ಸ್ಯಾಂಡಲ್ವುಡ್ ಮರೆಯಾದ ಮಾಣಿಕ್ಯ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತಿದೆ.
2/ 8
ಪುನೀತ್ ಅವರ ಸಮಾಧಿಗೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ದಿನವಿಡಿ ಅಪ್ಪು ಉತ್ಸವ ನಡೆಯಲಿದೆ.
3/ 8
ಅಪ್ಪು ಸಮಾಧಿಗೆ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಹಾಗೂ ಪುನೀತ್ ದ್ವಿತೀಯ ಪುತ್ರಿ ವಂದಿತಾ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
4/ 8
ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, 'ಅಪ್ಪು ನಮಗಿನ್ನು ಮಗುನೇ. ಇವತ್ತು ಬಂದಿರೋ ಅಭಿಮಾನಿಗಳು ಅವನು ಇನ್ನು ಬದುಕಿದ್ದಾನೆ ಅನ್ನೋದನ್ನ ತೋರಿಸುತ್ತೆ. ಜನ ಇನ್ನು ಅಪ್ಪುನ ಜೀವಂತವಾಗಿಟ್ಟುಕೊಂಡಿದ್ದಾರೆ. ಇನ್ನು ಜನ ಬೆಳೆಸಿ ಆಟ ಆಡಿಸ್ತಿದ್ದಾರೆ'. ಎಂದು ಹೇಳಿದ್ದಾರೆ.
5/ 8
'ಜನರ ಪ್ರೀತಿ ವಿಶ್ವಾಸಕ್ಕೆ ಏನು ಹೇಳಲಾರೆ. ಸಾಷ್ಟಾಂಗ ನಮಸ್ಕಾರ ಹಾಕೋದೊಂದು ಬಿಟ್ರೆ ಇನ್ನೇನು ಹೇಳಲಾರೆ. ಅಪ್ಪು ಆದರ್ಶಗಳನ್ನ ಜೊತೆಯಲ್ಲಿ ಮುನ್ನಡೆಸಿಕೊಂಡು ಸಾಗೋಣ' ಎಂದು ರಾಘವೇಂದ್ರ ರಾಜ್ಕುಮಾರ್ ಅವರು ಹೇಳಿದ್ದಾರೆ.
6/ 8
ಕಂಠೀರವ ಸ್ಟುಡಿಯೋದಲ್ಲಿ 17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.
7/ 8
ಅಲ್ಲದೇ ಜೆಪಿ ನಗರದ ದೊಡ್ಮನೆ ಅಭಿಮಾನಿಗಳ ಸಂಘ, ಇವತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದಾರೆ. ಬೆಂಗಳೂರಿನ ವಿವಿಧೆಡೆ ಅಪ್ಪು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
8/ 8
ಸಾವನ್ನಪ್ಪಿದ್ರೂ ಅಭಿಮಾನಿಗಳ ಹೃದಯಲ್ಲಿ ಪುನೀತ್ ಜೀವಂತವಾಗಿದ್ದಾರೆ. ರಾಜ್ಯದ ಎಲ್ಲೆಡೆ ಅಪ್ಪು ಸ್ಮರಣೆ ನಡೆದಿದೆ. ಎಲ್ಲರೂ ಅಪ್ಪು ಸರ್ ಮತ್ತೆ ಹುಟ್ಟಿ ಬನ್ನಿ ಎನ್ನುತ್ತಿದ್ದಾರೆ.
ಸ್ಯಾಂಡಲ್ವುಡ್ ಮರೆಯಾದ ಮಾಣಿಕ್ಯ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗ್ತಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತಿದೆ.
ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, 'ಅಪ್ಪು ನಮಗಿನ್ನು ಮಗುನೇ. ಇವತ್ತು ಬಂದಿರೋ ಅಭಿಮಾನಿಗಳು ಅವನು ಇನ್ನು ಬದುಕಿದ್ದಾನೆ ಅನ್ನೋದನ್ನ ತೋರಿಸುತ್ತೆ. ಜನ ಇನ್ನು ಅಪ್ಪುನ ಜೀವಂತವಾಗಿಟ್ಟುಕೊಂಡಿದ್ದಾರೆ. ಇನ್ನು ಜನ ಬೆಳೆಸಿ ಆಟ ಆಡಿಸ್ತಿದ್ದಾರೆ'. ಎಂದು ಹೇಳಿದ್ದಾರೆ.
'ಜನರ ಪ್ರೀತಿ ವಿಶ್ವಾಸಕ್ಕೆ ಏನು ಹೇಳಲಾರೆ. ಸಾಷ್ಟಾಂಗ ನಮಸ್ಕಾರ ಹಾಕೋದೊಂದು ಬಿಟ್ರೆ ಇನ್ನೇನು ಹೇಳಲಾರೆ. ಅಪ್ಪು ಆದರ್ಶಗಳನ್ನ ಜೊತೆಯಲ್ಲಿ ಮುನ್ನಡೆಸಿಕೊಂಡು ಸಾಗೋಣ' ಎಂದು ರಾಘವೇಂದ್ರ ರಾಜ್ಕುಮಾರ್ ಅವರು ಹೇಳಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿ 17-03-2023ನೇ ಶುಕ್ರವಾರ ಬೆಳಗ್ಗೆ 10 ರಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದೆ. ಹಾಗೂ ಸಂಜೆ 6 ಕ್ಕೆ ಅಪ್ಪು ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ.