ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ನಟಿ ದೀಪಿಕಾ ದಾಸ್ ಟ್ರಿಪ್ ಮೇಲೆ ಟ್ರಿಪ್ ಮಾಡ್ತಾ ಇದ್ದಾರೆ. ದುಬೈ ಟ್ರಿಪ್ ಮುಗಿಸಿ ಬಂದ ದೀಪಿಕಾ ದಾಸ್ ಉತ್ತರಾಖಂಡ್ ನಲ್ಲಿದ್ದಾರೆ. ಅಲ್ಲಿಂದ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದು ಶೂಟಿಂಗ್ ಟ್ರಿಪ್ ಎಂದಿದ್ದಾರೆ. ದೀಪಿಕಾ ದಾಸ್ ನೇಚರ್ ಲವ್ವರ್ ಅಂತೆ. ಅವರಿಗೆ ಪ್ರವಾಸ ಮಾಡುವುದು ತುಂಬಾ ಇಷ್ಟ ಅಂತೆ. ಅದಕ್ಕೆ ಆಗಾಗ ಪ್ರವಾಸಗಳಿಗೆ ಹೋಗಿ ಅಲ್ಲಿ ನೇಚರ್ ಎಂಜಾಯ್ ಮಾಡ್ತಾರೆ. ನಿನ್ನೆಯಷ್ಟೇ ದೀಪಿಕಾ ದಾಸ್ ಅವರು ಶಿವರಾತ್ರಿಗೆ ವಿಶೇಷ ಫೋಟೋಗಳನ್ನು ಶೇರ್ ಮಾಡಿ ಶಿವರಾತ್ರಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದರು. ವೈಟ್ ಸೀರೆಯಲ್ಲಿ ಚೆಂದವಾಗಿ ರೆಡಿ ಆಗಿ, ಶಿವಲಿಂಗುಗೆ ಪೂಜೆ ಸಲ್ಲಿಸುವ ರೀತಿ ಪೂಜಾ ಬುಟ್ಟಿ ಹಿಡಿದು ನಿಂತಿದ್ದಾರೆ. ಈ ಫೋಟೋಗಳಿಗೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕಳೆದ ವಾರವಷ್ಟೇ ದೀಪಿಕಾ ದಾಸ್ ದುಬೈ ಟ್ರಿಪ್ ಗೆ ಹೋಗಿದ್ದರು. ದುಬೈ ಟ್ರಿಪ್ ನಿಂದ ವಾಪಸ್ ಬಂದ ಮೇಲೆ ಉತ್ತರಾಖಂಡ್ಗೆ ಹೋಗಿದ್ದಾರೆ. ನೀವು ಬಲಶಾಲಿಯಾಗಲು ಬಯಸಿದರೆ, ಏಕಾಂಗಿಯಾಗಿ ಹೇಗೆ ಹೋರಾಡಬೇಕೆಂದು ಕಲಿಯಿರಿ. ಯಾರು ಏನು ಹೇಳಲಿ ತಲೆ ಕಡೆಸಿಕೊಳ್ಳಬೇಡಿ ಎಂದು ದೀಪಿಕಾ ದಾಸ್ ಹೇಳಿದ್ದರು. ನೀವು ಇಷ್ಟ ಪಟ್ಟಂತೆ ಬದುಕಿ. ಇದು ದೀಪಿಕಾ ದಾಸ್ ಅವರ ಸಂದೇಶ. ಅವರು ಸಹ ಅದೇ ರೀತಿ ಬದುಕುತ್ತಿದ್ದಾರಂತೆ.