ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ದೀಪಿಕಾ ದಾಸ್ ದುಬೈ ಟ್ರಿಪ್ ಎಂಜಾಯ್ ಮಾಡಿ ವಾಪಸ್ ಆಗಿದ್ದಾರೆ. ವಿಮಾನ ನಿಲ್ದಾಣದಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಪ್ರವಾಸವನ್ನು ಖುಷಿಯಿಂದ ಎಂಜಾಯ್ ಮಾಡಿದ್ದಾರೆ. ಟ್ರಿಪ್ ಹೇಗಿತ್ತು ಎಂದು ಅಭಿಮಾನಿಗಳು ಕೇಳಿದ್ದಾರೆ. ನೀವು ಬಲಶಾಲಿಯಾಗಲು ಬಯಸಿದರೆ, ಏಕಾಂಗಿಯಾಗಿ ಹೇಗೆ ಹೋರಾಡಬೇಕೆಂದು ಕಲಿಯಿರಿ. ಯಾರು ಏನು ಹೇಳಲಿ ತಲೆ ಕಡೆಸಿಕೊಳ್ಳಬೇಡಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ನಿನ್ನೆ ತಾನೇ ನೀವು ಇಷ್ಟ ಪಟ್ಟಂತೆ ಬದುಕಿ ಎನ್ನುವ ಸಂದೇಶದ ಜೊತೆಗೆ ದೀಪಿಕಾ ದಾಸ್ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್ ಟಾಪ್ 3 ನಲ್ಲಿ ಇದ್ದರು. ತಮ್ಮ ಅದ್ಭುತವಾದ ನಟನೆ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 07 ರಲ್ಲಿ ಶೈನ್ ಶೆಟ್ಟಿ ಜೊತೆ ತುಂಬಾ ಆತ್ಮೀಯರಾಗಿದ್ದರು. ಇಬ್ಬರ ನಡುವೆ ಪ್ರೀತಿ ಇದೆ. ಮದುವೆ ಆಗ್ತಾರೆ ಎನ್ನುವ ಸುದ್ದಿ ಹರಿದಾಡ್ತಾ ಇದೆ. ದೀಪಿಕಾ ದಾಸ್ ಕೆಲ ದಿನಗಳ ಹಿಂದೆ ದೊಡ್ಡದೇನೋ ಆಗಲು ಸಮಯ ಬೇಕಾಗುತ್ತದೆ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದು ಏನಿರಬಹುದು ಎಂದು ಅಭಿಮಾನಿಗಳು ಕಾಯ್ತಾ ಇದ್ದಾರೆ. ದೀಪಿಕಾ ದಾಸ್ ಮುಂದೆ ಏನ್ ಮಾಡ್ತಾರೆ? ಸಿನಿಮಾನಾ, ಧಾರಾವಾಹಿನಾ ಎಂದು ಕೇಳುತ್ತಿದ್ದಾರೆ ಅಭಿಮಾನಿಗಳು. ದೀಪಿಕಾ ಅವರನ್ನು ತೆರೆ ಮೇಲೆ ನೋಡಲು ಕಾಯ್ತಾ ಇದ್ದೇವೆ ಎಂದು ಹೇಳಿದ್ದಾರೆ.