ಕಾವ್ಯಾ ಗೌಡ ಅವರನ್ನು ಮತ್ತೆ ಕಿರುತೆರೆಯಲ್ಲಿ ಕಾಣಲು ಅಭಿಮಾನಿಗಳು ಆಸೆ ಪಡ್ತಾ ಇದ್ದಾರೆ. ರಾಧಾ ಮಿಸ್ ತರ ಮತ್ತೆ ಯಾವುದಾದ್ರೂ ಒಳ್ಳೆ ಪಾತ್ರ ಮಾಡಿ ಎನ್ನುತ್ತಿದ್ದಾರೆ. ಮಾಡೆಲಿಂಗ್ನಲ್ಲಿ ತಮ್ಮ ವೃತ್ತಿಜೀವನವನ್ನು ಕಾವ್ಯಾ ಅವರು ಪ್ರಾರಂಭಿಸಿದರು. ಕಮಲ್ ಹಾಸನ್, ನಾಗಾರ್ಜುನ, ಮುಮ್ಮುಟ್ಟಿ ಅವರಂತಹ ಜನಪ್ರಿಯ ನಟರೊಂದಿಗೆ 200 ಕ್ಕೂ ಹೆಚ್ಚು ದೂರದರ್ಶನ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಕಾವ್ಯಾ ಗೌಡ ಅವರು ಜನಪ್ರಿಯ ರಿಯಾಲಿಟಿ ಶೋ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು. ಜೀ ಕನ್ನಡ ವಾಹಿನಿಯಲ್ಲಿ ಶುಭ ವಿವಾಹ ಎಂಬ ಕನ್ನಡ ಧಾರಾವಾಹಿಯ ಮೂಲಕ ಅವರು ತಮ್ಮ ಮೊದಲ ನಟನೆಯನ್ನು ಮಾಡಿದರು. ಅವರು ಕನ್ನಡದ ಪ್ರಸಿದ್ಧ ಧಾರಾವಾಹಿಗಳಾದ ಗಾಂಧಾರಿ ಮತ್ತು ರಾಧಾ ರಮಣದಲ್ಲಿಯೂ ಕಾಣಿಸಿಕೊಂಡಿದ್ದಾರೆ. 2018ರಲ್ಲಿ ನವನೀತ್ ನಿರ್ದೇಶಿಸಿದ ಬಕಾಸುರದೊಂದಿಗೆ ಅವರು ತಮ್ಮ ಕನ್ನಡ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲೂ ನಟನೆ ಮೂಲಕ ಗಮನ ಸೆಳೆದರು.