Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

ಪಾಕಿಸ್ತಾನ ತಂಡ ಅನುಸರಿಸುತ್ತಿರುವ ಬೌಲಿಂಗ್ ತಂತ್ರಗಳನ್ನು ಟೀಂ ಇಂಡಿಯಾ ತಂಡ ಕಾಪಿ ಹೊಡೆಯುತ್ತಿದೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಪಾಕಿಸ್ತಾನದ ಬೌಲಿಂಗ್ ಯೋಜನೆಗಳನ್ನು ನಕಲು ಮಾಡ್ತಿದೆ ಎಂದು ಪಾಕ್​ ಮಾಜಿ ಆಟಗಾರ ಆರೋಪಿಸಿದ್ದಾರೆ.

First published:

  • 17

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಮೊನ್ನೆ ಮೊನ್ನೆವರೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಅಧ್ಯಕ್ಷರಾಗಿದ್ದ ಮಾಜಿ ಕ್ರಿಕೆಟಿಗ ರಮೀಜ್ ರಾಜಾ (Ramiz Raja) ಮತ್ತೊಮ್ಮೆ ಬಿಸಿಸಿಐ ಹಾಗೂ ಟೀಂ ಇಂಡಿಯಾದ (Team India) ಬಗ್ಗೆ ಕಿಡಿಕಾರಿದ್ದಾರೆ.

    MORE
    GALLERIES

  • 27

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಪಾಕಿಸ್ತಾನ ತಂಡ ಅನುಸರಿಸುತ್ತಿರುವ ಬೌಲಿಂಗ್ ತಂತ್ರಗಳನ್ನು ಟೀಂ ಇಂಡಿಯಾ ತಂಡ ಕಾಪಿ ಹೊಡೆಯುತ್ತಿದೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಪಾಕಿಸ್ತಾನದ ಬೌಲಿಂಗ್ ಯೋಜನೆಗಳನ್ನು ನಕಲು ಮಾಡ್ತಿದೆ. ಆದರೂ ಪಾಕಿಸ್ತಾನದ ಬೌಲಿಂಗ್‌ಗಿಂತ ಭಾರತದ ಬೌಲಿಂಗ್ ತುಂಬಾ ದುರ್ಬಲವಾಗಿದೆ ಎಂದು ರಮೀಜ್​ ರಾಜಾ ಆರೋಪಿಸಿದ್ದಾರೆ.

    MORE
    GALLERIES

  • 37

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಸದ್ಯ ಟಿ20 ಕ್ರಿಕೆಟ್​ ಫಾರ್ಮೆಟ್​​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ ನೀಡುತ್ತಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ ಈ ವರ್ಷ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿಗಳಲ್ಲಿ ಸ್ಮರಣೀಯ ಗೆಲುವು ಪಡೆದಿದೆ.

    MORE
    GALLERIES

  • 47

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಟೀಂ ಇಂಡಿಯಾ ಪ್ರದರ್ಶನ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರಮೀಜ್ ರಾಜಾ, ಬಾಯಿಗೆ ಬಂದಂತೆ ಆರೋಪಗಳನ್ನು ಮಾಡಿದ್ದಾರೆ. ಟೀಂ ಇಂಡಿಯಾ ಪಾಕಿಸ್ತಾನದ ಬೌಲಿಂಗ್ ಅನ್ನು ನಕಲು ಮಾಡ್ತಿದೆ. ನಮ್ಮ ತಂಡದಲ್ಲಿರುವ ಆಟಗಾರರಂತೆಯೇ ಟೀಂ ಇಂಡಿಯಾ ಮ್ಯಾನೇಜ್​​ಮೆಂಟ್ ಆಟಗಾರರನ್ನು ಸಿದ್ಧಪಡಿಸುತ್ತಿದೆ ಎಂದಿದ್ದಾರೆ.

    MORE
    GALLERIES

  • 57

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಪಾಕ್​ ವೇಗಿ ಶಾಹೀನ್ ಶಾ ಅಫ್ರಿದಿ ಅರ್ಷ್​​ದೀಪ್ ಸಿಂಗ್, ಹ್ಯಾರಿಸ್ ರೌಫ್ ರಂತೆ ಉಮ್ರಾನ್ ಮಲಿಕ್, ವಾಸಿಂ ಜೂನಿಯರ್​ ತರ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ತಯಾರಿ ಮಾಡಲಾಗಿದೆ ರಮೀಜ್ ರಾಜಾ ಹೇಳಿದ್ದಾರೆ.

    MORE
    GALLERIES

  • 67

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಪಂದ್ಯದ ಮಿಡಿಲ್ ಅರ್ಡರ್​​ನಲ್ಲಿ ಹಾರ್ದಿಕ್ ಪಾಂಡ್ಯ ವಾಸಿಂ ಜೂನಿಯರ್​ರಂತೆ ಬೌಲ್ ಮಾಡ್ತಿದ್ದಾರೆ. ಆದರೆ ಭಾರತದ ಸ್ಪಿನ್ ಬೌಲರ್​​ಗಳ ಸಾಮರ್ಥ್ಯ ಪಾಕಿಸ್ತಾನದ ಸ್ಪಿನ್ ದಾಳಿಗಿಂತ ಬಲಿಷ್ಠವಾಗಿದೆ ಎಂದು ಹೇಳಿರುವುದು ಇಲ್ಲಿ ವಿಶೇಷವಾಗಿದೆ. ಆದರೆ ಭಾರತದ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡುವ ಮುನ್ನ ರಮೀಜ್ ರಾಜಾ, ಟೀಂ ಇಂಡಿಯಾದ ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್ ಮತ್ತು ಶಿವಂ ಮಾವಿಯಂತಹ ವೇಗದ ಬೌಲರ್​ಗಳನ್ನು ನೆನಪು ಮಾಡಿಕೊಳ್ಳಬೇಕಿದೆ.

    MORE
    GALLERIES

  • 77

    Pakistan: ಪದವಿ ಕಳಕೊಂಡ ಬಳಿಕ ಪಾಕ್​ ಮಾಜಿ ಕ್ರಿಕೆಟಿಗನ ಯದ್ವಾ ತದ್ವಾ ಹೇಳಿಕೆ; ಡಾಕ್ಟರ್​​ಗೆ ತೋರಿಸಿ ಅಂತ ಟೀಂ ಇಂಡಿಯಾ ಅಭಿಮಾನಿಗಳ ವ್ಯಂಗ್ಯ

    ಉಳಿದಂತೆ ಟೀಂ ಇಂಡಿಯಾ ಇನ್ನಿಂಗ್ಸ್​ನಲ್ಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಮೊದಲ ಓವರ್​ನಿಂದಲೇ ಬೌಲಿಂಗ್ ಮಾಡ್ತಿದ್ದಾರೆ. ಇದನ್ನು ರಮೀಜ್ ರಾಜಾ ಮರೆತಂತಿದ್ದಾರೆ. ಪಿಸಿಬಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿರುವ ರಮೀಜ್ ರಾಜಾ ಮತ್ತೆ ಕ್ರಿಕೆಟ್​ ವೀಕ್ಷಕ ವಿವರಣೆ ನೀಡಲಿದ್ದಾರೆ. ಕಿವೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ20 ಸರಣಿಯೊಂದಿಗೆ ಅವರು ಕಾಮೆಂಟೇಟರ್ ಆಗಿ ಕಮ್​​ಬ್ಯಾಕ್​ ಮಾಡುವ ಸಾಧ್ಯತೆಯಿದೆ. ಇನ್ನು, ಪದವಿ ಕಳೆದುಕೊಂಡ ಪಾಕ್ ಮಾಜಿ ಆಟಗಾರ ಹೇಳಿಕೆಗಳನ್ನು ಗಮನಿಸಿರುವ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಅಮೀಜ್ ರಾಜಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರಾ ಎಂದು ಅನುಮಾನ ವ್ಯಕ್ತಪಡಿಸಿ, ವೈದ್ಯರ ಬಳಿ ಹೋಗುವಂತೆ ಕಾಮೆಂಟ್ ಮಾಡಿ ತಿರುಗೇಟು ನೀಡಿದ್ದಾರೆ.

    MORE
    GALLERIES