ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕನ್ನಡತಿ ಧಾರಾವಾಹಿ ಮುಕ್ತಾಯವಾಗಿದೆ. ಆದ್ರೆ ಭುವಿ ಟೀಚರ್ ರನ್ನು ಮರೆಯುವುದು ಹೇಗೆ ಹೇಳಿ. ರಂಜನಿ ರಾಘವನ್ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. (ಚಿತ್ರ ಕೃಪೆ: ಇನ್ಸ್ಟಾಗ್ರಾಂ) ರಂಜನಿ ರಾಘವನ್ ಕಪ್ಪು-ಬಿಳಿ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಹಗಲಿನಲ್ಲಿ ಕನಸು ಕಂಡಿದ್ದಾರೆ. ಲೈಫಿನಲ್ಲಿ ಕಲರ್ ಕಲರ್ ಕನಸುಗಳು ಎಂದಿದ್ದಾರೆ. ಇತ್ತೀಚೆಗೆ ಕನ್ನಡತಿ ಧಾರಾವಾಹಿ ಮುಗಿದಿದ್ದು, ರಂಜನಿ ರಾಘವನ್ ಅವರು ಮುಂದೆ ಏನ್ ಮಾಡ್ತಾರೆ ಎಂದು ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆ ನಟಿ ಇನ್ನೂ ಏನೂ ಹೇಳಿಲ್ಲ. ರಂಜನಿ ರಾಘವನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮರ ಹಿಡಿದುಕೊಂಡು ಭುವಿ ಮೇಡಂ ಕನಸು ಕಂಡಿದ್ದಾರೆ. ಇನ್ನು ರಂಜನಿ ರಾಘವನ್ ಅವರು ಫೋಟೋಗಳಿಗೆ ಹಲವು ಕಾಮೆಂಟ್ ಬಂದಿವೆ. ನಿಮ್ಮಿಂದ ಸೀರೆಗೆ ಒಂದು ಕಳೆ ಬಂದಿತು. ಸೂಪರ್. ಲವ್ ಯು ಎಂದೆಲ್ಲಾ ಹಾಕಿದ್ದಾರೆ. ಭುವಿ ಅಲಿಯಾಸ್ ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ. ರಂಜನಿ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಹಾಕಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಬರುತ್ತೆ. ನಟಿ ರಂಜನಿ ರಾಘವನ್ ಅವರ ನಟನೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ.