Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

ಸೀಗಡಿ ಸಾಕಾಣಿಕೆ ಜಲಚರ ಸಾಕಣೆಯ ವ್ಯವಹಾರವಾಗಿದೆ, ಇದನ್ನು ಮುಖ್ಯವಾಗಿ ಸೇವನೆಗಾಗಿ ಸಾಕಲಾಗುತ್ತದೆ. ಪಂಜಾಬ್​ನಲ್ಲಿ ಕೆಲವು ಬಂಜರು ಭೂಮಿಗಳಲ್ಲಿ ನೀರಿನ ಅಭಾವದಿಂದ ಸಂಕಷ್ಟ ಎದುರಿಸಿದ್ದ ರೈತರು, ಇದೀಗ ಸೀಗಡಿ ಸಾಕಾಣಿಕೆಯಿಂದ ಲಕ್ಷ ಲಕ್ಷ ಆದಾಯಗಳಿಸುತ್ತಿದ್ದಾರೆ.

First published:

  • 17

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಸೀಗಡಿ ಸಾಕಾಣಿಕೆಯ ಪ್ರದೇಶ ಕಳೆದ ಒಂದು ವರ್ಷದಲ್ಲಿ 600 ಎಕರೆಗಳಿಗೆ ದ್ವಿಗುಣಗೊಂಡಿದೆ. ಇದು ರಾಜ್ಯದಲ್ಲಿ ಸೀಗಡಿ ಸಾಕಾಣಿಕೆಯಲ್ಲಿ ಪ್ರಮುಖ ಜಿಲ್ಲೆಯಾಗಿದೆ.

    MORE
    GALLERIES

  • 27

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಸೀಗಡಿ ಸಾಕಾಣಿಕೆ ಮೂಲಕ ಪಂಜಾಬ್​ ರೈತರು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಪಂಜಾಬ್‌ನ ಮಾಲ್ವಾ ಪ್ರದೇಶದಲ್ಲಿ, ವಿಶೇಷವಾಗಿ ಮುಕ್ತಸರ್ ಜಿಲ್ಲೆಯಲ್ಲಿ ರೈತರಿಗೆ ಸೀಗಡಿ ಲಾಭದಾಯಕ ವ್ಯವಹಾರವಾಗಿಬದಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಮುಕ್ತಸರದಲ್ಲಿ ಸೀಗಡಿ ಸಾಕಾಣಿಕೆ ಪ್ರದೇಶವು 280 ಎಕರೆಗಳಿಂದ 600 ಎಕರೆಗಳಿಗೆ ದ್ವಿಗುಣಗೊಂಡಿದೆ. ಇದು ರಾಜ್ಯದಲ್ಲಿ ಸೀಗಡಿ ಸಾಕಾಣಿಕೆಯಲ್ಲಿ ಅಗ್ರಗಣ್ಯ ಜಿಲ್ಲೆಯಾಗಿದೆ.

    MORE
    GALLERIES

  • 37

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಈ ಹಿಂದೆ ನೀರಿನ ಸಮಸ್ಯೆಯಿಂದ ಇಲ್ಲಿ ಭೂಮಿ ಬರಡಾಗಿತ್ತು. ಆದರೆ ಇದೀಗ ಸೀಗಡಿ ಕೃಷಿಯ ಮೂಲಕ ರೈತರು ಆ ಬರಡು ಭೂಮಿಯಲ್ಲೇ ಲಕ್ಷಾಂತರ ಆದಾಯದ ಮೂಲವಾಗಿದೆ. ಸೀಗಡಿಗಳ ಬೆಳವಣಿಗೆಗೆ ಹೆಚ್ಚಿನ ಲವಣಾಂಶದ ಮಟ್ಟವನ್ನು ಹೊಂದಿರುವ ನೀರಿನ ಅಗತ್ಯವಿರುತ್ತದೆ.

    MORE
    GALLERIES

  • 47

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಈ ಜಿಲ್ಲೆಯಲ್ಲಿ ಲವಣಾಂಶದ ಮಟ್ಟವು ಅಗತ್ಯಕ್ಕಿಂತ ಹೆಚ್ಚಿನದಾಗಿದೆ, ಇದು ಸೀಗಡಿ ಸಾಕಾಣಿಕೆಗೆ ಸೂಕ್ತವಾದ ಸ್ಥಳವಾಗಿದೆ. 1 ಹೆಕ್ಟೇರ್ (2.5 ಎಕರೆ) ಸೀಗಡಿ ಸಾಕಾಣಿಕೆ ಮಾಡಬೇಕಾದರೆ ಸುಮಾರು 14 ಲಕ್ಷ ರೂಪಾಯಿಗಳು ಅಗತ್ಯವಿದೆ. ಇದರಲ್ಲಿ ಕೊಳವನ್ನು ತೋಡುವುದು, ಬೀಜ, ಆಹಾರ ಮತ್ತು ಉಪಕರಣಗಳನ್ನು ಖರೀದಿಸುವುದು ಮುಂತಾದ ವೆಚ್ಚಗಳು ಸೇರಿವೆ.

    MORE
    GALLERIES

  • 57

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಮೂಲಕ ಸರ್ಕಾರವು ಸೀಗಡಿ ಸಾಕಾಣಿಕೆಗೆ ಸಹಾಯಧನವನ್ನು ನೀಡಲಿದೆ. ಸಾಮಾನ್ಯ ವರ್ಗಕ್ಕೆ 40% ಮತ್ತು SC/ST ಮತ್ತು ಮಹಿಳೆಯರಿಗೆ 60% ಸಬ್ಸಿಡಿ ಸಿಗಲಿದೆ. ಇದು ರೈತರಿಗೆ ಪ್ರಾರಂಭದ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    MORE
    GALLERIES

  • 67

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಸೀಗಡಿಯ ಸರಾಸರಿ ಬೆಲೆ ಕೆಜಿಗೆ 400 ರೂಪಾಯಿಗಳಾಗಿದ್ದು, ಇದರಿಂದ ರೈತರು ವರ್ಷಕ್ಕೆ ಎಕರೆಗೆ 4-5 ಲಕ್ಷ ರೂಪಾಯಿ ಲಾಭಗಳಿಸಬಹುದು. ಸೀಗಡಿ ಸುಮಾರು 120 ದಿನಗಳಲ್ಲಿ ಮಾರಾಟಕ್ಕೆ ಸಿದ್ಧವಾಗುತ್ತದೆ. ಸೀಸನ್ ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿ, ನವೆಂಬರ್ ಅಂತ್ಯದವರೆಗೆ ಇರುತ್ತದೆ. ಕರಾವಳಿ ರಾಜ್ಯಗಳ ವ್ಯಾಪಾರಿಗಳು ಮುಕ್ತಸರದಿಂದ ಸೀಗಡಿ ಖರೀದಿಸಲು ಬರುತ್ತಾರೆ. ನಂತರ ಅದನ್ನು ಹವಾನಿಯಂತ್ರಿತ ವ್ಯಾನ್‌ಗಳಲ್ಲಿ ಸಾಗಿಸಲಾಗುತ್ತದೆ.

    MORE
    GALLERIES

  • 77

    Shrimp Farming: ಬಂಜರು ಭೂಮಿಯಲ್ಲಿ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ ಇಲ್ಲಿನ ರೈತರು, ಅನ್ನದಾತರ ಕೈ ಹಿಡಿದ ಮತ್ಸ್ಯ ಕೃಷಿ

    ಸೀಗಡಿ ಸಾಕಾಣಿಕೆಯ ಯಶಸ್ಸು ಮುಕ್ತಸರ ಜಿಲ್ಲೆಯ ರೈತರ ಜೀವನದ ಮೇಲೆ ಮಹತ್ವದ ಪರಿಣಾಮ ಬೀರಿದೆ. ಇದು ಬರಡು ಭೂಮಿಯಲ್ಲೆ ಫಲವತ್ತಾದ ಭೂಮಿಯಲ್ಲಿ ತೆಗೆಯುವಷ್ಟು ಆದಾಯದ ಮೂಲವನ್ನು ಒದಗಿಸಿದೆ. ಜೊತೆಗೆ ಸರ್ಕಾರದ ಸಹಾಯಧನವು ಈ ಕೃಷಿ ಪ್ರಾರಂಭಿಸಲು ಸುಲಭವಾಗಿಸುತ್ತಿದೆ. ನೀರಿನ ಸಮಸ್ಯೆಯಿಂದ ಏನೂ ಮಾಡಲಾಗದೇ ಬಿಟ್ಟಿದ್ದ ಭೂಮಿಯಲ್ಲಿ ಈಗ ರೈತರು ಸರ್ಕಾರದ ನೆರವಿನಿಂದ ಲಕ್ಷಾಂತರ ಆಧಾಯ ಕಾಣುವಂತಾಗಿದೆ.

    MORE
    GALLERIES