Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

Success Story: ಎರಡು ತಲೆಮಾರಿನಿಂದ ಬೆಳೆಯುತ್ತಿದ್ದ ಸಾಂಪ್ರದಾಯಿಕ ಬೆಳೆಯನ್ನು ಕೈಬಿಟ್ಟ ಯುವಕ ವೈಜ್ಞಾನಿಕ ಕೃಷಿ ಮೂಲಕ ಗ್ಯಾಲನ್​ ಬೆಳೆ ಬೆಳೆದು ಒಂದು ಎಕರೆಯಲ್ಲಿ 6 ಸಂಪಾದಿಸುತ್ತಿದ್ದಾರೆ.

  • Local18
  • |
  •   | Kolhapur, India
First published:

  • 19

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ನಮ್ಮ ತಾತ ಮುತ್ತಾತಂದಿರು ಹಲವು ದಶಕಗಳ ಕಾಲ ಅವರಿಗೆ ಗೊತ್ತಿರುವ ಕೃಷಿಯನ್ನು ಮಾಡುತ್ತಾ ಬಂದಿದ್ದರು. ಆದರೆ ನಾವು ಕೂಡ ಅದೇ ಕೃಷಿಯನ್ನು ಮುಂದುವರಿಸಿದರೆ ಹೇಗೆ? ಹೊಸದನ್ನು ಮಾಡಲು ಪ್ರಯತ್ನಿಸಬೇಕು. ನಾವು ಏನೆಂದು ಜಗತ್ತಿಗೆ ತೋರಿಸಬೇಕು. ಅದಕ್ಕಾಗಿ ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕು ಎಂದು ಇಲ್ಲೊಬ್ಬ ಯುವ ರೈತ ಆಲೋಚಿಸಿ, ಯಶಸ್ಸು ಸಾಧಿಸಿದ್ದಾನೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಸಾಮಾನ್ಯವಾಗಿ ರೈತರು ಬೆಳೆಯುತ್ತಿದ್ದ ಕಬ್ಬಿನ ಬೆಳೆಯನ್ನು ಕೈಬಿಟ್ಟು, ಬದಲಾಗಿ ಅವರ ಪ್ರಾಯೋಗಾತ್ಮಕ ಕೃಷಿ ಮಾಡಿ ಸೂಪರ್ ಸಕ್ಸಸ್ ಕಂಡಿದ್ದಾರೆ.

    MORE
    GALLERIES

  • 29

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಯುವ ರೈತನ ಹೆಸರು ಸುದರ್ಶನ್ ಜಾಧವ್. ಆತನಿಗೆ ರಿಸ್ಕ್​ ತೆಗೆದುಕೊಳ್ಳುವ ಧೈರ್ಯ ಸಾಕಷ್ಟಿತ್ತು. ಆದ್ದರಿಂದಲೇ ವಂಶ ಪಾರಂಪರ್ಯವಾಗಿ ಮಾಡಿಕೊಂಡು ಬಂದಿದ್ದ ಕಬ್ಬು ಬೆಳೆಯನ್ನು ಬಿಟ್ಟು ಬದನೆ ಕೃಷಿ ಆರಂಭಿಸಿದ್ದಾರೆ. ಇದೀಗ ಇಡೀ ಊರೆ ಈತನ ಕಡೆಗೆ ತಿರುಗಿ ನೋಡುತ್ತಿದೆ. ಭರ್ಜರಿ ಇಳುವರಿಯೊಂದಿಗೆ ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾರೆ.

    MORE
    GALLERIES

  • 39

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಸುದರ್ಶನ ಜಾಧವ್​ಗೆ ಕೊಲ್ಲಾಪುರದ ಹಾತಕಣಾಂಗ್ಲೆ ತಾಲೂಕಿನ ಪಟ್ಟಣಕೊಡೋಳಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಒಟ್ಟು ಒಂಬತ್ತು ಎಕರೆ ಜಮೀನಿದ್ದು, ಏಳು ಎಕರೆ ನೀರಾವರಿ ಇದೆ. ಇವರು ಕೇವಲ ಎರಡು ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದಾರೆ.

    MORE
    GALLERIES

  • 49

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಜಾದವ್ ಕುಟುಂಬ ಹತ್ತು ವರ್ಷಗಳಿಂದ ಆಧುನಿಕ ತಂತ್ರಜ್ಞಾನ ಬಳಸಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದೆ. ಇದರಿಂದ ವರ್ಷಕ್ಕೆ ಸುಮಾರು ಹನ್ನೆರಡು ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾರೆ.

    MORE
    GALLERIES

  • 59

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಸುದರ್ಶನ್ ಅವರು ಒಂದು ಎಕರೆ ಪ್ರದೇಶದಲ್ಲಿ ಗ್ಯಾಲನ್ ತಳಿಯ ಬದನೆ ನಾಟಿ ಮಾಡಿದ್ದಾರೆ. ಕಡಿಮೆ ಜಾಗದಲ್ಲಿ ಹೆಚ್ಚು ಇಳುವರಿ ನೀಡುವುದು ಈ ಬಗೆಯ ಬದನೆಕಾಯಿಯ ವಿಶೇಷತೆ. ಈ ಬದನೆಕಾಯಿ ಸುಮಾರು 800 ಗ್ರಾಮ್​ನಿಂದ 1 ಕೆಜಿ ವರೆಗೆ ತೂಗುತ್ತದೆ.

    MORE
    GALLERIES

  • 69

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಈ ಬೆಳೆ 70 ದಿನಗಳಿಂದ ಫಲ ಬಿಡಲು ಪ್ರಾರಂಭಿಸುತ್ತದೆ. ಅದರ ನಂತರ 3 ರಿಂದ 4 ತಿಂಗಳವರೆಗೆ ಇಳುವರಿ ಮುಂದುವರಿಯುತ್ತದೆ. ಇದೀಗ ಒಂದು ಎಕರೆ ಜಮೀನಿನಲ್ಲಿ ಸರಾಸರಿ 40 ಟನ್ ಗ್ಯಾಲನ್ ಬದನೆ ಇಳುವರಿ ಬಂದಿದೆ. ಈ ಗ್ಯಾಲನ್ ಬದನೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತದೆ.

    MORE
    GALLERIES

  • 79

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ತೋಟದಿಂದ ಈ ಬದನೆಯನ್ನು ಕೊಲ್ಲಾಪುರ ಹಾಗೂ ಮುಂಬೈ, ಪುಣೆ, ಬೆಳಗಾವಿ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬದನೆಯನ್ನು ಸಾಮಾನ್ಯವಾಗಿ ಸಸ್ಯಹಾರದಂತೆ ಬಳಸುವುದರ ಜೊತೆಗೆ ಮೀನಿನೊಂದಿಗೆ ತಿನ್ನಲು ಬಳಸಲಾಗುತ್ತದೆ

    MORE
    GALLERIES

  • 89

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಬದನೆಯಿಂದಲೇ ಪ್ರತಿ ವರ್ಷ ಸರಾಸರಿ 8 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಸುದರ್ಶನ್ ಈ ಕೃಷಿಗಾಗಿ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಒಟ್ಟಾರೆ ವರ್ಷಕ್ಕೆ 6 ಲಕ್ಷ ರೂಪಾಯಿಯನ್ನ ಬದನೆಯಿಂದಲೇ ಪಡೆಯುತ್ತಿದ್ದಾರೆ.

    MORE
    GALLERIES

  • 99

    Success Story: ಆಧುನಿಕ ಬೇಸಾಯದ ಮೂಲಕ ತರಕಾರಿ ಬೆಳೆದ ಯುವ ರೈತ! ಒಂದು ಎಕರೆಗೆ 6 ಲಕ್ಷ ಆದಾಯ

    ಸುದರ್ಶನ್ ಅವರ ಕೃಷಿ ಇತರ ರೈತರಿಗೆ ಸ್ಫೂರ್ತಿದಾಯಕವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಮಾಡಿರುವ ಈ ಕೃಷಿಯನ್ನು ನೋಡಲು ಇತರ ರೈತರು ಆಗಾಗ ಇವರ ಜಮೀನಿಗೆ ಬರುತ್ತಿದ್ದಿ, ಎಲ್ಲರೂ ಮಾಹಿತಿ ತಿಳಿದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    MORE
    GALLERIES