Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

ಉತ್ತರ ಪ್ರದೇಶದ ಮೀರತ್​ನ ರೈತ ಯೋಗೇಶ್ ಬಲ್ಯಾನ್ ಎಂಬುವವರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಹೈಟೆಕ್ ಕಬ್ಬಿನ ವಿವಿಧ ಉತ್ಪನ್ನ ತಯಾರಿಸುವ ವಾಹನ ಆವಿಷ್ಕಾರ ಮಾಡಿದ್ದಾರೆ. ಏಳು ಲಕ್ಷ ರೂಪಾಯಿಯಿಂದ ಈ ವಾಹನವನ್ನು ಸಿದ್ಧಪಡಿಸಿದ್ದಾರೆ. ಯುಪಿಯಲ್ಲಿ ಕೃಷಿ ಮೇಳಗಳು ನಡೆಯುವಲ್ಲೆಲ್ಲಾ ಈ ವಾಹನವು ಪ್ರಮುಖ ಆಕರ್ಷಣೆಯಾಗಿದೆ.

  • Local18
  • |
  •   | Uttar Pradesh, India
First published:

  • 19

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಉತ್ತರ ಪ್ರದೇಶದ ಮೀರತ್​ನ ರೈತ ಯೋಗೇಶ್ ಬಲ್ಯಾನ್ ಎಂಬುವವರು ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಹೈಟೆಕ್ ಕಬ್ಬಿನ ವಿವಿಧ ಉತ್ಪನ್ನ ತಯಾರಿಸುವ ವಾಹನ ಆವಿಷ್ಕಾರ ಮಾಡಿದ್ದಾರೆ. ಏಳು ಲಕ್ಷ ರೂಪಾಯಿಯಿಂದ ಈ ವಾಹನವನ್ನು ಸಿದ್ಧಪಡಿಸಿದ್ದಾರೆ. ಯುಪಿಯಲ್ಲಿ ಕೃಷಿ ಮೇಳಗಳು ನಡೆಯುವಲ್ಲೆಲ್ಲಾ ಈ ವಾಹನವು ಪ್ರಮುಖ ಆಕರ್ಷಣೆಯಾಗಿದೆ. ಈ ವಾಹನದಲ್ಲಿ ಕಬ್ಬಿನ ರಸ ಸದಾ ಸಿದ್ಧವಾಗಿರುತ್ತದೆ. ಇವರು ಕಬ್ಬಿನ ಹಾಲಿನಿಂದ ಟೀ ಮತ್ತು ಕಬ್ಬಿನ ಕುಲ್ಫಿಯನ್ನೂ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

    MORE
    GALLERIES

  • 29

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಯೋಗೇಶ್ ಬಲ್ಯಾನ್ ಅವರು ತಯಾರಿಸಿರುವ ಕಬ್ಬಿನ ರಸದಿಂದ ತಯಾರಿಸಿದ ಟೀ ಮತ್ತು ಕಬ್ಬಿನ ರಸದಿಂದ ತಯಾರಿಸಿದ ಕುಲ್ಫಿಯನ್ನು ಸವಿದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಹೊಸ ಐಡಿಯಾದಿಂದ ಯೋಗೇಶ್​ಗೆ ಭಾರೀ ಲಾಭವಾಗುತ್ತಿದೆ.

    MORE
    GALLERIES

  • 39

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಫೆಬ್ರವರಿ 23, 2023 ರಿಂದ ನೈಸರ್ಗಿಕ ಕಬ್ಬಿನ ರಸ ಮತ್ತು ಹಸುವಿನ ಹಾಲಿನಿಂದ ಕುಲ್ಫಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಅವರ ಟ್ರಾಲಿಯಲ್ಲಿ ಕಬ್ಬಿನ ರಸ, ಕಬ್ಬಿನ ಟೀ (ಮೂರು ವಿಧದ ಟೀ), ಕಬ್ಬಿನ ಕುಲ್ಫಿ ಸದಾ ತಯಾರಾಗಿರುತ್ತದೆ.

    MORE
    GALLERIES

  • 49

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಶುದ್ಧವಾದ ಜ್ಯೂಸ್ ಮತ್ತು ಕುಲ್ಫಿಯನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ಕಬ್ಬಿನ ಜ್ಯೂಸ್ ಎಂದು ಮಾರಾಟ ಮಾಡಿದರೆ ಕಬ್ಬು ಮಾರಾಟ ಮಾಡುವುದಕ್ಕಿಂಲೂ ಮೂರ್ನಾಲ್ಕು ಪಟ್ಟು ಹೆಚ್ಚು ಆದಾಯ ಬರುತ್ತದೆ. ಆದರೆ ಅದನ್ನೇ ಕುಲ್ಫಿಯಾಗಿ ಮಾರಾಟ ಮಾಡಿದರೆ ಆದಾಯ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ಯೋಗೇಶ್.

    MORE
    GALLERIES

  • 59

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಇದಕ್ಕೂ ಮುನ್ನ ಮೀರತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯಕ್ಕೆ ಬಂದಿದ್ದ ಯುಪಿ ಗವರ್ನರ್ ಆನಂದಿ ಬೆನ್ ಪಟೇಲ್ ಅವರು ಕಬ್ಬಿನ ಜ್ಯೂಸ್, ಟೀ ಮತ್ತು ಕುಲ್ಫಿ ಮಾರಾಟ ಮಾಡುವ ಹೈಟೆಕ್ ವಾಹನವನ್ನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೇ ವೇಳೆ ರಾಜ್ಯ ಕೃಷಿ ಸಚಿವ ಡಾ.ಸಂಜೀವ್ ಬಲ್ಯಾನ್ ಕೂಡ ಈ ಹೈಟೆಕ್ ವಾಹನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    MORE
    GALLERIES

  • 69

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ರೈತ ಯೋಗೇಶ್ ಬಲ್ಯಾನ್ ಅವರು 2000 ರಲ್ಲಿ ಕೃಷಿ ವಿಜ್ಞಾನದಲ್ಲಿ ಪದವಿ ಮುಗಿಸಿದ ನಂತರ ಮುಜಾಫರ್‌ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ 3 ವರ್ಷಗಳ ಪ್ರಾಜೆಕ್ಟ್​ ಒಂದರಲ್ಲಿ ಕೆಲಸ ಮಾಡಿದ್ದಾರೆ. ಆ ನಂತರ ನೈಸರ್ಗಿಕ ಕೃಷಿ ಮಾಡಲು ನಿರ್ಧರಿಸಿದ್ದಾರೆ. 2016ರಲ್ಲಿ ತಮ್ಮ 1 ಎಕರೆಯಲ್ಲಿ ಸಾವಯವ ಕೃಷಿ ಆರಂಭಿಸಿದ್ದರು.

    MORE
    GALLERIES

  • 79

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಮೊದಲ 2 ವರ್ಷದಲ್ಲಿ ಕೃಷಿ ಚೆನ್ನಾಗಿತ್ತು, ಆದರೆ ನಂತರದ 2 ವರ್ಷ ಮಾರುಕಟ್ಟೆ ಸಮಸ್ಯೆ ಎದುರಾಯಿತು. ಹಾಗಾಗಿ ಬೆಲ್ಲ ತಯಾರಿಸಲು ಆರಂಭಿಸಿದರು. ಆ ಬೆಲ್ಲಕ್ಕೆ ಒಳ್ಳೆಯ ಮನ್ನಣೆ ಸಿಕ್ಕಿತು. ನಂತರ ಕಬ್ಬಿನ ಚಹಾ ಮತ್ತು ಕುಲ್ಫಿಯ ಕಲ್ಪನೆ ಬಂದಿತು. ಇದೀಗ ಇವು ಪಶ್ಚಿಮ ಉತ್ತರ ಪ್ರದೇಶದಲ್ಲಿ ಖ್ಯಾತಿ ಪಡೆದುಕೊಂಡಿವೆ.

    MORE
    GALLERIES

  • 89

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಸದ್ಯ ಯೋಗೇಶ್​ 5 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡುತ್ತಿದ್ದಾರೆ. ಮುಖ್ಯ ಬೆಳೆಯಾಗಿ ಕಬ್ಬು ಬೆಳೆಯುತ್ತಿದ್ದಾರೆ. ಜೊತೆಗೆ ಮನೆಗೆ ಬೇಕಾದ ಸಾಸಿವೆ, ಗೋಧಿ, ತರಕಾರಿ, ಹಣ್ಣಿನ ಗಿಡಗಳನ್ನೂ ನೆಟ್ಟಿದ್ದಾರೆ. ಜೊತೆಗೆ ತಾವೇ ಬೆಳೆದ ಕಬ್ಬಿನಿಂದ ಬೆಲ್ಲ ತಯಾರಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಯೋಗೇಶ್​ ನೈಸರ್ಗಿಕ ಕೃಷಿಯಲ್ಲಿ ಎಕರೆಗೆ 30 ಟನ್ ಕಬ್ಬು ಬೆಳೆಯುತ್ತಿದ್ದಾರೆ

    MORE
    GALLERIES

  • 99

    Sugarcane: ಕಬ್ಬಿನ ಹಾಲಿನಿಂದ ಟೀ, ಕುಲ್ಫಿನೂ ತಯಾರಿಸಬಹುದಂತೆ! ಕಬ್ಬು ಮಾರಾಟಕ್ಕಿಂತಲೂ 4 ಪಟ್ಟು ಹೆಚ್ಚು ಆದಾಯಗಳಿಸುತ್ತಿದ್ದಾನೆ ಈ ರೈತ!

    ಮೀರತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಕೃಷಿ ವಿಶ್ವವಿದ್ಯಾಲಯದ ವಿಸಿ ಡಾ.ಎ.ಕೆ.ಸಿಂಗ್ ಕೂಡ ಯೋಗೇಶ್ ಬಲ್ಯಾನ್ ಅವರನ್ನು ಶ್ಲಾಘಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯದಲ್ಲೂ ಕಬ್ಬು ಆಧಾರಿತ ವಿಶೇಷ ಕೋರ್ಸ್ ಆರಂಭಿಸಲಾಗುವುದು ಎಂದು ಡಾ.ಎ.ಕೆ.ಸಿಂಗ್ ತಿಳಿಸಿದ್ದಾರೆ.

    MORE
    GALLERIES