ಬಾಳೆಹಣ್ಣು ಭಾರತದಲ್ಲಿ ಜನಪ್ರಿಯ ಹಣ್ಣು. ದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಬಾಳೆಹಣ್ಣನ್ನು ಬೆಳೆಯಲಾಗುತ್ತದೆ. ಬಾಳೆ ಕೃಷಿಯಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಅನೇಕ ರೈತರು ಬಾಳೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ರೈತರು ಈಗ ಸಾಂಪ್ರದಾಯಿಕ ಕೃಷಿಯ ಗೋಧಿ ಮತ್ತು ಮೆಕ್ಕೆಜೋಳವನ್ನು ಬಿಟ್ಟು ವಾಣಿಜ್ಯ ಬೆಳೆಗಳತ್ತ ಸಾಗುತ್ತಿದ್ದಾರೆ.
ಲಾಭ ಎಷ್ಟು ಗೊತ್ತಾ? - ಮಾಹಿತಿದಾರರ ಪ್ರಕಾರ, ಒಂದು ಎಕರೆಗೆ ಬಾಳೆ ಕೃಷಿ ಮಾಡಲು ಸುಮಾರು 70,000 ರಿಂದ 80,000ದ ವರೆಗೆ ಖರ್ಚಾಗುತ್ತದೆ. ಆದರೆ ಈ ಬೆಳೆಯಲ್ಲಿ ಸುಲಭವಾಗಿ 3.5ರಿಂದ-4 ಲಕ್ಷ ರೂಪಾಯಿ ಆದಾಯಗಳಿಸಬಹುದು. ಇತರ ಬೆಳೆಗಳಿಗೆ ಹೋಲಿಸಿದರೆ, ಈ ಕೃಷಿಯಲ್ಲಿ ಅಪಾಯ ಕಡಿಮೆ. ಬಾಳೆ ಬೆಳೆಗಳನ್ನು ಬೆಳೆಯಲು ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ವೆಚ್ಚವು ಬಹಳ ಕಡಿಮೆಯಾಗುತ್ತದೆ. ಸಾವಯವ ಗೊಬ್ಬರ ಬಳಸಿದರೆ ಒಳ್ಳೆ ಫಸಲು ಸಿಗುತ್ತದೆ. ಬಾಳೆ ಕಟಾವಿನ ನಂತರ ಉಳಿಯುವ ತ್ಯಾಜ್ಯವನ್ನು ಹೊಲದ ಹೊರಗೆ ಎಸೆಯದೇ ಅದು ಹೊಲದಲ್ಲೇ ಬಿಟ್ಟರೆ ಅದು ಅತ್ಯುತ್ತಮ ಗೊಬ್ಬರವಾಗಲಿದೆ.
ಈ ಪ್ರಭೇದ ಸೂಕ್ತ - ಮಾಹಿತಿಯ ಪ್ರಕಾರ, ಇದನ್ನು ವರ್ಷವಿಡೀ ಬೆಳೆಸಲಾಗುತ್ತದೆ. ಸಿಂಗಾಪುರದ ರೋಬಸ್ಟಿ ತಳಿಯ ಬಾಳೆಯನ್ನು ಕೃಷಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಈ ತಳಿಯ ಬಾಳೆಯಲ್ಲಿ ಉತ್ಪಾದನೆ ಹೆಚ್ಚು. ವಾಮನ್, ಸಲ್ಭೋಗ್, ಅಲ್ಪನ್ ಮತ್ತು ಪುವನ್ ತಳಿಗಳು ಸಹ ಉತ್ತಮ ಬಾಳೆ ತಳಿಗಳಾಗಿವೆ. ಬಾಳೆ ಕೃಷಿಯಲ್ಲಿ ಕಡಿಮೆ ಅಪಾಯ ಮತ್ತು ಹೆಚ್ಚಿನ ಲಾಭದ ಕಾರಣ, ರೈತರು ಅದರ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ.
ಹಣ್ಣಿನ ಹೊರತಾಗಿ ಎಲೆಗಳನ್ನು ಮಾರಾಟ ಮಾಡುವುದು: ಬಾಳೆ ಎಲೆಗಳನ್ನು ಮಾರಾಟ ಮಾಡುವುದರಿಂದ ಬಾಳೆ ಕೃಷಿಯಲ್ಲಿ ದುಪ್ಪಟ್ಟು ಲಾಭವನ್ನು ಪಡೆಯಬಹುದು. ಇದರ ಎಲೆಗಳನ್ನು ರೆಸ್ಟೋರೆಂಟ್ಗಳಲ್ಲಿ ಪ್ಲೇಟ್ಗಳಾಗಿ ಬಳಸಲಾಗುತ್ತದೆ. ಮಾಹಿತಿ ಪ್ರಕಾರ ಒಂದು ಗಿಡದಿಂದ 40 ರಿಂದ 70 ಕೆಜಿ ಉತ್ಪನ್ನ ಸಿಗುತ್ತದೆ. ಮತ್ತೊಂದೆಡೆ, ಸಕ್ಕರೆ ಮತ್ತು ಖನಿಜ ಲವಣಗಳು ಕ್ಯಾಲ್ಸಿಯಂ ಮತ್ತು ರಂಜಕವು ಬಾಳೆಹಣ್ಣಿನಲ್ಲಿ ಹೇರಳವಾಗಿ ಕಂಡುಬರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಬಾಳೆ ಹಣ್ಣಾದಾಗ ತಿನ್ನಲು, ಕಾಯಿ ಇರುವಾಗ ತರಕಾರಿ ರೂಪದಲ್ಲಿ ಬಳಸುತ್ತಾರೆ. ಇದನ್ನು ಚಿಪ್ಸ್ ತಯಾರಿಸಲು ಬಳಸಲಾಗುತ್ತದೆ.