ಈ ಸಂದರ್ಭದಲ್ಲಿ ನ್ಯೂಸ್ 18 ಜೊತೆ ಮಾತನಾಡಿದ ಮಲ್ಲೇಶ್, ರೈತ ಕುಟುಂಬದಲ್ಲಿ ಹುಟ್ಟಿ, ಬಾಲ್ಯದಿಂದಲೇ ತಂದೆಯೊಂದಿಗೆ ಕೃಷಿ ಕಲಿತೆ. ಹಗಲಿನಲ್ಲಿ ತಂದೆಯೊಂದಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ, ಅದರೆ ಲಾಭವೇನೂ ಸಿಗುತ್ತಿರಲಿಲ್ಲ ಎಂದರು. ನಾವು ಹಾಕಿದ ಬಂಡವಾಳಕ್ಕೆ ಸಾಕಷ್ಟು ಇಳುವರಿ ಬರದಿದ್ದಾಗ ಸಾಕಷ್ಟು ತೊಂದರೆ ಅನುಭವಿಸಿದ್ದೇವೆ. ಈ ಕಾರಣದಿಂದ ನಾವು ಪರ್ಯಾಯ ಬೆಳೆಗಳತ್ತ ಗಮನ ಹರಿಸಿದೆವು. ಕಾಲಕ್ಕೆ ತಕ್ಕ ತರಕಾರಿ ಬೆಳೆಯಲು ಪ್ರಾರಂಭಿಸಿದೆವು ಎಂದು ಮಲ್ಲೇಶ್ ತಿಳಿಸಿದ್ದಾರೆ.
ತರಕಾರಿಗಳು ರೈತನಿಗೆ ದೈನಂದಿನ ಆದಾಯವನ್ನು ನೀಡುವ ಬೆಳೆಗಳಾಗಿವೆ. ಋತುಮಾನಕ್ಕೆ ಅನುಗುಣವಾಗಿ ವಿವಿಧ ರೀತಿಯ ತರಕಾರಿ ಬೆಳೆಗಳನ್ನು ಬೆಳೆಯಬಹುದು. ಎಲ್ಲಾ ಸೀಸನ್ ತರಕಾರಿಗಳನ್ನು ಬೆಳೆಸುವುದು ತುಂಬಾ ಕೆಲಸವಾಗಿದೆ. ರೈತ ಮಲ್ಲೇಶ್ ಅವರ ಬಳಿ ಕೇವಲ 25 ಗುಂಟೆ ಜಮೀನಿದೆ. ಅದರಲ್ಲಿ ಹಾಗಲಕಾಯಿ, ಅಲಸಂದೆ, ಹೀರೆಕಾಯಿ, ಟೊಮ್ಯಾಟೋ, ಬದನೆ, ಕಪ್ಪು ಬದನೆ, ಸೋರೆಕಾಯಿ, ಚಪ್ಪರದ ಅವರೇಕಾಯಿ ಬೆಳೆಯುತ್ತಾರೆ.