ವರ್ಗದಿಂದ ಆಶಿರ್ವದಿಸುತ್ತಾರೆ ಎಂದಿದ್ದು ತಪ್ಪು ಎಂದಿದ್ದಾರೆ ರೋಜಾ.
ನಾವು ರಜನೀಕಾಂತ್ ಅವರನ್ನು ಬೇರೆ ಲೆವೆಲ್ನಲ್ಲಿಟ್ಟಿದ್ದೆವು. ಆದರೆ ಅವರು ಈಗ ಝೀರೋ ಆದರು. ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿಯ ರಾಜಕೀಯದ ಬಗ್ಗೆ ಕಮೆಂಟ್ ಮಾಡುವ ಮೊದಲು ಅಲ್ಲಿನ ರಾಜಕೀಯ ತಿಳಿದುಕೊಳ್ಳಿ ಎಂದು ರೋಜಾ ಕಿಡಿ ಕಾರಿದ್ದಾರೆ.
ನಾನು ಅವರು ಕ್ಷಮೆ ಕೇಳಬೇಕೆಂದು ಬಯಸುವುದಿಲ್ಲ. ಯಾಕೆಂದರೆ ಅವರು ಪಾಲಿಟಿಕ್ಸ್ಗೆ ಎಂಟ್ರಿ ಕೊಡುವುದಿಲ್ಲ. ಆಂಧ್ರಪ್ರದೇಶಕ್ಕೂ ಹೆಚ್ಚು ಬರುವುದಿಲ್ಲ. ಗೊತ್ತಿದ್ದೋ ಇಲ್ಲದೆಯೋ ಅವರು ಮಾತನಾಡಿದ್ದಾರೆ. ಹಾಗಾಗಿ ಒಂದು ಹೇಳಿಕೆ ಬಿಡುಗಡೆ ಮಾಡಬೇಕು ಎಂದಿದ್ದಾರೆ ನಟಿ.
ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವವರಿದ್ದರು. ಆದರೆ ನಂತರ ತಮ್ಮ ಆರೋಗ್ಯ ಸ್ಥಿತಿಯಿಂದಾಗಿ ಪಕ್ಷವನ್ನು ಘೋಷಿಸಲಿಲ್ಲ. ಬದಲಾಗಿ ಸಿನಿಮಾಗಳಲ್ಲಿಯೇ ಆ್ಯಕ್ಟಿವ್ ಆದರು.