Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

ಪ್ರಸ್ತುತ ದಿನಗಳಲ್ಲಿ ಎಕರೆಗಟ್ಟಲೇ ಜಮೀನಿದ್ದರೂ ಯಾರೂ ವ್ಯವಸಾಯ ಮಾಡುವ ಯೋಚನೆ ಮಾಡುವವರಿಲ್ಲ. ಆದರೆ ಇಲ್ಲೊಬ್ಬ ಯುವಕ ವಾರ್ಷಿಕ 13 ಲಕ್ಷ ಇರುವ ವೇತನವನ್ನು ಬಿಟ್ಟು ವ್ಯವಸಾಯಕ್ಕೆ ಇಳಿದು ಇಂದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

First published:

  • 17

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಪ್ರಸ್ತುತ ದಿನಗಳಲ್ಲಿ ಉದ್ಯೋಗ ಸಿಕ್ಕರೆ ಸಾಕು ಎಂದು ಯುವಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ತಮ್ಮ ಬಳಿ ಎಕರೆಗಟ್ಟಲೆ ಜಮೀನಿದ್ದರೂ ಕೂಡ ಯಾರೂ ವ್ಯವಸಾಯ ಮಾಡುವ ಯೋಚನೆ ಮಾಡುವವರಿಲ್ಲ. ಆದರೆ ಇಲ್ಲೊಬ್ಬ ಯುವಕ ವಾರ್ಷಿಕ 13 ಲಕ್ಷ ಇರುವ ವೇತನವನ್ನು ಬಿಟ್ಟು ವ್ಯವಸಾಯಕ್ಕೆ ಇಳಿದು ಇಂದು ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 27

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಮಧ್ಯಪ್ರದೇಶದಲ್ಲಿ ಗುನಾದ ಅಮೀಶ್ ವಿಶಾಲ್ ಎಂಬ ಯುವಕ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಮಾಡಿದ್ದಾರೆ. ಓದುತ್ತಿರುವಾಗಲೇ ಕ್ಯಾಂಪಸ್ ಆಯ್ಕೆ ಕೂಡ ನಡೆದಿದ್ದು, ಆತನನ್ನು ಜರ್ಮನಿ ಮೂಲದ ಓವರ್ ಸೀಸ್ ಟ್ರಾವೆಲ್ ಕಂಪನಿಯಲ್ಲಿ ಸಲಹೆಗಾರ ಹುದ್ದೆ ಸಿಕ್ಕಿದೆ. ಅವರಿಗೆ ಈ ಉದ್ಯೋಗಕ್ಕಾಗಿ ವಾರ್ಷಿಕವಾಗಿ 13 ಲಕ್ಷ ಪ್ಯಾಕೇಜ್ ಕೂಡ ಸಿಕ್ಕಿತ್ತು. ಅವರು ಇಂದೋರ್‌ನಲ್ಲಿ ಕೆಲಸ ಆರಂಭಿಸಿದ್ದರು. ಆದರೆ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ, ಅವರು ಮನೆಗೆ ಮರಳಬೇಕಾಯಿತು.

    MORE
    GALLERIES

  • 37

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಇದಾದ ನಂತರ ಅಮೀಶ್ ತಮ್ಮ ತಂದೆ ತ್ರಿವೇಣಿ ಪ್ರಸಾದ್ ಅವರೊಂದಿಗೆ ಕೃಷಿಯಲ್ಲಿ ಕೈ ಜೋಡಿಸಿದರು. ಆ ನಂತರ ಮತ್ತೆ ಇಂಜಿನಿಯರ್​ ಕೆಲಸದ ಬಗ್ಗೆ ಯೋಚಿಸಲಿಲ್ಲ. ಹೊಸ ತಂತ್ರಜ್ಞಾನದ ಮೂಲಕ ಕೃಷಿ ಮಾಡಲು ಪ್ರಾರಂಭಿಸಿದರು.

    MORE
    GALLERIES

  • 47

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಅಮೀಶ್​ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಕಲ್ಲಂಗಡಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದರೊಂದಿಗೆ 25ರಿಂದ 30 ಮಂದಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ಅವರ ಬಳಿ 25 ಮಹಿಳೆಯರು ಮತ್ತು 5 ಪುರುಷರು ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷದ ​ಹಿಂದೆ ಕೃಷಿ ಆರಂಭಿಸಿದಾಗ 5 ಜನ ಕೆಲಸದವರಿದ್ದರು. ಇದೀಗ ಕೃಷಿ ಮೂಲಕ ತಾವೂ ಹಣಗಳಿಸುತ್ತಿರುವುದಲ್ಲದೆ, ಇಂದು ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

    MORE
    GALLERIES

  • 57

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಅಮೀಶ್​ ಸಂಪೂರ್ಣ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಕಲ್ಲಂಗಡಿ ಕೃಷಿ ಮಾಡಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ. ಇದರೊಂದಿಗೆ 25ರಿಂದ 30 ಮಂದಿಗೆ ಉದ್ಯೋಗವನ್ನೂ ನೀಡುತ್ತಿದ್ದಾರೆ. ಅವರ ಬಳಿ 25 ಮಹಿಳೆಯರು ಮತ್ತು 5 ಪುರುಷರು ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷದ ​ಹಿಂದೆ ಕೃಷಿ ಆರಂಭಿಸಿದಾಗ 5 ಜನ ಕೆಲಸದವರಿದ್ದರು. ಇದೀಗ ಕೃಷಿ ಮೂಲಕ ತಾವೂ ಹಣಗಳಿಸುತ್ತಿರುವುದಲ್ಲದೆ, ಇಂದು ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

    MORE
    GALLERIES

  • 67

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಆದರೆ ಅಮೀಶ್​ಗೆ ಮೊದಲ ಬೇಸಾಯದಲ್ಲಿ ಹಾಕಿದ ಬಂಡವಾಳ ಮಾತ್ರ ಹಿಂದಿರುಗಿದೆ. ಆದರೆ ಎರಡನೇ ಬಾರಿಗೆ ಎರಡು ಪಟ್ಟು ಲಾಭ ಸಿಗಲು ಪ್ರಾರಂಭವಾಗಿದೆ. ಈ ಕರ್ಬೂಜ ಕೆಲವೊಮ್ಮೆ ಹೊಲದಲ್ಲೇ ಹೆಚ್ಚು ಮಾರಾಟವಾಗುತ್ತದೆ. ಕೆಲವೊಮ್ಮೆ ಪಾಟ್ನಾದ ಮಂಡಿಗೆ ಮಾರಾಟ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತದೆ. ಒಂದು ಕಿಲೋ ಕರ್ಬೂಜಕ್ಕೆ ಮಾರುಕಟ್ಟೆ ದರ 25 ರಿಂದ 40 ರೂಪಾಯಿದೆ. ವೈಜ್ಞಾನಿಕ ವಿಧಾನದಲ್ಲಿ ಒಂದು ಎಕರೆಯಲ್ಲಿ ಕೃಷಿ ಮಾಡಲು ಅಮೀಶ್​ 50 ರಿಂದ 70 ಸಾವಿರ ರೂಪಾಯಿ ಖರ್ಚುಮಾಡುತ್ತಿದ್ದಾರೆ.

    MORE
    GALLERIES

  • 77

    Success Story: 13 ಲಕ್ಷ ಸಂಬಳದ ಕೆಲ್ಸ ಬಿಟ್ಟ, ಕೃಷಿಗೆ ಇಳಿದ! ಕರ್ಬೂಜ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರ್

    ಆದರೆ ಒಂದು ಎಕರೆ ಕೃಷಿಯಿಂದ ಅಮೀಶ್ 2.5 ಲಕ್ಷದಿಂದ 3 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. ವಿಶಾಲ್ ಒಟ್ಟು 4 ಎಕರೆಯಲ್ಲಿ ಕರ್ಬೂಜ ಕೃಷಿ ಮಾಡಿದ್ದಾರೆ. ಒಂದು ಋತುವಿನಲ್ಲಿ 35 ರಿಂದ 40 ಕ್ವಿಂಟಾಲ್ ಕಲ್ಲಂಗಡಿ ಉತ್ಪಾದನೆಯಾಗುತ್ತದೆ. ಒಟ್ಟಾರೆ 4 ಎಕರೆಯಲ್ಲಿ ಸೀಸನ್​ಗೆ 10 ರಿಂದ 12 ಲಕ್ಷ ಸಂಪಾದಿಸುತ್ತಿದ್ದಾರೆ. ಅಮೀಶ್ ವಿಶಾಲ್ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕೃಷಿ ಮೇಲೆ ತೋರುವ ಆಸಕ್ತಿ ಸಾವಿರಾರು ಯುವಕರಿಗೆ ಮಾದರಿಯಾಗಿದೆ.

    MORE
    GALLERIES