ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

First published:

  • 114

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಸ್ಯಾಂಡಲ್​ವುಡ್​ನ ಹಾಸ್ಯ ನಟ ಬುಲೆಟ್ ಪ್ರಕಾಶ್ ಅಗಲಿ ದಿನಗಳು ಕಳೆದಿವೆ. ನಟನ ಸಾವಿನ ಸುದ್ದಿ ಕೇಳಿ ಅಪಾರ ಅಭಿಮಾನಿಗಳು ದುಃಖಿತರಾಗಿದ್ದರು. ಅದರಲ್ಲೂ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ನಟನನ್ನು ಕೊನೆಯ ಬಾರಿ ನೋಡುವ ಅಭಿಮಾನಿಗಳ ಕನಸಿಗೆ ಕೊರೋನಾ ಲಾಕ್​ಡೌನ್ ಕೊಳ್ಳಿ ಇಟ್ಟಿತ್ತು.

    MORE
    GALLERIES

  • 214

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಚಿತ್ರರಂಗದಲ್ಲಿ ಅಪಾರ ಕನಸು ಕಟ್ಟಿಕೊಂಡಿದ್ದ ಹಾಸ್ಯ ನಟನ ಕೆಲವೊಂದು ಕನಸುಗಳು ಈಡೇರದೇ ಹೋಗಿರುವುದು ಮಾತ್ರ ವಿಪರ್ಯಾಸ. ಇದರ ಹೊರತಾಗಿಯೂ ಬುಲೆಟ್ ಪ್ರಕಾಶ್ ಎಂಬ ನಟ ತಮ್ಮ ಪಾತ್ರಗಳ ಮೂಲಕ ಎಂದಿಗೂ ಅಜರಾಮರರಾಗಿ ಉಳಿಯಲಿದ್ದಾರೆ ಎಂಬುದು ಅಷ್ಟೇ ದಿಟ.

    MORE
    GALLERIES

  • 314

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಬುಲೆಟ್​ ಅವರಿಗೆ ಮಗ ರಕ್ಷಕ್​ನನ್ನು ಚಿತ್ರರಂಗಕ್ಕೆ ಹೀರೋ ಆಗಿ ಲಾಂಚ್ ಮಾಡಬೇಕೆಂಬ ಬಹುದೊಡ್ಡ ಕನಸಿತ್ತು. ಆದರೆ ತಂದೆಯ ಅಗಲಿಕೆಯಿಂದ ಇದೀಗ ಆ ಕನಸನ್ನು ಈಡೇರಿಸಬೇಕೆಂಬ ಛಲದಲ್ಲಿದ್ದಾರೆ ರಕ್ಷಕ್.

    MORE
    GALLERIES

  • 414

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಬುಲೆಟ್ ಪ್ರಕಾಶ್ ಅವರ ಮಗ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ತಂದೆಯ ಸಾವಿನ ಕುರಿತಾದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 514

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ರಕ್ಷಕ್​ಗೆ ತಂದೆಯ ಸಾವಿನ ಸುದ್ದಿ ಮೊದಲೇ ಗೊತ್ತಿತ್ತು. ಅದು ಕೂಡ 18 ದಿನಗಳ ಹಿಂದೆಯೇ ಮಾಹಿತಿಯಿತ್ತು. ಆದರೂ ಎಲ್ಲೋ ಒಂದು ಅಪ್ಪ ಸಾವನ್ನು ಗೆದ್ದು ಬರುತ್ತಾರೆ ಎಂಬ ಆಸೆಯಲ್ಲಿದ್ದರು.

    MORE
    GALLERIES

  • 614

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಬುಲೆಟ್ ಪ್ರಕಾಶ್ ಮತ್ತು ಅವರ ಕುಟುಂಬ ಅರ್ಜುನ್ ಗುರುಗಳನ್ನು ಅಪಾರವಾಗಿ ನಂಬುತ್ತಿದ್ದರು. ಹೀಗಾಗಿ ತಂದೆಯ ಅನಾರೋಗ್ಯದ ಬಗ್ಗೆ ಅವರಲ್ಲಿ ಹೇಳಿದ್ರಂತೆ.

    MORE
    GALLERIES

  • 714

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಮಾರ್ಚ್ 19ರಂದು ಅಪ್ಪನಿಗೆ ಅನಾರೋಗ್ಯದ ಸಮಸ್ಯೆ ಮಿತಿ ಮೀರಿತ್ತು. ನಾನು ಅರ್ಜುನ್ ಗುರುಗಳಿಗೆ ವಿಡಿಯೋ ಕಾಲ್ ಮಾಡಿ ವಿಷಯ ತಿಳಿಸಿದೆ. ಈ ಸಂದರ್ಭದಲ್ಲಿ ಗುರುಗಳು ಕೊಬ್ಬರಿ ಎಣ್ಣೆ ಡಬ್ಬ, ತಾಯತ ಕೊಟ್ಟು ಕಳಿಸುತ್ತೇನೆ. ಏನೂ ಆಗಲ್ಲ ಎಂದು ಅಪ್ಪನನ್ನು ಸಮಾಧಾನ ಪಡಿಸಿದರು.

    MORE
    GALLERIES

  • 814

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಆ ಬಳಿಕ ನನಗೆ ಕರೆ ಮಾಡಿದ ಗುರುಗಳು ಒಂದು ಕಡೆ ಬರುವಂತೆ ಹೇಳಿದ್ದರು. ಈ ವೇಳೆ ತಂದೆಯ ಸಾವಿನ ಸುದ್ದಿಯನ್ನು ಅವರು ನನಗೆ ಹೇಳಿದ್ದರು ಎಂದು ರಕ್ಷಕ್ ಹೇಳಿದ್ದಾರೆ.

    MORE
    GALLERIES

  • 914

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ನಿಮ್ಮ ಅಪ್ಪ ಇಂದಿನಿಂದ ಕೇವಲ 18 ದಿನಗಳು ಮಾತ್ರ ಬದುಕುತ್ತಾರೆ. ಅಪ್ಪನನ್ನು ಚೆನ್ನಾಗಿ ನೋಡಿಕೋ. ಆಮೇಲೆ ಅದು ಸಾಧ್ಯವಾಗುವುದಿಲ್ಲ. ಏನೂ ಮಾಡೋಕೆ ಆಗೊಲ್ಲ. ನಮ್ಮ ಕೈಲಾದ ಪ್ರಯತ್ನ ನಾವು ಮಾಡಿದ್ದೇವೆ. ಇನ್ನುಳಿದಿರುವುದು ದೇವರಿಗೆ ಬಿಟ್ಟಿದ್ದು. ಈ ವಿಷಯ ಯಾರಿಗೂ ಹೇಳಬೇಡ. ನಿನ್ನ ಮನಸಲ್ಲೇ ಇಟ್ಟುಕೊ ಎಂದು ಗುರುಗಳು ತಿಳಿಸಿದ್ದರು.

    MORE
    GALLERIES

  • 1014

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಅಂದು ಗುರುಗಳು ಹೇಳಿದ ಮಾತು ಕೇಳಿ ನನಗೆ ತುಂಬಾ ಬೇಜಾರಾಯ್ತು. ಪ್ರತಿ ಬಾರಿ ಕೂಡ ಅವರು ಏನೂ ಆಗಲ್ಲ, 10-15 ವರ್ಷ ಬದುಕುತ್ತಾರೆ. ನಾವೆಲ್ಲ ಇದ್ದೀವಲ್ಲಾ ಎಂದೇ ಹೇಳುತ್ತಿದ್ದರು. ಇದಕ್ಕಿದ್ದಂತೆ ಅಪ್ಪ ಇರುವುದಿಲ್ಲ. ಇನ್ನು ಕೇವಲ 18 ದಿನಗಳು ಮಾತ್ರ. ಇದನ್ನು ಪುಸ್ತಕದಲ್ಲಿ ಬೇಕಾದರೆ ಬರೆದಿಟ್ಟುಕೊ ಎಂದಾಗ ಏನು ಹೇಳುವುದು? ಎಂದು ರಕ್ಷಕ್ ನೋವು ತೋಡಿಕೊಂಡರು.

    MORE
    GALLERIES

  • 1114

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಗುರುಗಳ ಹಾಗೆ ಹೇಳಿದ ದಿನ ಗುಡುಗು ಸಹಿತ ಭಾರೀ ಮಳೆಯಾಗಿತ್ತು. ಅಪ್ಪ ತೀರಿಕೊಂಡಾಗಲೂ ಅಷ್ಟೇ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸುತ್ತಮುತ್ತ ಗುಡುಗು ಸಹಿತ ಮಳೆಯಾಗಿತ್ತು. ಗುರುಗಳು ಹೇಳಿರುವುದು ಎಲ್ಲವೂ ನಿಜವಾಗಿದೆ. ಏನೂ ಮಾಡೋಕೆ ಆಗಲ್ಲ ಎಂದು ತಂದೆಯನ್ನು ನೆನದು ರಕ್ಷಕ್ ಭಾವುಕರಾದರು.

    MORE
    GALLERIES

  • 1214

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ತಂದೆಯ ಸಾವಿನ ಸುದ್ದಿ 18 ದಿನ ಮೊದಲೇ ಗೊತ್ತಿದ್ದರಿಂದ ನನ್ನಲ್ಲಿ ತಳಮಳ ಶುರುವಾಗಿತ್ತು. ದಿನ ಕಳೆದಂತೆ ಅಪ್ಪನ ಆರೋಗ್ಯ ಕ್ಷೀಣಿಸುತ್ತಿದ್ದರಿಂದ ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ. ಆದರೆ ಗುರುಗಳು ಹೇಳಿದ 18 ದಿನಗಳ ಸಂಗತಿಯನ್ನು ನಾನೊಬ್ಬನೇ ನುಂಗಿಕೊಂಡಿದ್ದೆ. ಆದರೂ ಎಲ್ಲೋ ಒಂದು ಕಡೆ ಅಪ್ಪ ಸಾವು ಗೆದ್ದು ಬರಲಿದ್ದಾರೆ ಎಂದೇ ನಂಬಿದ್ದೆ ಎಂದು ರಕ್ಷಕ್ ಹೇಳಿದರು.

    MORE
    GALLERIES

  • 1314

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಆದರೆ ಗುರುಗಳು ನೀಡಿರುವುದು 18ನೇ ದಿನ ಸಂಜೆ 4.45 ನಿಮಿಷ. ಆ ಸಮಯದಲ್ಲಿ ಗಾಳಿ ಸಹಿತ ಮಳೆ ಬರಲಾರಂಭಿಸಿತು. ಅದಾಗಲೇ ನನ್ನಲ್ಲೂ ಸಾವಿನ ಭಯ ಆವರಿಸಲಾರಂಭಿಸಿತು. ವಿಧಿಯಾಟ ಗುರುಗಳು ಹೇಳಿದಂತೆ ನಮ್ಮೆಲ್ಲರನ್ನು ಬಿಟ್ಟು ತಂದೆ ಹೋದರು ಎಂದು ಬುಲೆಟ್ ಪ್ರಕಾಶ್ ಅವರ ಮಗ ಭಾವುಕರಾದರು.

    MORE
    GALLERIES

  • 1414

    ತಂದೆಯ ಸಾವಿನ ಕುರಿತಾದ ಆಘಾತಕಾರಿ ವಿಷಯ ಬಿಚ್ಚಿಟ್ಟ ಬುಲೆಟ್ ಪ್ರಕಾಶ್ ಮಗ..!

    ಸದ್ಯ ನನ್ನ ಮುಂದಿರುವುದು ಅಪ್ಪನ ಕನಸು ನನಸು ಮಾಡಬೇಕೆಂಬ ಗುರಿ. ತಂದೆಗೆ ನಾನು ಹೀರೋ ಆಗಿ ನನ್ನ ಕಟೌಟ್ ನೋಡಬೇಕು ಎಂಬ ಆಸೆಯಿತ್ತು. ಕೊನೆಯ ಉಸಿರು ಬಿಡುವಾಗ ನಿನ್ನ ಕಟೌಟ್ ನೋಡಬೇಕು, ಹಾಗೆಯೇ ಅಕ್ಕನ ಮದುವೆ ನೋಡಬೇಕು ಎಂದಿದ್ದರು. ಅವರ ಆ ಕನಸಗಳನ್ನು ಈಡೇರಿಸಲು ನಾನು ಪ್ರಯತ್ನಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ರಕ್ಷಕ್.

    MORE
    GALLERIES