Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

ಭಾರತದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿತು. ನಮ್ಮ ದೇಶ ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೈಲ ಕೃಷಿ ಒತ್ತು ನೀಡದಿರುವುದು. ಹಾಗಾಗಿ ಹಲವು ರಾಜ್ಯಗಳು ತೈಲ ಕೃಷಿಯತ್ತ ಗಮನಹರಿಸುತ್ತಿವೆ.

First published:

  • 17

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ಭಾರತದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿತು. ನಮ್ಮ ದೇಶ ಅಡುಗೆ ಎಣ್ಣೆಯನ್ನು ಹೆಚ್ಚಾಗಿ ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೈಲ ಕೃಷಿ ಒತ್ತು ನೀಡದಿರುವುದು. ಹಾಗಾಗಿ ಹಲವು ರಾಜ್ಯಗಳು ತೈಲ ಕೃಷಿಯತ್ತ ಗಮನಹರಿಸುತ್ತಿವೆ.

    MORE
    GALLERIES

  • 27

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ತೆಲಂಗಾಣ ರಾಜ್ಯವು ಫಾಮ್​ ತಾಳೆ​ ಕೃಷಿಗೆ ವಿಶೇಷ ಗಮನ ನೀಡುತ್ತಿದೆ. ರೈತರಿಗೆ ಲಾಭದಾಯಕವಾದ ತಾಳೆ ಕೃಷಿಗೆ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ. ಪ್ರತಿ ಎಕರೆಗೆ ವರ್ಷಕ್ಕೆ 4500 ರೂ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದೆ. ಮಾರ್ಚ್ ಅಂತ್ಯದೊಳಗೆ 5 ಸಾವಿರ ಎಕರೆಯಲ್ಲಿ ತಾಳೆ ಬೆಳೆಯಲು ಕ್ರಮಕೈಗೊಳ್ಳಲಾಗಿದೆ. ತಾಳೆ ಕೃಷಿ ಬೆಳೆಗೆ ಹನಿ ನೀರಾವರಿ ವ್ಯವಸ್ಥೆ ಮಂಜೂರಾತಿ ಮತ್ತು ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಲ್ಲಿನ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

    MORE
    GALLERIES

  • 37

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ತಾಳೆ ಕೃಷಿಯ ಪ್ರಯೋಜನವನ್ನು ವ್ಯಾಪಕವಾಗಿ ಹರಡಬೇಕು ಮತ್ತು ರೈತರು ಪರ್ಯಾಯ ಬೆಳೆಯಾಗಿ ತಾಳೆ ಕೃಷಿಯತ್ತ ಬರುವಂತೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ರೈತರಿಗೆ ತಾಳೆ ಕೃಷಿ ಅತ್ಯಂತ ಲಾಭದಾಯಕ ಬೆಳೆ ಎಂದು ಜಾಗೃತಿ ಮೂಡಿಸಲಾಗುತ್ತಿದೆ.

    MORE
    GALLERIES

  • 47

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ತಾಳೆ ಕೃಷಿಯನ್ನು ಪ್ರೋತ್ಸಾಹಿಸಲು ಸಬ್ಸಿಡಿಯಲ್ಲಿ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಸ್‌ಸಿ ಮತ್ತು ಎಸ್‌ಟಿ ರೈತರಿಗೆ ಶೇ.100 ಸಹಾಯಧನ, 5 ಎಕರೆ ಒಳಗಿನ ಬಿ.ಸಿ ಮತ್ತು ಓ.ಸಿ ರೈತರಿಗೆ ಶೇ.90 ಸಹಾಯಧನ ಹಾಗೂ 5 ಎಕರೆಗಿಂತ ಹೆಚ್ಚು ಇರುವವರಿಗೆ ಶೇ.80 ಸಹಾಯಧನ ನೀಡಲಾಗುತ್ತಿದೆ.

    MORE
    GALLERIES

  • 57

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ಈಗಾಗಲೇ ತೆಲಂಗಾಣ ಸರ್ಕಾರ 2023-24ರ ಬಜೆಟ್‌ನಲ್ಲಿ ಕೃಷಿಗಾಗಿಯೇ 26,831ಕೋಟಿ ರೂ ಮೀಸಲಿಟ್ಟಿದೆ. ರಾಜ್ಯದಲ್ಲಿ 20 ಲಕ್ಷ ಎಕರೆಗಳಲ್ಲಿ ತಾಳೆ ಕೃಷಿಯನ್ನು ವಿಸ್ತರಿಸುವ ಗುರಿಯನ್ನು ವ್ಯಕ್ತಪಡಿಸಿದ್ದು, ಇದಕ್ಕಾಗಿ 1,000 ಕೋಟಿ ರೂಪಾಯಿಗಳನ್ನ ವಿನಿಯೋಗಿಸುವುದಾಗಿ ತಿಳಿಸಿದೆ.

    MORE
    GALLERIES

  • 67

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ಮಾರುಕಟ್ಟೆಯಲ್ಲಿ ತಾಳೆ ಎಣ್ಣೆಗೆ ಉತ್ತಮ ಬೇಡಿಕೆ ಇದೆ. ತಾಳೆ ಬೆಳೆಯುವ ಮೂಲಕ ರೈತರು ಪ್ರತಿ ಎಕರೆಗೆ 1,50,000 ರೂ ನಿವ್ವಳ ಆದಾಯವನ್ನು ಪಡೆಯುವ ಸಾಧ್ಯತೆಯಿದೆ ಎಂದು ತೆಲಂಗಾಣ ಹಣಕಾಸು ಸಚಿವ ತನೀರು ಹರೀಶ್ ರಾವ್ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

    MORE
    GALLERIES

  • 77

    Agriculture: ಸರ್ಕಾರದಿಂದ ರೈತರಿಗೆ ಗುಡ್‌ ನ್ಯೂಸ್, ಈ ಬೆಳೆ ಬೆಳೆದರೆ ಸಿಗುತ್ತೆ ಎಕರೆಗೆ 4500 ರೂಪಾಯಿ ಸಬ್ಸಿಡಿ!

    ಭಾರತವು ವಿಶ್ವದಲ್ಲಿ ಅಡುಗೆ ಎಣ್ಣೆಯ ಖರೀದಿಸುವ ಎರಡನೇ ಅತಿದೊಡ್ಡ ಗ್ರಾಹಕ ರಾಷ್ಟ್ರ ಮತ್ತು ವೆಜಿಟೇಬಲ್ ಆಯಿಲ್​ ಉಪಯೋಗಿಸುವ ನಂಬರ್​ 1 ರಾಷ್ಟ್ರವಾಗಿದೆ. ಅಂದರೆ ದೇಶಕ್ಕೆ ಅಗತ್ಯ ಇರುವ ಎಣ್ಣೆಯಲ್ಲಿ ಸುಮಾರು 60 ಪ್ರತಿಶತವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ನಮ್ಮ ರೈತರಿಗೆ ಆದಾಯವನ್ನು ನೀಡುವ ತಾಳೆ ಕೃಷಿಯನ್ನು ಕೈಗೊಳ್ಳಲು ಪ್ರೇರೇಪಿಸಲು ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹವನ್ನು ನೀಡುತ್ತಿದೆ ಎಂದು ಹರೀಶ್ ರಾವ್​ ಹೇಳಿದ್ದಾರೆ.

    MORE
    GALLERIES