ಸಚಿವರೇ ನಮ್ಮೂರಿನಲ್ಲಿ ಉಳಿದುಕೊಳ್ಳಲು ಬರುತಿದ್ದಾರೆ. ಇನ್ಮುಂದೆ ನಮ್ಮೂರಿನ ಕಷ್ಟಗಳೆಲ್ಲಾ ದೂರವಾಗಿ ಬಿಡುತ್ತವೆ. ನಮ್ಮೂರಿಗೂ ಎಲ್ಲಾ ಸೌಲಭ್ಯಗಳು ದೊರಕುತ್ತವೆ ಅಂತಾ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ರೇಷ್ಮೆ ಹಾಡಿಯ ಜನರು ಕನಸು ಕಂಡಿದ್ದರು. ಆದರೆ ಊರಿನ ಕಥೆ ಆಗಿರಲಿ, ಸಚಿವ ವಾಸ್ತವ್ಯ ಮಾಡಿ ಐದು ವರ್ಷಗಳೇ ಕಳೆದರೂ ಸಚಿವ ವಾಸ್ತವ್ಯ ಮಾಡಿದ್ದ ಇಳಿವಯಸ್ಸಿನ ಆ ಅಜ್ಜಿಗೂ ಒಂದು ಸೂರು ಸಿಕ್ಕಿಲ್ಲ.