ಚನ್ನಪಟ್ಟಣದ ಬೊಂಬೆಗಳ ಮೇಲೆ ಕೊರೋನಾ ಕರಿನೆರಳು ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಹಿಳೆಯರು
ಈ ಗ್ರಾಮದ ನೂರಾರು ಜನ ಮಹಿಳೆಯರು ಸ್ವಂತ ಉದ್ಯೋಗದಲ್ಲಿ ತಮ್ಮ ಜೀವನವನ್ನ ರೂಪಿಸಿಕೊಂಡಿದ್ದರು. ಆದರೆ ಈಗ ಕೊರೋನಾ ಏಟಿಗೆ ಈ ಮಹಿಳೆಯರ ಬದುಕು ಕಷ್ಟಕರವಾಗಿದೆ. ಪ್ರತಿದಿನ 300 ರಿಂದ 600 ರೂಪಾಯಿಯವರೆಗೆ ಸಂಪಾದನೆ ಮಾಡುತ್ತಿದ್ದ ಮಹಿಳೆಯರು ಈಗ 30 ರಿಂದ 60 ರೂಪಾಯಿ ಸಂಪಾದನೆಗೆ ಇಳಿದಿದ್ದಾರೆ.
ರಾಮನಗರ ಜಿಲ್ಲೆ ಬೊಂಬೆನಾಡು ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಗ್ರಾಮದ ಸರಿಸುಮಾರು 250 ರಿಂದ 300 ರಕ್ಕೂ ಹೆಚ್ಚು ಜನ ಮಹಿಳೆಯರು ಬೊಂಬೆ ತಯಾರಿಕೆ ಹಾಗೂ ಆಲೆ ಮರದಿಂದ ಮಣಿಗಳು ಹಾಗೂ ವಿವಿಧ ಬಗೆಯ ಆಟಿಕೆಗಳನ್ನ ತಯಾರು ಮಾಡಿ ಚನ್ನಪಟ್ಟಣದ ಟಾಯ್ಸ್ ಶೋ ರೂಮ್ಸ್ಗೆ ಪೂರೈಕೆ ಮಾಡುತ್ತಿದ್ದರು.
2/ 10
ಕೆಲಸಕ್ಕೆ ತಕ್ಕಂತೆ ವೇತನವೂ ಸಹ ಅಚ್ಚುಕಟ್ಟಾಗಿ ಸಿಗುತ್ತಿತ್ತು. ಪ್ರತಿದಿನವೂ 300 ರಿಂದ 600 ರೂಪಾಯಿಯವರೆಗೆ ಸಂಪಾದನೆ ಮಾಡುತ್ತಿದ್ದರು. ಈ ಮಹಿಳೆಯರು. ಆದರೆ ಈಗ ಕೊರೋನಾ ದಿಂದಾಗಿ ಟಾಯ್ಸ್ ಶೋ ರೂಮ್ಸ್ಗಳಲ್ಲಿಯೂ ವ್ಯಾಪಾರವಿಲ್ಲದೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಶೋ ರೂಮ್ಸ್ ಮಾಲೀಕರು ಕಂಗಾಲಾಗಿದ್ದಾರೆ.
3/ 10
ಈ ಮಹಿಳೆಯರು ತಯಾರು ಮಾಡುವ ಮರದ ಆಟಿಕೆಗಳಿಗೂ ಬೇಡಿಕೆಯಿಲ್ಲದಂತಾಗಿದೆ.
4/ 10
ಇದರಿಂದಾಗಿ ಮಹಿಳೆಯರ ಸಂಪಾದನೆಯಲ್ಲಿ ಭಾರೀ ಇಳಿಮುಖ ಕಂಡಿದೆ ಎಂದು ಕುಶಲಕರ್ಮಿ ಹಾಗೂ ನೀಲಸಂದ್ರ ಗ್ರಾಮಸ್ಥೆ ಬೇಸರ ವ್ಯಕ್ತಪಡಿಸಿದ್ದಾರೆ.
5/ 10
ಇನ್ನು ಈ ಗ್ರಾಮದಲ್ಲಿ ಅತಿಹೆಚ್ಚಾಗಿ ಮಹಿಳೆಯರೇ ತಮ್ಮ ಕಾಲಮೇಲೆ ಸ್ವತಂತ್ರವಾಗಿ ನಿಂತು ಇಷ್ಟು ದಿನಗಳ ಕಾಲ ತಮ್ಮ ಕುಟುಂಬಕ್ಕೂ ಆಸರೆಯಾಗಿದ್ದರು.
6/ 10
ಸರಿ ಸುಮಾರು 60-70 ವರ್ಷಗಳಿಂದಲೂ ಸಹ ಈ ಗ್ರಾಮದ ಮಹಿಳೆಯರು ಇದೇ ಉದ್ಯೋಗ ಮಾಡಿಕೊಂಡು ಚನ್ನಪಟ್ಟಣ ತಾಲೂಕಿಗೆ ಮಾದರಿಯಾಗಿದ್ದಾರೆ.
7/ 10
ಕೊರೋನಾ ಎಂಬ ಹೆಮ್ಮಾರಿಗೆ ಕಷ್ಟಪಟ್ಟು ದುಡಿಯುತ್ತಿದ್ದ ಮಹಿಳೆಯರ ಮುಖದಲ್ಲಿ ಬೇಸರದ ಕಾರ್ಮೋಡ ಕವಿದಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಮಹಿಳೆಯರ ವಿಚಾರವಾಗಿ ಗಮನಹರಿಸಿ ಸಹಾಯಹಸ್ತ ಚಾಚಬೇಕೆಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.
8/ 10
ಪುರುಷರಿಗಿಂತಲೂ ನಾವೇನು ಕಡಿಮೆಯಿಲ್ಲ ಎಂದು ಮಹಿಳೆಯರು ಸಹ ಕಷ್ಟಪಟ್ಟು ದುಡಿದು ಕುಟುಂಬಕ್ಕೆ ಆಸರೆಯಾಗುವ ಮೂಲಕ ಈ ಗ್ರಾಮದ ಹೆಂಗಸರು ಎಲ್ಲರಿಗೂ ಮಾದರಿಯಾಗಿದ್ದರು.
9/ 10
ಕೊರೋನಾ ಕಾಟಕ್ಕೆ ಇತ್ತ ಉದ್ಯೋಗದಲ್ಲಿ ಸಂಪಾದನೆಯೂ ಇಲ್ಲ, ತಲೆತಲಾಂತರದಿಂದ ಮಾಡಿಕೊಂಡು ಬಂದಿರುವ ಕಾಯಕವನ್ನ ಬಿಟ್ಟು ಬೇರೆಕಡೆ ಗಮನ ಕೊಡುವ ಮನಸ್ಥಿತಿಯೂ ಇಲ್ಲದಂತ ದುಸ್ಥಿತಿಯಲ್ಲಿದ್ದಾರೆ.
10/ 10
ರಾಜ್ಯ ಸರ್ಕಾರ ಇವರ ಕಷ್ಟಕ್ಕೆ ಸ್ಪಂದಿಸಬೇಕಿದೆ.
First published:
110
ಚನ್ನಪಟ್ಟಣದ ಬೊಂಬೆಗಳ ಮೇಲೆ ಕೊರೋನಾ ಕರಿನೆರಳು ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಹಿಳೆಯರು
ರಾಮನಗರ ಜಿಲ್ಲೆ ಬೊಂಬೆನಾಡು ಚನ್ನಪಟ್ಟಣ ತಾಲೂಕಿನ ನೀಲಸಂದ್ರ ಗ್ರಾಮದ ಸರಿಸುಮಾರು 250 ರಿಂದ 300 ರಕ್ಕೂ ಹೆಚ್ಚು ಜನ ಮಹಿಳೆಯರು ಬೊಂಬೆ ತಯಾರಿಕೆ ಹಾಗೂ ಆಲೆ ಮರದಿಂದ ಮಣಿಗಳು ಹಾಗೂ ವಿವಿಧ ಬಗೆಯ ಆಟಿಕೆಗಳನ್ನ ತಯಾರು ಮಾಡಿ ಚನ್ನಪಟ್ಟಣದ ಟಾಯ್ಸ್ ಶೋ ರೂಮ್ಸ್ಗೆ ಪೂರೈಕೆ ಮಾಡುತ್ತಿದ್ದರು.
ಚನ್ನಪಟ್ಟಣದ ಬೊಂಬೆಗಳ ಮೇಲೆ ಕೊರೋನಾ ಕರಿನೆರಳು ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಹಿಳೆಯರು
ಕೆಲಸಕ್ಕೆ ತಕ್ಕಂತೆ ವೇತನವೂ ಸಹ ಅಚ್ಚುಕಟ್ಟಾಗಿ ಸಿಗುತ್ತಿತ್ತು. ಪ್ರತಿದಿನವೂ 300 ರಿಂದ 600 ರೂಪಾಯಿಯವರೆಗೆ ಸಂಪಾದನೆ ಮಾಡುತ್ತಿದ್ದರು. ಈ ಮಹಿಳೆಯರು. ಆದರೆ ಈಗ ಕೊರೋನಾ ದಿಂದಾಗಿ ಟಾಯ್ಸ್ ಶೋ ರೂಮ್ಸ್ಗಳಲ್ಲಿಯೂ ವ್ಯಾಪಾರವಿಲ್ಲದೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಶೋ ರೂಮ್ಸ್ ಮಾಲೀಕರು ಕಂಗಾಲಾಗಿದ್ದಾರೆ.
ಚನ್ನಪಟ್ಟಣದ ಬೊಂಬೆಗಳ ಮೇಲೆ ಕೊರೋನಾ ಕರಿನೆರಳು ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಹಿಳೆಯರು
ಕೊರೋನಾ ಎಂಬ ಹೆಮ್ಮಾರಿಗೆ ಕಷ್ಟಪಟ್ಟು ದುಡಿಯುತ್ತಿದ್ದ ಮಹಿಳೆಯರ ಮುಖದಲ್ಲಿ ಬೇಸರದ ಕಾರ್ಮೋಡ ಕವಿದಿದೆ. ಹಾಗಾಗಿ ರಾಜ್ಯ ಸರ್ಕಾರ ಈ ಮಹಿಳೆಯರ ವಿಚಾರವಾಗಿ ಗಮನಹರಿಸಿ ಸಹಾಯಹಸ್ತ ಚಾಚಬೇಕೆಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.
ಚನ್ನಪಟ್ಟಣದ ಬೊಂಬೆಗಳ ಮೇಲೆ ಕೊರೋನಾ ಕರಿನೆರಳು ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಮಹಿಳೆಯರು
ಕೊರೋನಾ ಕಾಟಕ್ಕೆ ಇತ್ತ ಉದ್ಯೋಗದಲ್ಲಿ ಸಂಪಾದನೆಯೂ ಇಲ್ಲ, ತಲೆತಲಾಂತರದಿಂದ ಮಾಡಿಕೊಂಡು ಬಂದಿರುವ ಕಾಯಕವನ್ನ ಬಿಟ್ಟು ಬೇರೆಕಡೆ ಗಮನ ಕೊಡುವ ಮನಸ್ಥಿತಿಯೂ ಇಲ್ಲದಂತ ದುಸ್ಥಿತಿಯಲ್ಲಿದ್ದಾರೆ.