ಜೂನ್ 4ಕ್ಕೆ ಕೇರಳ ಪ್ರವೇಶಿಸುತ್ತದೆ ಎಂದು ಹೇಳಲಾಗಿದ್ದ ಮಾನ್ಸೂನ್ ಆಗಮನ ಇನ್ನೂ ಕೆಲವು ದಿನ ಮುಂದೆ ಹೋಗಲಿದೆ. ಈ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
2/ 7
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂಗಾರು ಮಳೆ ಪ್ರಾರಂಭವಾಗಲು ಇನ್ನೂ ಮೂರರಿಂದ ನಾಲ್ಕು ದಿನ ತಡವಾಗಲಿದೆ ಎಂದು ತಿಳಿಸಿದೆ.
3/ 7
ಜೂನ್ 8ರವರೆಗೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
4/ 7
ಮ್ಯಾಂಡಸ್ ಚಂಡಮಾರುತ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪಗೊಳ್ಳಲಿದೆ. ಈ ಹಿನ್ನೆಲೆ ತಮಿಳುನಾಡು ಮತ್ತು ಪುದುಚೇರಿ ಭಾಗದಲ್ಲಿ ಎನ್ಡಿಆರ್ಎಫ್ ತಂಡ ಅಲರ್ಟ್ ಆಗಿದೆ.
5/ 7
ಕಳೆದ ವರ್ಷ ಮೇ 29 ರಂದು ಕೇರಳಕ್ಕೆ ಮಾನ್ಸೂನ್ ಆಗಮನವಾಗಿತ್ತು. 2018 ರಲ್ಲಿ ಮೇ 29, 2019 ರಲ್ಲಿ ಜೂನ್ 8, 2020 ರಲ್ಲಿ ಜೂನ್ 1, 2021 ರಲ್ಲಿ ಜೂನ್ 3ಕ್ಕೆ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿದ್ದವು.
6/ 7
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಸಹ ಜೂನ್ 9ರವರೆಗೆ ಮಳೆಯಾಗಲಿದೆ.
7/ 7
ಸದ್ಯ ಮುಂಗಾರು ಮಳೆ ವಿಳಂಬವಾದ ಕಾರಣ ಕೃಷಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
First published:
17
Monsoon 2023: ಮಳೆಯ ಆಗಮನ ಇನ್ನಷ್ಟು ವಿಳಂಬ
ಜೂನ್ 4ಕ್ಕೆ ಕೇರಳ ಪ್ರವೇಶಿಸುತ್ತದೆ ಎಂದು ಹೇಳಲಾಗಿದ್ದ ಮಾನ್ಸೂನ್ ಆಗಮನ ಇನ್ನೂ ಕೆಲವು ದಿನ ಮುಂದೆ ಹೋಗಲಿದೆ. ಈ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಕಳೆದ ವರ್ಷ ಮೇ 29 ರಂದು ಕೇರಳಕ್ಕೆ ಮಾನ್ಸೂನ್ ಆಗಮನವಾಗಿತ್ತು. 2018 ರಲ್ಲಿ ಮೇ 29, 2019 ರಲ್ಲಿ ಜೂನ್ 8, 2020 ರಲ್ಲಿ ಜೂನ್ 1, 2021 ರಲ್ಲಿ ಜೂನ್ 3ಕ್ಕೆ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿದ್ದವು.