Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

ಇಂದು ಬೆಂಗಳೂರಿನಲ್ಲಿ ಬೆಳಗ್ಗೆ 11.45 ರಿಂದ ಮಧ್ಯಾಹ್ನ 12.15ರ ನಡುವೆ ಭೂಮಿ ಕಂಪಿಸಿದ ಅನುಭವ ಆಗಿದೆ. ರಾಜರಾಜೇಶ್ವರಿ ನಗರ, ಕೆಂಗೇರಿ, ಯಶವಂತಪುರ ಮತ್ತು ಮೈಸೂರು ರಸ್ತೆಯಲ್ಲಿ ಭೂಮಿ ಕಂಪನ ಅನುಭವ ಆಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

First published:

  • 15

    Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

    ಇತ್ತ ರಾಮನಗರ ಜಿಲ್ಲೆಯ ಮಾಗಡಿ, ಬಿಡದಿ, ಚನ್ನಪಟ್ಟಣದಲ್ಲಿಯೂ ಭೂಮಿ ಕಂಪಿಸಿದೆ ಎಂದು ಹೇಳಲಾಗುತ್ತಿದೆ. ಇನ್ನು ಬೆಳಗ್ಗೆ 10.15ಕ್ಕೆ ಮಂಡ್ಯದಲ್ಲಿ ಎರಡು ಬಾರಿ ದೊಡ್ಡ ಶಬ್ದದೊಂದಿಗೆ ಭೂಮಿ ಕಂಪನವಾಗಿದೆ. ಈ ವೇಳೆ ಮನೆಯ ಕಿಟಕಿ, ಬಾಗಿಲು ಮತ್ತು ವಸ್ತುಗಳು ಅಲುಗಾಡಿವೆ ಎಂದು ಜನರು ಹೇಳಿದ್ದಾರೆ.

    MORE
    GALLERIES

  • 25

    Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

    ತುಂಬಾನೇ ಜೋರಾಗಿ ಶಬ್ಧ ಕೇಳಿದ ಕೂಡಲೇ ಜನರು ಮನೆಯಿಂದ ಹೊರ ಬಂದಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಕನಕಪುರ ನಿವಾಸಿ ನಾಗರತ್ನ, ಕಟ್ಟಡ ಬಿದ್ದ ಹಾಗೆ ಅನ್ನಿಸಿತು. ಇತ್ತ ನನ್ನ ಜೊತೆ ಫೋನ್ ನಲ್ಲಿ ಮಾಡುತ್ತಿದ್ದ ಗೆಳತಿ ಸಹ ಭೂಮಿ ಕಂಪಿಸಿರೋದ ಬಗ್ಗೆ ಹೇಳಿದರು. ನಂತರ ಟಿವಿಯಲ್ಲಿ ಸುದ್ದಿ ನೋಡಿ ವಿಷಯ ತಿಳಿಯಿತು ಎಂದರು.

    MORE
    GALLERIES

  • 35

    Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

    ನ್ಯೂಸ್ 18 ಜೊತೆ ಮಾತನಾಡಿದ ಭೂಗರ್ಭ ಶಾಸ್ತ್ರಜ್ಷ  ರಾದ ಅಶೋಕ್ ಮಾತನಾಡಿ, ಭೂ ಕಂಪಿಸಿದ ಅನುಭವ ನನಗೂ ಆಯ್ತು. ಮೊದಲಿಗೆ ಗುಡುಗು, ಸಿಡಿಲು ಇರಬಹುದು ಅಂತ ಅನ್ನಿಸಿದ್ತೂ ಅನುಮಾನ ಬಂತು, ಒಂದು ಕ್ಷಣ ನಾವಿದ್ದ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದುರ ಹೇಳಿದರು,. ಈ ತರಹದ ಸಣ್ಣ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸುತ್ತಿರುತ್ತದೆ, ಆದ್ರೆ ಆತಂಕಪಡುವ ಅಗತ್ಯವಿಲ್ಲ ಎಂದರು.

    MORE
    GALLERIES

  • 45

    Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

    ಈ ಭೂ ಕಂಪನದ ಬಗ್ಗೆ ಅಧ್ಯಯನ ಮಾಡಬೇಕಿದೆ. ಕಂಪನಕ್ಕೆ ಒಂದೊಂದು ಕಾರಣಗಳು ಇರುತ್ತವೆ. ಆದ್ರೆ ಬೆಂಗಳೂರು ಸೇಫ್ ಝೋನ್ ಆಗಿದೆ. ಭೂಮಿ ಅಂತರಾಳದಲ್ಲಿ ಗಟ್ಟಿ ಪದರು ಶಿಲೆಗಳನ್ನು ಹೊಂದಿರುವ ಕಾರಣ ಭೂ ಕಂಪನ ಆಗಲಾರದು. ಈ ಅನುಭವದ ಬಗ್ಗೆ ಇಲಾಖೆ ಅಧಿಕೃತ ಹೇಳಿಕೆ ಬಳಿಕ ಸ್ಪಷ್ಟವಾಗಲಿದೆ ಎಂದು ಪ್ರೊ.ಅಶೋಕ್ ಹೇಳಿದರು.

    MORE
    GALLERIES

  • 55

    Earthquake: ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ಕಂಪನದ ಅನುಭವ: ಭೂ ವಿಜ್ಞಾನ ಇಲಾಖೆ ಹೇಳಿದ್ದೇನು?

    ನಮಗೆ ಬಂದಿರೋ ಮಾಹಿತಿ ಪ್ರಕಾರ  ಕೆಂಗೇರಿ, ಹೆಮ್ಮಿಗೆಪುರದಲ್ಲಿ 12.15 ರಲ್ಲಿ ಕಂಪನ ಆಗಿದೆ ಅಂತ ಕೇಳಿದ್ದೀವಿ. ಇದನ್ನ ಕರ್ನಾಟಕ ರಾಜ್ಯ ಡಿಸಸ್ಟರ್ ಮ್ಯಾನೇಜ್‌ಮೆಂಟ್‌ ಸ್ಟಡಿ ಮಾಡಿದ್ದಾರೆ. ಪ್ರಾಥಮಿಕ ವರದಿ ಪ್ರಕಾರ ಯಾವುದೆ ಟ್ರಿಮ್ಮರ್ಸ್ ಇಲ್ಲ ಅಂತ ಗೊತ್ತಾಗಿದೆ.  ನಮಗೂ ಈಗಲೇ ಮಾಹಿತಿ ಬಂದಿರೋದು. ನಾನಾ ಕಾರಣಗಳಿಂದ ಹೀಗೇ ಆಗಿರಬಹುದು. ನಮ್ಮ ಇಲಾಖೆಯವರು ತನಿಖೆ ಮಾಡುತ್ತಾರೆ ಎಂದು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕ ಸಿ ವಿ ರಾಮನ್ ಮಾಹಿತಿ ನೀಡಿದ್ದಾರೆ.

    MORE
    GALLERIES