Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

Adipurush Controversy: ರಾಮಾಯಣ ಆಧಾರಿತ ಆಧಿಪುರುಷ ಸಿನಿಮಾವನ್ನು ಅದ್ದೂರಿ ಬಜೆಟ್​ನಲ್ಲಿ ತಯಾರಿಸಲಾಗ್ತಿದೆ. ಇದೀಗ ಆದಿಪುರುಷ ಚಿತ್ರ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಸಿನಿಮಾದ ಪೋಸ್ಟರ್ ನಿಂದಾಗಿ ಮತ್ತೆ ವಿವಾದ ಮುನ್ನೆಲೆಗೆ ಬಂದಿದೆ.

First published:

  • 18

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಟಾಲಿವುಡ್​ ರೆಬೆಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳು ಆದಿಪುರುಷ ಗ್ರ್ಯಾಂಡ್ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಚಿತ್ರದ ಪ್ರಚಾರದತ್ತ ಗಮನ ಹರಿಸಿರುವ ನಿರ್ಮಾಪಕರು ಕಾಲಕಾಲಕ್ಕೆ ಸಿನಿಮಾ ಬಗ್ಗೆ ರೋಚಕ ಅಪ್ಡೇಟ್​ಗಳನ್ನು ರಿಲೀಸ್ ಮಾಡುತ್ತಿದ್ದಾರೆ. ಇದರಿಂದ ಸಿನಿಮಾ ಬಗ್ಗೆ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೊಂದೆಡೆ ಹಲವು ವಿವಾದಗಳು ಆದಿಪುರುಷನನ್ನು ಸುತ್ತಿಕೊಂಡಿದೆ.

    MORE
    GALLERIES

  • 28

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ರಾಮಾಯಣ ಆಧಾರಿತ ಈ ಸಿನಿಮಾ ಬಗ್ಗೆ ಪ್ರಭಾಸ್ ಅಭಿಮಾನಿಗಳು ಭಾರೀ ನಿರೀಕ್ಷೆ ಹೊಂದಿದ್ದಾರೆ. ಆದಿಪುರುಷ ಚಿತ್ರದ ಟೀಸರ್ ಬಿಡುಗಡೆಯಾದಾಗ ಟಾಲಿವುಡ್ ರೆಬೆಲ್ ಸ್ಟಾರ್ ಅಭಿಮಾನಿಗಳು ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಕೆಲವರು ಆದಿಪುರುಷ ಟೀಸರ್ ಅನ್ನು ಕಾರ್ಟೂನ್ ವಿಡಿಯೋಗೆ ಹೋಲಿಸಿ ಟ್ರೋಲ್ ಮಾಡಿದ್ರು.

    MORE
    GALLERIES

  • 38

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಮತ್ತೊಂದೆಡೆ ಟೀಸರ್​ನಲ್ಲಿ ತೋರಿಸಿರುವ ಕೆಲವು ದೃಶ್ಯಗಳ ಬಗ್ಗೆ ಕೂಡ ವಿರೋಧ ವ್ಯಕ್ತವಾಗಿತ್ತು. ಅದೇ ಸಮಯದಲ್ಲಿ, ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅವರು ಈ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದರು. ಶ್ರೀರಾಮ, ಹನುಮಂತ ಮತ್ತು ರಾವಣನನ್ನು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಹೇಳಿಕೆ ನೀಡಿದ್ದರು.

    MORE
    GALLERIES

  • 48

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಶ್ರೀರಾಮ, ಹನುಮಂತ, ರಾವಣನ ಪಾತ್ರಗಳು ಹಿಂದೂ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದು, ಆ ಪಾತ್ರಗಳನ್ನು ರಾಮಾಯಣದಲ್ಲಿರುವಂತೆ ತೋರಿಸದೆ ವಿರೂಪಗೊಳಿಸಲಾಗುತ್ತಿದೆ ಎಂದು ಅರ್ಚಕ ಸತ್ಯೇಂದ್ರ ದಾಸ್ ಹೇಳಿದ್ರು. ಈ ಚಿತ್ರವನ್ನು ತಕ್ಷಣವೇ ಬ್ಯಾನ್ ಮಾಡಬೇಕೆಂದು ಹೇಳಿದ್ರು.

    MORE
    GALLERIES

  • 58

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಇದೀಗ ಆದಿಪುರುಷ ಚಿತ್ರ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಪ್ರತೀಕ್ ಎಂಬುವರು ಸಿನಿಮಾ ತಂಡದ ವಿರುದ್ಧ ದೂರು ನೀಡಿದ್ದಾರೆ. ಪ್ರತೀಕ್ ಒಬ್ಬ ಕಾನ್ಸೆಪ್ಟ್ ಆರ್ಟಿಸ್ಟ್ ಮತ್ತು ಡಿಸೈನರ್ ಆಗಿದ್ದು, ಆದಿಪುರುಷ ತಂಡ ಅವರ ವಿನ್ಯಾಸ ಮತ್ತು ರೇಖಾಚಿತ್ರಗಳನ್ನು ನಕಲು ಮಾಡಿದೆ ಎಂದು ಆರೋಪಿಸಿದ್ದಾರೆ.  ಇದು ಹೊಸ ವಿವಾದಕ್ಕೆ ಕಾರಣವಾಗಿದೆ.

    MORE
    GALLERIES

  • 68

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಕಲಾವಿದ ಪ್ರತೀಕ್ ತಮ್ಮ ಕಲ್ಪನೆಯಲ್ಲಿ ಶ್ರೀರಾಮನ ಹೊಸ ವಿನ್ಯಾಸವನ್ನು ರಚಿಸಿದ್ದಾರೆ. ಆದರೆ ಆದಿಪುರುಷ ತಂಡದಲ್ಲಿ ಕೆಲಸ ಮಾಡುವ ಕಲಾವಿದ ಟಿ.ಪಿ ವಿಜಯನ್ ಈ ಫೋಟೋಗಳನ್ನು ಕಾಪಿ ಮಾಡಿ ಆದಿಪುರುಷ ಪೋಸ್ಟರ್​ಗಳನ್ನು ಬಿಟ್ಟಿದ್ದಾರೆ ಎಂದು ಪ್ರತೀಕ್ ಆರೋಪಿಸಿದ್ದಾರೆ.

    MORE
    GALLERIES

  • 78

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನದಲ್ಲಿ ಈ ಅದ್ಧೂರಿ ಸಿನಿಮಾ ತಯಾರಾಗುತ್ತಿದೆ. 400 ಕೋಟಿ ರೂ. ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿವೆ. ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಕೃತಿ ಸನನ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್, ದೇವದತ್ತ ನಾಗೆ, ಸನ್ನಿ ಸಿಂಗ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 88

    Prabhas: ಮತ್ತೊಂದು ಸಂಕಷ್ಟದಲ್ಲಿ 'ಆದಿಪುರುಷ'! ನಟ ಪ್ರಭಾಸ್​ಗೆ ಶಾಕ್ ಮೇಲೆ ಶಾಕ್

    ಗ್ರ್ಯಾಂಡ್ ವಿಶುವಲ್ ಎಫೆಕ್ಟ್​ನೊಂದಿಗೆ ಮುಂದಿನ ವರ್ಷ ಜನವರಿ 12 ರಂದು ಚಿತ್ರ ಬಿಡುಗಡೆಯಾಗಲಿದೆ. ಆದಿಪುರುಷನ ರೂಪದಲ್ಲಿ ಬರುತ್ತಿರುವ ಈ ರಾಮ ರಾವಣ ಯುದ್ಧವು ಪ್ರೇಕ್ಷಕರನ್ನು ಆಕರ್ಷಿಸುವುದು ಖಚಿತ ಎಂದು ಸಿನಿಮಾ ತಂಡ ಹೇಳಿದೆ.

    MORE
    GALLERIES