Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾತ್​ ತಾಲೂಕನ್ನು ಶಾಶ್ವತ ಬರ ಪ್ರದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಸರಿಯಾದ ಮಳೆಯಾಗುವುದಿಲ್ಲ ರೈತರು ವ್ಯವಸಾಯ ಮಾಡಲಯ ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಕಾಕಾಸಾಹೇಬ್ ಸಾವಂತ್ ಎಂಬ ರೈತ ಬರಪೀಡಿತ ಪ್ರದೇಶದಲ್ಲಿ ಸೇಬು ಬೆಳೆ ಬೆಳೆದು ಆಶ್ಚರಿ ಮೂಡಿಸಿದ್ದಾರೆ. ಇವರ ಯಶಸ್ಸಿನ ಬೆನ್ನಲ್ಲೇ ಈ ಭಾಗದ ರೈತರು ಸೇಬು ಕೃಷಿಯತ್ತ ಮುಖ ಮಾಡುತ್ತಿದ್ದಾರೆ.

First published:

  • 110

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾತ್​ ತಾಲೂಕನ್ನು ಶಾಶ್ವತ ಬರ ಪ್ರದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಸರಿಯಾದ ಮಳೆಯಾಗುವುದಿಲ್ಲ ರೈತರು ವ್ಯವಸಾಯ ಮಾಡಲು ನೀರಿಗಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

    MORE
    GALLERIES

  • 210

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಇಲ್ಲಿನ ರೈತರು ನೀರನ್ನು ಕರ್ನಾಟಕದಿಂದ ಪಡೆಯಬೇಕೆಂದು ಬಯಸಿದ್ದರು. ಆದರೆ ಅದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ಇನ್ನು  ಮಳೆ ಕಡಿಮೆ, ನೀರಿನ ಸೌಲಭ್ಯ ಇಲ್ಲ, ಆದರೆ ಇಂತಹ ಬರಪೀಡಿತ ಪ್ರದೇಶದಲ್ಲೂ ರೈತನೊಬ್ಬ ಮಾಡಿರುವ ಪ್ರಯೋಗ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಏಕೆಂದರೆ ಈ ರೈತ ತನ್ನ ಜಮೀನಿನಲ್ಲಿ ಸೇಬು ಬೆಳೆ ಬೆಳೆದು ಎಲ್ಲರನ್ನು ನಿಬ್ಬೆರಗಾಗಿಸಿದ್ದಾನೆ.

    MORE
    GALLERIES

  • 310

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಜಾತ್ ತಾಲೂಕಿನ ಅಂಟ್ರಾಲ್‌ ಗ್ರಾಮದ ಕಾಕಾಸಾಹೇಬ್ ಸಾವಂತ್ ಎಂಬುವವರು ಸಾಂಪ್ರದಾಯಿಕವಾಗಿ ಬೆಳೆಗಳಿಂದ ಬೇಸತ್ತಿದ್ದರು. ವಿಶೇಷವಾಗಿ ಏನಾದರೂ ಮಾಡಬೇಕೆಂದು ಬಯಸಿದ ಅವರು ತಮ್ಮ ಜಮೀನಿನಲ್ಲಿ ಸೇಬು ಬೆಳೆಯಲು ಬಯಸಿದ್ದಾರೆ..

    MORE
    GALLERIES

  • 410

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ವಾಸ್ತವವಾಗಿ ಸೇಬುಗಳ ಕೃಷಿಗೆ ತಂಪಾದ ವಾತಾವರಣ ಬೇಕು. ಹೀಗಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿ ಸೇಬು ಬೆಳೆಯುವ ರೈತರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲಿದ್ದ ರೈತರು ಅವರಿಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ತಿಳಿಸಿದ್ದಾರೆ.

    MORE
    GALLERIES

  • 510

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಅಲ್ಲಿಂದ ಜಾತ್​ಗೆ ಆಗಮಿಸಿದ ಸಾವಂತ್, ಹಿಮಾಚಲ ಪ್ರದೇಶದಿಂದ ತನ್ನೊಂದಿಗೆ ತಂದಿದ್ದ ಹರ್ಮನ್ 99 ಎಂಬ ಸೇಬಿನ ತಳಿಯ 150 ಗಿಡಗಳನ್ನು ತನ್ನ ಒಂದು ಎಕರೆ ಜಮೀನಿನಲ್ಲಿ ನೆಟ್ಟಿದ್ದಾರೆ. ಬಿಸಿಲಿಗೆ ಕೆಲವೇ ದಿನಗಳಲ್ಲಿ 25 ಗಿಡಗಳು ಒಣಗಿ ಹೋಗಿವೆ. ತಕ್ಷಣ ಸೂಕ್ತ ಆರೈಕೆ ಮಾಡಿದ್ದರಿಂದ 125 ಗಿಡಗಳು ಉಳಿದುಕೊಂಡಿವೆ.

    MORE
    GALLERIES

  • 610

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಈ ಭಾಗದಲ್ಲಿ ನೀರಿನ ಕೊರತೆಯಿರುವ ಕಾರಣ ಸಾವಂತ್ ತನ್ನ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು ಮತ್ತು ಗೊಬ್ಬರವನ್ನು ಒದಗಿಸಿದ್ದಾರೆ. ಸಗಣಿಯನ್ನೂ ಹೆಚ್ಚಾಗಿ ಗೊಬ್ಬರವಾಗಿ ಬಳಸಿದ್ದಾರೆ.

    MORE
    GALLERIES

  • 710

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಗಿಡಗಳನ್ನು ನೆಟ್ಟ ಎರಡು ವರ್ಷಗಳ ನಂತರ ಅವು ಮರಗಳಾಗಿ ಮಾರ್ಪಟ್ಟಿವೆ. ಅಷ್ಟೇ ಅಲ್ಲ, ಈಗ ಪ್ರತಿ ಮರವು 30 ರಿಂದ 40 ಸೇಬುಗಳನ್ನು ಬಿಡುತ್ತಿವೆ. ಪ್ರತಿ ಸೇಬು 100 ರಿಂದ 200 ಗ್ರಾಂ ತೂಗುತ್ತದೆ ಎನ್ನುತ್ತಾರೆ ಸಾವಂತ್​.

    MORE
    GALLERIES

  • 810

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಸದ್ಯದ ಮಾರುಕಟ್ಟೆ ಬೆಲೆಯನ್ನು ನೋಡಿದರೆ ಪ್ರತಿ ಮರಕ್ಕೆ 600 ರಿಂದ  1,600 ರೂ ಆದಾಯ ಬರುತ್ತಿದೆ ಎಂದು ಸಾವಂತ್ ಹೇಳಿದ್ದಾರೆ. ಒಟ್ಟು ತೋಟದಿಂದ 75 ಸಾವಿರದಿಂದ 2 ಲಕ್ಷ ಆದಾಯ ಬರಲಿದೆ ಎಂದು ಅವರು ಅಂದಾಜಿಸಿದ್ದಾರೆ.

    MORE
    GALLERIES

  • 910

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಸಾವಂತ್ ಅವರ ತೋಟದಲ್ಲಿರುವ ಸೇಬಿಗೂ ಹಿಮಾಚಲ ಪ್ರದೇಶದಲ್ಲಿ ಬೆಳೆಯುವ ಸೇಬಿಗೂ ಯಾವುದೇ ವ್ಯತ್ಯಾಸವಿಲ್ಲ. ಹಣ್ಣಿನ ಬಣ್ಣ, ರುಚಿ ಮತ್ತು ವಾಸನೆ ಒಂದೇ ಆಗಿರುತ್ತದೆ.

    MORE
    GALLERIES

  • 1010

    Successful Farmer: ಬರಪೀಡಿತ ಪ್ರದೇಶದಲ್ಲಿ ಚಿನ್ನದಂತ ಬೆಳೆ! ಸೇಬು ಬೆಳೆದು ಸೈ ಎನಿಸಿಕೊಂಡ ಮಾದರಿ ರೈತ

    ಸಾವಂತ್ ಅವರ ಪ್ರಯೋಗದಿಂದಾಗಿ ಈಗ ಈ ಭಾಗದ ಇತರ ರೈತರೂ ಸೇಬು ಬೆಳೆಯುತ್ತಿದ್ದಾರೆ. ಪ್ರಯತ್ನಪಟ್ಟರೆ ಏನು ಬೇಕಾದರೂ ಸಾಧ್ಯ ಎಂಬುದನ್ನು ಸಾವಂತ್ ಸಾಬೀತುಪಡಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

    MORE
    GALLERIES