Bigg Boss Kannada Season 8: ಅರವಿಂದ್-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!
Bigg Boss 8-Araviya: ಬಿಗ್ ಬಾಸ್ ಸೀಸನ್ 8ರ ಜೋಡಿ ಹಕ್ಕಿ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರು ಸಾಮಾಜಿಕ ಜಾಲತಾಣದಲ್ಲಿ ಅರ್ವಿಯಾ ಎಂದೇ ಖ್ಯಾತರಾಗಿದ್ದಾರೆ. ಈ ಜೋಡಿಯ ಸ್ನೇಹದಲ್ಲಿ ಈಗ ಕೊಂಚ ಬಿರುಕುಂಟಾಗಿದೆ. ಹೌದು, ಇವರಿಬ್ಬರ ನಡುವಿನ ಮನಸ್ತಾಪಕ್ಕೆ ಕಾರಣವಾಯ್ತಾ ಆ ಒಂದು ಮಾತು. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ ಪಿ ಅವರ ನಡುವೆ ಪುಟ್ಟದೊಂದು ಮನಸ್ತಾಪವಾಗಿದೆ.
2/ 8
ದಿವ್ಯಾ ಉರುಡುಗ ಅವರ ಆರೋಗ್ಯದಲ್ಲಿ ಏರುಪೇರಾದಾಗಲೆಲ್ಲ ಅರವಿಂದ್ ತುಂಬಾ ಕಾಳಜಿ ಮಾಡುತ್ತಾರೆ.
3/ 8
ದಿವ್ಯಾ ಉರುಡುಗ ಅವರ ಊಟ, ಔಷಧಿ ಸೇರಿದಂತೆ ಇತರೆ ಕೆಲಸಗಳ ಬಗ್ಗೆ ಅರವಿಂದ್ ಸದಾ ನೆನಪಿಸುತ್ತಾ ಮಗುವಿನಂತೆ ಆರೈಕೆ ಮಾಡುತ್ತಿರುತ್ತಾರೆ.
4/ 8
ಇನ್ನು ದಿವ್ಯಾ ಉರುಡುಗ ಸಹ ಯಾವುದೇ ವಿಷಯವಾದರೂ ಅರವಿಂದ್ ಅವರ ಮಾತನ್ನು ತಳ್ಳಿ ಹಾಕುವುದಿಲ್ಲ.
5/ 8
ಇದೇ ಕಾರಣದಿಂದಾಗಿ ದಿವ್ಯಾ ಉರುಡುಗ ಅವರು ಅರವಿಂದ್ ಅವರ ಮೇಲೆ ತುಂಬಾ ಅವಲಂಬಿತರಾಗಿದ್ದಾರೆ ಎಂದು ಮನೆಯ ಕೆಲ ಸದಸ್ಯರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ.
6/ 8
ಹೀಗಿರುವಾಗಲೇ ದಿವ್ಯಾ ಉರುಡುಗ ಅವರು ಅರವಿಂದ್ ಅವರ ಮಾತಿಗೆ ಎದುರು ಮಾತನಾಡಿದ್ದಾರೆ. ಟಾಸ್ಕ್ ವಿಷಯದಲ್ಲಿ ತಾನು ಬಿಟ್ಟುಕೊಡುವುದಿಲ್ಲ. ಬೇಕಾದರೆ ಇಲ್ಲಿ ಬಂದು ನಿಂತುಕೊಂಡು ಆಡಲಿ ಎನ್ನುತ್ತಾರೆ ದಿವ್ಯಾ ಉರುಡುಗ. ಈ ಮಾತಿನಿಂದ ಅರವಿಂಧ್ ಬೇಸರಗೊಂಡಿದ್ದಾರೆ.
7/ 8
ದಿವ್ಯಾ ಉರುಡುಗ ಹೋಗಿ ಅರವಿಂದ್ ಅವರ ಬಳಿ ಮಾತನಾಡಿಸುವ ಪ್ರಯತ್ನ ಮಾಡಿದರೂ, ಅರವಿಂದ್ ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ.
8/ 8
ನನ್ನನ್ನು ಮಾತನಾಡಿಸಲು ಇಷ್ಟ ಇಲ್ಲವಾ ಎಂದು ದಿವ್ಯಾ ಕೇಳಿದಾಗ, ಅರವಿಂದ್ ಸದ್ಯಕ್ಕೆ ಇಲ್ಲ ಎಂದಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದ್ದು, ಮುಂದೇನಾಗಲಿದೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.
First published:
18
Bigg Boss Kannada Season 8: ಅರವಿಂದ್-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ ಪಿ ಅವರ ನಡುವೆ ಪುಟ್ಟದೊಂದು ಮನಸ್ತಾಪವಾಗಿದೆ.
Bigg Boss Kannada Season 8: ಅರವಿಂದ್-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!
ಹೀಗಿರುವಾಗಲೇ ದಿವ್ಯಾ ಉರುಡುಗ ಅವರು ಅರವಿಂದ್ ಅವರ ಮಾತಿಗೆ ಎದುರು ಮಾತನಾಡಿದ್ದಾರೆ. ಟಾಸ್ಕ್ ವಿಷಯದಲ್ಲಿ ತಾನು ಬಿಟ್ಟುಕೊಡುವುದಿಲ್ಲ. ಬೇಕಾದರೆ ಇಲ್ಲಿ ಬಂದು ನಿಂತುಕೊಂಡು ಆಡಲಿ ಎನ್ನುತ್ತಾರೆ ದಿವ್ಯಾ ಉರುಡುಗ. ಈ ಮಾತಿನಿಂದ ಅರವಿಂಧ್ ಬೇಸರಗೊಂಡಿದ್ದಾರೆ.
Bigg Boss Kannada Season 8: ಅರವಿಂದ್-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!
ನನ್ನನ್ನು ಮಾತನಾಡಿಸಲು ಇಷ್ಟ ಇಲ್ಲವಾ ಎಂದು ದಿವ್ಯಾ ಕೇಳಿದಾಗ, ಅರವಿಂದ್ ಸದ್ಯಕ್ಕೆ ಇಲ್ಲ ಎಂದಿದ್ದಾರೆ. ಇದರ ಪ್ರೋಮೋ ರಿಲೀಸ್ ಆಗಿದ್ದು, ಮುಂದೇನಾಗಲಿದೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ.