ಯಾರಿಗಾದರೂ ಲೈಫ್ ಸೆಟಲ್ ಆಗುವಂತಹ ಘಟನೆ ನಡೆದರೆ ಆತ ಬೆಳಗ್ಗೆ ನರಿ ಮುಖ ನೋಡಿ ಬಂದಿದ್ದ ಅಂತ ಜನರು ಮಾತನಾಡಿಕೊಳ್ಳುವುದನ್ನು ನೀವು ಗಮನಿಸಿರುತ್ತೀರಿ. ಅದರಲ್ಲೂ ಆತನಿಗೆ ಲಾಭವಾಗುತ್ತಿದ್ದರೆ ಆತ ಪ್ರತಿ ದಿನ ನರಿ ಮುಖ ನೋಡಿಕೊಂಡು ಬರ್ತಾನೆ ಅಂತಲೂ ಹೇಳುತ್ತಾರೆ. ಈ ಮಾತುಗಳನ್ನು ನಿಜ ಎಂದುಕೊಂಡ ವ್ಯಕ್ತಿಯೋರ್ವ ಪ್ರತಿ ದಿನ ನರಿ ಮುಖ ನೋಡಲು ನರಿಯನ್ನೇ ಸಾಕಿಕೊಂಡಿದ್ದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. (Image Credit Pixabay)
ನರಿಯೊಂದನ್ನು ಹೇಗೋ ಸೆರೆ ಹಿಡಿದಿದ್ದ ಕುಕ್ಕಟೋದ್ಯಮ ನಡೆಸುತ್ತಿದ್ದ ಲಕ್ಷ್ಮಿಕಾಂತ್, ಅದನ್ನು ಯಾರಿಗೂ ತಿಳಿದಂತೆ ಚೆನ್ನಾಗಿ ಬೆಳೆಸಿದ್ದಾರೆ. ನರಿ ಸಾಕಾಲು ಅಂತಾನೆ ಅದಕ್ಕೆ ರೂಮ್ವೊಂದನ್ನು ನಿರ್ಮಿಸಿದ್ದರಂತೆ. ಪ್ರತಿ ದಿನ ನಿದ್ದೆಯಿಂದ ಕಣ್ಣು ಬಿಡುತ್ತಿದ್ದಂತೆ ನರಿ ಮುಖ ನೋಡುತ್ತಿದ್ದನಂತೆ, ವ್ಯಾಪಾರದಲ್ಲಿ ಲಾಭ ಆದರೂ ನರಿಯಿಂದಲೇ ಎಂದು ಭಾವಿಸಿದ್ದರಂತೆ. (Image Credit Pixabay)
ಇದರಂತೆ ಹೇಗಾದರೂ ಮಾಡಿ ಲಕ್ಷ್ಮಿಕಾಂತ್ ಕೋಳಿ ಫಾರಮ್ನಲ್ಲಿ ಸಾಕಿಕೊಂಡಿದ್ದ ನರಿಯನ್ನು ದೂರ ಮಾಡಬೇಕು ಎಂದುಕೊಂಡ ಅನಾಮಿಕ ವ್ಯಕ್ತಿ ನರಿ ಸಾಕುತ್ತಿದ್ದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದನಂತೆ. ಅನಾಮಿಕ ವ್ಯಕ್ತಿ ನೀಡಿದ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಪೊಲೀಸರು ಕೋಳಿ ಫಾರಮ್ ಮೇಲೆ ದಾಳಿ ಮಾಡಿ ನರಿಯನ್ನು ರಕ್ಷಣೆ ಮಾಡಿದ್ದಾರೆ. (Image Credit Pixabay)
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿಕಾಂತ್ ಕೆಲ ಸಮಯದ ಹಿಂದೆ ನನಗೆ ಕರೆ ಅಂಗಳದಲ್ಲಿ ನರಿಯ ಮರಿಗಳು ಸಿಕ್ಕಿತ್ತು. ಅವುಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಒಂದನ್ನು ನನ್ನ ಬಳಿಯೆ ಉಳಿಸಿಕೊಂಡು ಸಾಕಿಕೊಂಡಿದ್ದೆ ಎಂದು ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದಾರಂತೆ. ಏನೇ ಆದರೂ ಅಕ್ರಮವಾಗಿ ನರಿಯನ್ನು ಬೋನ್ವೊಂದರಲ್ಲಿ ಬಂಧಿಸಿ ಸಾಕಿಕೊಂಡಿರುವುದು ನಿಯಮಗಳ ಅನ್ವಯ ಅಪರಾಧವಾಗಿದ್ದು, ಕಾನೂನಿನ ಅನ್ವಯ ಕ್ರಮಕೈಗೊಳ್ಳಲು ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರಂತೆ. (Image Credit Pixabay)