Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ಬಳ್ಳಾರಿ ತಾಲೂಕಿನ ಹರಪ್ಪನಹಳ್ಳಿ ತಾಲ್ಲೂಕಿನಲ್ಲಿ ಮಾಜಿ ಉಪಮುಖ್ಯ ಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಮಗಳು ಲತಾ ಮಲ್ಲಿಕಾರ್ಜುನ್ ಅವರ ಪರ ನಟಿ ರಂಜನಿ ರಾಘವನ್ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಅವರ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಹರಪ್ಪನಹಳ್ಳಿ ತಾಲೂಕಿನ ಮತ್ತೀಹಳ್ಳಿ, ಎನ್. ಶಿರಹಳ್ಳಿ, ಬೆಣ್ಣಿಹಳ್ಳಿ, ಆಲದಹಳ್ಳಿ, ಹಗರಿ ಶಿರನಹಳ್ಳಿ, ನಾಗರಕೊಂಡ, ಕುಣಿಮಾದಿಹಳ್ಳಿ, ಹಗರಿ ಗುಡಿಹಳ್ಳಿ, ಕಡಬಗೇರಿ, ಕೆರೆ ಕಾನಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲತಾ ಮಲ್ಲಿಕಾರ್ಜುನ್ ಪರವಾಗಿ ರಂಜನಿ ರಾಘವನ್ ಮತಯಾಚಿಸಿದ್ದಾರೆ.
2/ 8
ಸಾಸ್ವಿಹಳ್ಳಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತಾಡಿದ ರಂಜನಿ ರಾಘವನ್, ಲತಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ್ರು.
3/ 8
ನಾನು ಪುಟ್ಟಗೌರಿ, ಕನ್ನಡತಿ ಧಾರವಾಹಿಗಳಲ್ಲಿ ನಟಿಸಿ ನಿಮ್ಮ ಮನೆಮಗಳಾಗಿ ನಿಮ್ಮೂರಿಗೆ ಬಂದಿರುವೆ. ನಾನು ನಟಿಸಿದ ಸೀರಿಯಲ್ ನೋಡಿ, ನನ್ನನ್ನು ಬೆಂಬಲಿಸಿರುವಂತೆ, ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವಂತೆ ಕೋರಿಕೊಂಡ್ರು.
4/ 8
ಲತಾ ಮಲ್ಲಿಕಾರ್ಜುನ್ ಅವರ ಲೇಡಿ ಪರ್ಸ್ ಗುರುತಿಗೆ ಮತ ಚಲಾಯಿಸುವಂತೆ ರಂಜನಿ ರಾಘವನ್ ಮನವಿ ಮಾಡಿದರು. ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ರವರಿಗೆ ಮತ ಚಲಾಯಿಸಿ, ಮಹಿಳೆಯರ ಶಕ್ತಿ ಏನೆಂಬುದನ್ನು ರಾಜ್ಯದ ಜನರಿಗೆ ತೋರಿಸಬೇಕೆಂದು ಹೇಳಿದ್ದಾರೆ.
5/ 8
ಮಹಿಳೆಯರು ಎಲ್ಲಾ ರಂಗದಲ್ಲೂ ಬೆಳೆದಿದ್ದಾರೆ. ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಅರ್ಹರಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಲು ಲತಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ರು.
6/ 8
ಇದೇ ಸಂದರ್ಭದಲ್ಲಿ ಹರಪ್ಪನಹಳ್ಳಿ ವಿಧಾನಸಭಾ ಕ್ಷೇತ್ರದ ಮುಖಂಡರಾದ ಚನ್ನಬಸವನಗೌಡ, ಬಿ. ಕೆ. ಪ್ರಕಾಶ್, ಶಿವರಾಜ್, ನಾಗರಾಜ್ ಇನ್ನಿತರರು ಇದ್ದರು.
7/ 8
ಪುಟ್ಟಗೌರಿ ಸೀರಿಯಲ್ ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ. ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ.
8/ 8
ನಟಿ ರಂಜನಿ ರಾಘವನ್ ಅವರು ಸಿನಿಮಾ ಮಾಡ್ತಾ ಇದ್ದು, ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ. ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಲಿದೆ.
First published:
18
Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ಹರಪ್ಪನಹಳ್ಳಿ ತಾಲೂಕಿನ ಮತ್ತೀಹಳ್ಳಿ, ಎನ್. ಶಿರಹಳ್ಳಿ, ಬೆಣ್ಣಿಹಳ್ಳಿ, ಆಲದಹಳ್ಳಿ, ಹಗರಿ ಶಿರನಹಳ್ಳಿ, ನಾಗರಕೊಂಡ, ಕುಣಿಮಾದಿಹಳ್ಳಿ, ಹಗರಿ ಗುಡಿಹಳ್ಳಿ, ಕಡಬಗೇರಿ, ಕೆರೆ ಕಾನಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಲತಾ ಮಲ್ಲಿಕಾರ್ಜುನ್ ಪರವಾಗಿ ರಂಜನಿ ರಾಘವನ್ ಮತಯಾಚಿಸಿದ್ದಾರೆ.
Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ನಾನು ಪುಟ್ಟಗೌರಿ, ಕನ್ನಡತಿ ಧಾರವಾಹಿಗಳಲ್ಲಿ ನಟಿಸಿ ನಿಮ್ಮ ಮನೆಮಗಳಾಗಿ ನಿಮ್ಮೂರಿಗೆ ಬಂದಿರುವೆ. ನಾನು ನಟಿಸಿದ ಸೀರಿಯಲ್ ನೋಡಿ, ನನ್ನನ್ನು ಬೆಂಬಲಿಸಿರುವಂತೆ, ಈ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವಂತೆ ಕೋರಿಕೊಂಡ್ರು.
Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ಲತಾ ಮಲ್ಲಿಕಾರ್ಜುನ್ ಅವರ ಲೇಡಿ ಪರ್ಸ್ ಗುರುತಿಗೆ ಮತ ಚಲಾಯಿಸುವಂತೆ ರಂಜನಿ ರಾಘವನ್ ಮನವಿ ಮಾಡಿದರು. ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್ ರವರಿಗೆ ಮತ ಚಲಾಯಿಸಿ, ಮಹಿಳೆಯರ ಶಕ್ತಿ ಏನೆಂಬುದನ್ನು ರಾಜ್ಯದ ಜನರಿಗೆ ತೋರಿಸಬೇಕೆಂದು ಹೇಳಿದ್ದಾರೆ.
Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ಮಹಿಳೆಯರು ಎಲ್ಲಾ ರಂಗದಲ್ಲೂ ಬೆಳೆದಿದ್ದಾರೆ. ರಾಜಕೀಯ ರಂಗದಲ್ಲಿ ಕೆಲಸ ಮಾಡಲು ಅರ್ಹರಿದ್ದಾರೆ ಎನ್ನುವುದನ್ನು ಸಾಬೀತು ಪಡಿಸಲು ಲತಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ರು.
Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ಪುಟ್ಟಗೌರಿ ಸೀರಿಯಲ್ ಗೆ ವಿದಾಯ ಹೇಳಿದ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ. ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. 'ಕತೆ ಡಬ್ಬಿ', 'ಸ್ವೈಪ್ ರೈಟ್' ಪುಸ್ತಕಗಳನ್ನು ಬರೆದಿದ್ದಾರೆ.
Ranjani Raghavan: ಎಲೆಕ್ಷನ್ ಅಖಾಡಕ್ಕಿಳಿದ ಕನ್ನಡತಿ, ಪಕ್ಷೇತರ ಅಭ್ಯರ್ಥಿ ಪರ ಭರ್ಜರಿ ಪ್ರಚಾರ
ನಟಿ ರಂಜನಿ ರಾಘವನ್ ಅವರು ಸಿನಿಮಾ ಮಾಡ್ತಾ ಇದ್ದು, ಸತ್ಯಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೊಂದು ಭೂತಾರಾಧನೆಯ ಕಥೆಯುಳ್ಳ ಸಿನಿಮಾವಾಗಿದೆ. ಶೂಟಿಂಗ್ ನಡೆಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಬಿಡುಗಡೆ ದಿನಾಂಕ ಕೂಡ ಅನೌನ್ಸ್ ಆಗಲಿದೆ.