Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

ಹಳ್ಳಿಯಲ್ಲಿದ್ದುಕೊಂಡು ಲಕ್ಷಗಟ್ಟಲೆ ಆದಾಯ ಗಳಿಸಬೇಕೆನ್ನುವ ಮನಸ್ಸಿದ್ದರೆ ಅದಕ್ಕೊಂದು ಒಳ್ಳೆ ದಾರಿಯಿದೆ. ನೀವೇನಾದರೂ ನಿಮ್ಮ ಹೊಲಗಳಲ್ಲಿ ಈ ಬೆಳೆ ಬೆಳದದ್ದೇ ವರ್ಷಕ್ಕೆ 10 ಲಕ್ಷಗಳವರೆಗೂ ಆದಾಯ ಗಳಿಸಬಹುದು. ಹೇಗೆ ಎನ್ನುವುದನ್ನು ಈ ಸುದ್ದಿಯಲ್ಲಿ ತಿಳಿದುಕೊಳ್ಳಿ

  • Local18
  • |
  •   | Rajasthan, India
First published:

  • 18

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ಶ್ರೀಗಂಧ, ಇದನ್ನು ಅಶ್ವಗಂಧ ಎಂತಲೂ ಕರೆಯುತ್ತಾರೆ. ಒಂದು ಮೀಟರ್ ಎತ್ತರಕ್ಕೆ ನೇರವಾಗಿ ಬೆಳೆಯುತ್ತದೆ. ಇದನ್ನು ತೋಟಗಳಲ್ಲಿ, ಹಿತ್ತಲಿನಲ್ಲಿ ಅಥವಾ ಒಳಾಂಗಣದಲ್ಲಿ ಪಾಟ್​ಗಳಲ್ಲೂ ಬೆಳೆಸಬಹುದು.

    MORE
    GALLERIES

  • 28

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ಸಾಂಪ್ರದಾಯ ಬೆಳೆಗಿಂತಲೂ ವಾಣಿಜ್ಯ ಮತ್ತು ಔಷಧೀಯ ಸಸ್ಯಗಳ ಕೃಷಿ ಹೆಚ್ಚು ಲಾಭದಾಯಕವಾಗಿದೆ. ಅಶ್ವಗಂಧವನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಆರು ತಿಂಗಳೊಳಗೆ ಅಶ್ವಗಂಧ ಕೊಯ್ಲಿಗೆ ಸಿದ್ಧವಾಗುತ್ತದೆ. ಇದರ ಬೇರುಗಳನ್ನು ಬೇರ್ಪಡಿಸಿ ಪುಡಿ ಮಾಡಿ ಕೇವಲ ಆರು ತಿಂಗಳ ಅವಧಿಯಲ್ಲಿ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸಬಹುದು.

    MORE
    GALLERIES

  • 38

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ರಾಜಸ್ಥಾನದ ಭರತ್‌ಪುರದ ರೈತರೊಬ್ಬರು ಅಶ್ವಗಂಧವನ್ನು ಬೆಳೆಯುವ ಮೂಲಕ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ರೈತ ಜ್ಯೋತಿರಾಮ್ ಗುರ್ಜರ್ ಹೇಳುವಂತೆ, 4 ಎಕರೆ ಭೂಮಿಯಲ್ಲಿ ಅಶ್ವಗಂಧ ಬೆಳ ಬೆಳೆದರೆ ವರ್ಷಕ್ಕೆ 10 ಲಕ್ಷ ರೂಪಾಯಿ ಸಂಪಾದಿಸಬಹುದು.

    MORE
    GALLERIES

  • 48

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ತಮ್ಮ ಗ್ರಾಮದಲ್ಲಿ ಸಾಂಪ್ರದಾಯಿಕ ಕೃಷಿ ಮಾಡುವ ಬದಲು ವಾಣಿಜ್ಯ ಬೆಳೆಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಇದರಿಂದ ಗ್ರಾಮದ ಶೇ.90ರಷ್ಟು ರೈತರ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಕಳೆದ  5 ವರ್ಷಗಳಿಂದ ತನ್ನ ಸ್ನೇಹಿತ ಮಾನ್ ಸಿಂಗ್ ಎಂಬುವರು ಅಶ್ವಗಂಧ ಮತ್ತು ತುಳಸಿಯನ್ನು ಬೆಳೆದು, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದರು, ಆದ್ದರಿಂದ ನಾನು ಕೂಡ ಅಶ್ವಗಂಧ ಬೆಳಯುತ್ತಿದ್ದೇನೆ ಎಂದು ಜ್ಯೋತಿರಾಮ್ ಗುರ್ಜರ್ ತಿಳಿಸಿದ್ದಾರೆ.

    MORE
    GALLERIES

  • 58

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ತಾವೂ 2 ವರ್ಷಗಳ ಹಿಂದೆ ಸುಮಾರು 4 ಎಕರೆ ಜಮೀನಿನಲ್ಲಿ ಅಶ್ವಗಂಧ ಬೇಸಾಯ ಆರಂಭಿಸಿದ್ದು, 5 ರಿಂದ 6 ತಿಂಗಳಲ್ಲಿ ಎಕರೆಗೆ  5 ಕ್ವಿಂಟಾಲ್ ವರೆಗೆ ಫಸಲು ಬರುತ್ತದೆ. ಒಂದು ವರ್ಷದಲ್ಲಿ ನಾಲ್ಕು ಎಕರೆಯಲ್ಲಿ 10 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದೇನೆ. ಇದನ್ನು ಆಯುರ್ವೇದ ಔಷಧ ತಯಾರಿಸುವ ಕಂಪನಿಗಳು ನೇರವಾಗಿ ಈ ಬೆಳೆ ಖರೀದಿಸುವುದರಿಂದ ಉತ್ತಮ ಬೆಲೆ ಸಿಗುತ್ತದೆ ಎನ್ನುತ್ತಾರೆ ಗುರ್ಜರ್​.

    MORE
    GALLERIES

  • 68

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ಅಶ್ವಗಂಧವನ್ನು ನಮ್ಮ ದೇಶದಲ್ಲಿ ಹೆಚ್ಚಾಗಿ ಹರಿಯಾಣ ಪಂಜಾಬ್, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಳೆಸಲಾಗುತ್ತದೆ. ಅಶ್ವಗಂಧ ತೊಗಟೆ, ಬೀಜಗಳು ಮತ್ತು ಅದರ ಹಣ್ಣುಗಳನ್ನು ವಿವಿಧ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.

    MORE
    GALLERIES

  • 78

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ಅಶ್ವಗಂಧದ ಬೇರುಗಳನ್ನು ಶ್ರೇಣೀಕರಿಸಿ ಚೆನ್ನಾಗಿ ಒಣಗಿಸಿದ ನಂತರ ಸಂಗ್ರಹಿಸಿಟ್ಟರೆ ಹೆಚ್ಚಿನ ಬೆಲೆ ಸಿಗುತ್ತದೆ. ಇದು ಎಕರೆಗೆ 250-300 ಕೆಜಿ ಒಣ ಬೇರುಗಳು ಮತ್ತು 80 ಕೆಜಿ ಬೀಜವನ್ನು ನೀಡುತ್ತದೆ. ಎಕರೆಗೆ ರೂ. 15 ಸಾವಿರದವರೆಗೆ ಖರ್ಚು ಮಾಡಿದರೆ, ಮಾರುಕಟ್ಟೆ ಬೆಲೆಗೆ ಅನುಗುಣವಾಗಿ, ನೀವು 35,000 - 45,000 ರೂಪಾಯಿ ನಿವ್ವಳ ಆದಾಯವನ್ನು ಪಡೆಯಬಹುದು.

    MORE
    GALLERIES

  • 88

    Success Story: ಅನೇಕ ರೋಗಗಳಿಗೆ ರಾಮಬಾಣ, ಇದನ್ನ ಬೆಳೆದರೆ ಸಿಗುತ್ತೆ ಲಕ್ಷ ಲಕ್ಷ ಹಣ! ವರ್ಷಕ್ಕೆ 10 ಲಕ್ಷಗಳಿಸುತ್ತಿದ್ದಾರೆ ಈ ರೈತ

    ಸಾಮಾನ್ಯ ಮಳೆಯಾದರೆ ಅಶ್ವಗಂಧ ಬೆಳೆಗೆ ನೀರುಣಿಸುವ ಅಗತ್ಯವಿಲ್ಲ. ಅಗತ್ಯವಿದ್ದರೆ ನೀರಾವರಿ ಮಾಡಬಹುದು. ಕಾಲಕಾಲಕ್ಕೆ ಗದ್ದೆಯಿಂದ ಕಳೆ ತೆಗೆಯುವ ಮೂಲಕ ಕಾಲಕಾಲಕ್ಕೆ ಉತ್ತಮ ಫಸಲು ಪಡೆಯಬಹುದು.

    MORE
    GALLERIES