Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

Nandamuri Balakrishna: 23 ದಿನಗಳ ಕಾಲ ಸಾವು ಬದುಕಿನ ಜೊತೆ ಹೋರಾಡಿ ಮರಳಿ ಬಾರದ ಲೋಕಕ್ಕೆ ಹೋಗಿದ್ದ ತಾರಕರತ್ನ ಅವರ ನೆನಪುಗಳಿಂದ ತೀವ್ರ ನೊಂದಿದ್ದ ಬಾಲಕೃಷ್ಣ ಇತ್ತೀಚೆಗಷ್ಟೇ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಮನೆಯಲ್ಲಿ ಆಗಿರುವ ಕಷ್ಟ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಬಾಲಯ್ಯ ಮಹತ್ವದ ಕೆಲಸಕ್ಕೆ ಕೈ ಹಾಕಿದ್ದಾರೆ.

First published:

  • 18

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ನಂದಮೂರಿ ತಾರಕರತ್ನ ಅವರ ನಿಧನಕ್ಕೆ ಇಡೀ ಚಿತ್ರರಂಗವೇ ಸಂತಾಪ ವ್ಯಕ್ತಪಡಿಸಿದೆ. ನಂದಮೂರಿ ಕುಟುಂಬ ಹಾಗೂ ಅಶೇಷ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ತಾರಕರತ್ನ ಅವರ ಸಾವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

    MORE
    GALLERIES

  • 28

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ಹೃದಯಾಘಾತದಿಂದ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿದ್ದ ತಾರಕರತ್ನ ಅವರು ಸುಮಾರು 23 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆದು ಇಹಲೋಕ ತ್ಯಜಿಸಿದ್ದಾರೆ. ಬಳಿಕ ಅವರ ಮೃತದೇಹವನ್ನು ಮೋಕಿಲದಲ್ಲಿರುವ ಅವರ ನಿವಾಸಕ್ಕೆ ಸ್ಥಳಾಂತರಿಸಲಾಯಿತು. ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಸಿನಿಮಾ ತಾರೆಯರು, ಅಭಿಮಾನಿಗಳು ಆಗಮಿಸಿದ್ದರು.

    MORE
    GALLERIES

  • 38

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ತಾರಕರತ್ನ ವಿಧಿವಶರಾದ ಸುದ್ದಿ ತಿಳಿದ ನಂದಮೂರಿ ಬಾಲಕೃಷ್ಣ ತೀವ್ರ ದುಃಖಿತರಾಗಿದ್ದಾರೆ. ತಾರಕರತ್ನ ಅವರ ತಂದೆ ಬಾಲಕೃಷ್ಣ ಅವರು ಆಸ್ಪತ್ರೆಯಲ್ಲಿ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದರು. ಎಲ್ಲವನ್ನೂ ನೋಡಿಕೊಂಡರು.

    MORE
    GALLERIES

  • 48

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    23 ದಿನಗಳ ಕಾಲ ಸಾವಿನೊಂದಿಗೆ ಹೋರಾಡಿ ಮರಳಿ ಬಾರದ ಲೋಕಕ್ಕೆ ಹೋಗಿದ್ದ ತಾರಕರತ್ನ ಅವರ ನೆನಪುಗಳಿಂದ ತೀವ್ರ ನೊಂದುಕೊಂಡಿದ್ದ ಬಾಲಕೃಷ್ಣ ಇತ್ತೀಚೆಗಷ್ಟೇ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಮನೆಯಲ್ಲಿ ಆಗಿರುವ ಕಷ್ಟ ಯಾರಿಗೂ ಬರಬಾರದು ಎಂಬ ಉದ್ದೇಶದಿಂದ ಬಾಲಯ್ಯ ಮಹತ್ತರ ಕೆಲಸಕ್ಕೆ ಕೈ ಹಾಕಿದ್ದಾರೆ.

    MORE
    GALLERIES

  • 58

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ಅವರು ಹಿಂದೂಪುರಂನಲ್ಲಿ ನಿರ್ಮಿಸಿದ ಆಸ್ಪತ್ರೆಯ ಎಚ್ ಬ್ಲಾಕ್‌ಗೆ ತಾರಕರತ್ನ ಎಂದು ಹೆಸರಿಡಲು ನಿರ್ಧರಿಸಿದ್ದಾರೆ. ತಾರಕರತ್ನ ಹೆಸರಿನಲ್ಲಿ ಬಡವರಿಗೆ ಹೃದಯ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇದಕ್ಕಾಗಿ 30 ಲಕ್ಷ ಮೌಲ್ಯದ ಶಸ್ತ್ರಚಿಕಿತ್ಸಾ ಉಪಕರಣಗಳನ್ನೂ ತರಲಾಗಿದೆ.

    MORE
    GALLERIES

  • 68

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ವಿದೇಶದಿಂದ ಬೃಹತ್ ಉಪಕರಣಗಳನ್ನು ತಂದಿರುವ ಬಾಲಕೃಷ್ಣ ಬಡವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಹೊರಟಿದ್ದಾರೆ. ಇದಲ್ಲದೇ ಮಕ್ಕಳಿಗೆ ಮೂರು ತಿಂಗಳ ಕಾಲ ಉಚಿತ ಊಟ, ಅಗತ್ಯ ಔಷಧಗಳನ್ನು ನೀಡಲು ನಿರ್ಧರಿಸಿದ್ದಾರೆ. ತಾವು ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿಂದೂಪುರಂನ ಜನರು ಹಾಗೂ ಉಭಯ ರಾಜ್ಯಗಳ ಜನರು ಈ ಸೇವೆಗಳನ್ನು ಬಳಸಿಕೊಳ್ಳುವಂತೆ ಯೋಜನೆ ರೂಪಿಸಿದ್ದಾರೆ.

    MORE
    GALLERIES

  • 78

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ಬಡವರಿಗಾಗಿ ಬಾಲಕೃಷ್ಣ ಇಂಥದ್ದೊಂದು ಮಹತ್ತರ ನಿರ್ಧಾರ ಕೈಗೊಂಡಿದ್ದಾರೆ ಎಂದು ನಂದಮೂರಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆಯಂತೆ.

    MORE
    GALLERIES

  • 88

    Balakrishna: ತಾರಕ ರತ್ನ ನೆನಪಿನಲ್ಲಿ ಬಾಲಯ್ಯ ಮಹತ್ವದ ಘೋಷಣೆ!

    ರಾಜಕೀಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನಂದಮೂರಿ ತಾರಕರತ್ನ ಕುಪ್ಪಂನಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಿ ನಂತರ ಬೆಂಗಳೂರು ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಲಾಯಿತು. ಅಂದಿನಿಂದ ಚಿಕಿತ್ಸೆ ಮುಂದುವರಿದಿತ್ತು. ಆದರೆ ಕೊನೆಗೂ ತಾರಕರತ್ನ ಮರಳಿ ಬಾರದ ಲೋಕಕ್ಕೆ ಹೋದರು.

    MORE
    GALLERIES