Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

ಈ ಶ್ರೀಗಂಧದ ಮರಗಳು ಮುಂದಿನ ಎರಡು ವರ್ಷಗಳ ನಂತರ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ಧವಾಗಲಿವೆ. ಈ ಬೇಸಾಯವು ದೀರ್ಘಾವಧಿಯ ಫಸಲಾಗಿದೆ, ಆದರೆ, ಅದು ನಿಮ್ಮನ್ನು ಕಾಯುವಂತೆ ಮಾಡುವುದರ ಜೊತೆಗೆ ಒಮ್ಮೆಲೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಎನ್ನುತ್ತಾರೆ ರೈತ ರೂಪ್​ ಸಿಂಗ್

First published:

  • 17

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ರಾಜಸ್ಥಾನದ ಭರತ್‌ಪುರ ಜಿಲ್ಲೆಯ ರೈತ ರೂಪ್ ಸಿಂಗ್ ವೈಷ್ಣವ್ ಅವರು ಕೃಷಿಯಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಲೇ ಬಿಳಿ ಶ್ರೀಗಂಧವನ್ನು ಬೆಳೆಸುವ ಮೂಲಕ ಅದ್ಭುತವನ್ನೇ ಸೃಷ್ಟಿಸಿದ್ದಾರೆ.

    MORE
    GALLERIES

  • 27

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ರೂಪ್​ ಸಿಂಗ್ 13 ವರ್ಷಗಳ ಹಿಂದೆ ಸ್ನೇಹಿತರ ಸಲಹೆಯ ಮೇರೆಗೆ ಕರ್ನಾಟಕದಿಂದ ಸುಮಾರು 500 ಬಿಳಿ ಶ್ರೀಗಂಧದ ಸಸಿಗಳನ್ನು ತಂದು ತಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಶ್ರೀಗಂಧದ ಕೃಷಿ ಆರಂಭಿಸಿದ್ದರು.

    MORE
    GALLERIES

  • 37

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ಈ ಶ್ರೀಗಂಧದ ಮರಗಳು ಮುಂದಿನ ಎರಡು ವರ್ಷಗಳ ನಂತರ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ಧವಾಗಲಿವೆ. ಈ ಬೇಸಾಯವು ದೀರ್ಘಾವಧಿಯ ಫಸಲಾಗಿದೆ, ಆದರೆ, ಅದು ನಿಮ್ಮನ್ನು ಕಾಯುವಂತೆ ಮಾಡುವುದರ ಜೊತೆಗೆ ಒಮ್ಮೆಲೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ ಎನ್ನುತ್ತಾರೆ ರೈತ ರೂಪ್​ ಸಿಂಗ್.

    MORE
    GALLERIES

  • 47

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ರೂಪ್ ಸಿಂಗ್ ವೈಷ್ಣವ್ ಅವರ ಯಶಸ್ಸನ್ನು ಕಂಡು ಅಕ್ಕಪಕ್ಕದ ರೈತರೂ ಕೂಡ ಬಿಳಿಚಂದನ ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ. ಎರಡು ಹೆಕ್ಟೇರ್‌ನಲ್ಲಿ ಕಟಾವಿಗೆ ತಯಾರಾಗಿರುವ ಶ್ರೀಗಂಧದ ಕೃಷಿಗೆ ತಾವೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದೇನೆ ಎಂದು ರೂಪ್​ ಸಿಂಗ್ ತಿಳಿಸಿದ್ದಾರೆ.

    MORE
    GALLERIES

  • 57

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ಹಲವು ವರ್ಷಗಳಿಂದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದೆ. ಶ್ರೀಗಂಧದ ಕೃಷಿ ಬಗ್ಗೆ ಬಾಬಾ ಹರ್ಭಜನ್ ಸಿಂಗ್ ಅವರಿಂದ ಸ್ಫೂರ್ತಿ ಪಡೆದೆ. ಅವರ ಸಲಹೆ ಮೇರೆಗೆ 13 ವರ್ಷಗಳ ಹಿಂದೆ ಕರ್ನಾಟಕದಿಂದ 500 ಬಿಳಿ ಶ್ರೀಗಂಧದ ಗಿಡಗಳನ್ನು ತಂದು ಎರಡು ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿದೆ. ಈಗ ಇನ್ನೆರಡು ವರ್ಷಗಳಲ್ಲಿ ಶ್ರೀಗಂಧ ಮರ ಕಟಾವಿಗೆ ಬರಲಿದೆ.

    MORE
    GALLERIES

  • 67

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ರೂಪ್​ಸಿಂಗ್ ನೆಟ್ಟಿದ್ದ 500 ಶ್ರೀಗಂಧದ ಗಿಡಗಳಲ್ಲಿ ಕೇವಲ 200 ಸದೃಢ ಮರವಾಗಿವೆ. ಅವರು ಈ ಶ್ರೀಗಂಧದ ಕೃಷಿಗೆ ರಾಸಾಯನಿಕ ಗೊಬ್ಬರದ ಬದಲು ಸಾವಯವ ಗೊಬ್ಬರ ಬಳಸಿದ್ದಾರೆ. ಬಿಳಿ ಚಂದನವನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ ಮತ್ತು ಇದು ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಔಷಧ ತಯಾರಿಕೆಗೂ ಬಳಕೆಯಾಗಲಿದೆ.

    MORE
    GALLERIES

  • 77

    Farmer Success Story: ಕರ್ನಾಟಕದ ಶ್ರೀಗಂಧ ಬೆಳೆದ ರಾಜಸ್ಥಾನ್ ರೈತ, 10 ಕೋಟಿ ಆದಾಯದ ನಿರೀಕ್ಷೆಯಲ್ಲಿ ರೂಪ್ ​ಸಿಂಗ್

    ಪ್ರಸ್ತುತ ಮಾರುಕಟ್ಟೆಯಲ್ಲಿ ಬಿಳಿ ಶ್ರೀಗಂಧದ ಮರದ ಬೆಲೆ ಐದರಿಂದ ಆರು ಲಕ್ಷ ರೂಪಾಯಿ ಇದೆ. ನನ್ನ ಎರಡು ಹೆಕ್ಟೇರ್ ಜಮೀನಿನಲ್ಲಿ ಸುಮಾರು 200 ಶ್ರೀಗಂಧದ ಮರಗಳು ಉಳಿದಿವೆ. ಈ ಮರಗಳ ಮಾರಾಟ ಮಾಡಿದರೆ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಸಿಗಲಿದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಲಾಭ ನೀಡುವ ಈ ಕೃಷಿಯನ್ನು ನೋಡಿ ಸುತ್ತಮುತ್ತಲಿನ ರೈತರೂ ಕೂಡ ಶ್ರೀಗಂಧದ ಕೃಷಿ ಆರಂಭಿಸಿದ್ದಾರೆ ಎಂದು ರೂಪ್ ಸಿಂಗ್ ಹೇಳಿದ್ದಾರೆ.

    MORE
    GALLERIES