2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

ಬೆಂಗಳೂರು: ಮುಂದೊಂದು ದಿನ ಕೆಂಪು ಕೋಟೆ ಮೇಲೆ ಭಾಗವಾಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ಖಂಡಿಸಿ, ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಅಹೋರಾತ್ರಿ ಧರಣಿ 2ನೇ ದಿನಕ್ಕೆ ಕಾಲಿಟ್ಟಿದೆ.

First published:

  • 18

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಇಂದೂ ಕೂಡ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲೇ ರಾತ್ರಿ ಕಳೆದಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸ್ಪೀಕರ್ ಸಚಿವಾಲಯದಿಂದ ವೆಜ್ ಊಟದ ವ್ಯವಸ್ಥೆ ಮಾಡಲಾಗಿದ್ದು, ವಿಜಯನಗರದ ಖಾಸಗಿ ಹೋಟೆಲ್ ನಿಂದ ಬಂದ ರಾತ್ರಿ ಊಟ ವಿಧಾನಸೌಧಕ್ಕೆ ಬಂದಿತು.

    MORE
    GALLERIES

  • 28

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಧರಣಿ ನಿರತ ಕೈ ನಾಯಕರು ಇಂಡಿಯಾ, ವೆಸ್ಟ್ ಇಂಡೀಸ್ ಕ್ರಿಕೆಟ್ ಪಂದ್ಯ ವೀಕ್ಷಿಸಿದರು. ಜೊತೆಗೆ ಇನ್ನು ಹಲವಡು ಮೊಬೈಲ್ ನಲ್ಲಿ ಮುಳಗಿದ್ದು ಕಂಡು ಬಂತು.

    MORE
    GALLERIES

  • 38

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಅಹೋರಾತ್ರಿ ಧರಣಿ ಸಂಬಂಧ ಕಾಂಗ್ರೆಸ್ ತನ್ನ ಶಾಸಕರಿಗೆ ವಿಪ್ ಕೂಡ ಜಾರಿ ಮಾಡಿದೆ. ಕ್ಷೇತ್ರದಲ್ಲಿ ನಿಗದಿಯಾಗಿರುವ ಕಾರ್ಯಕ್ರಮ ಮುಂದೂಡಿ ಆಹೋರಾತ್ರಿ ಧರಣಿ ಯಲ್ಲಿ ಭಾಗವಹಿಸುವಂತೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯ್ ಸಿಂಗ್ ಕಾಂಗ್ರೆಸ್ ನ ಶಾಸಕರಿಗೆ ವಿಪ್ ಜಾರಿ ಮಾಡಿದದ್ದಾರೆ.

    MORE
    GALLERIES

  • 48

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಅಹೋರಾತ್ರಿ ಧರಣಿ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಎಂಟ್ರಿ ಕೊಟ್ಟಿದೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯೋದು ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ ನೀಡಿದೆ.

    MORE
    GALLERIES

  • 58

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಸದನದ ಒಳಗೂ ಹೊರಗೂ ಹೋರಾಟ ಮಾಡಿ. ರಾಷ್ಟ್ರಮಟ್ಟದಲ್ಲಿ ಈ ವಿಚಾರ ಮುನ್ನೆಲೆಗೆ ಬರಬೇಕು. ದೇಶಾದ್ಯಂತ ಬಿಜೆಪಿ ಸಚಿವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಗೊತ್ತಾಗಲಿ. ಪಕ್ಷದ ವತಿಯಿಂದಲೂ ರಾಜ್ಯಾದ್ಯಂತ ಹೋರಾಟ ಮಾಡಿ ಎಂದು ಸೂಚಿಸಿದೆ. (ಧರಣಿಯ ಮೊದಲ ದಿನದ ಫೋಟೋ)

    MORE
    GALLERIES

  • 68

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಜೊತೆಗೆ ಅಹೋರಾತ್ರಿ ಧರಣಿ ಕೈ ಬಿಡಬೇಡಿ ಎನ್ನುವ ಮೂಲಕ ಇದನ್ನು ಬಿಜೆಪಿ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕರೆ ಮಾಡಿ ರಾಜ್ಯ ನಾಯಕರಿಗೆ ಈ ಬಗ್ಗೆ ವಿವರಿಸಿದ್ದಾರೆ. (ಧರಣಿಯ ಮೊದಲ ದಿನದ ಫೋಟೋ)

    MORE
    GALLERIES

  • 78

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಅಹೋರಾತ್ರಿಯಲ್ಲಿ ಭಾಗಿಯಾಗುವ ಮುನ್ನ ಬಿ ಕೆ ಹರಿಪ್ರಸಾದ್ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಎಂಬ ಮತಾಂದ ರಾಷ್ಟ್ರ ಧ್ವಜದ ಬಗ್ಗೆ ಕೆಟ್ಟದಾಗಿ ಮಾತಾಡ್ತಾನೆ. ತ್ರಿವರ್ಣ ಧ್ವಜವನ್ನು ನೋಡಿದ್ರೆ ನಮಗೆ ಸ್ಪೂರ್ತಿ ಬರುತ್ತೆ. ಬಿಜೆಪಿಯವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾಗಿಲ್ಲ. ಬಿಜೆಪಿಯವರು ಮಹಾತ್ಮರನ್ನು ಕೊಂದ ಗೂಡ್ಸೆ ಸಂತತಿಯಿಂದ ಬಂದವರು ಎಂದು ವಾಗ್ದಾಳಿ ನಡೆಸಿದರು.

    MORE
    GALLERIES

  • 88

    2ನೇ ದಿನಕ್ಕೆ ಕಾಲಿಟ್ಟ Congress ಅಹೋರಾತ್ರಿ ಧರಣಿ.. ಕ್ರಿಕೆಟ್ ಮ್ಯಾಚ್ ನೋಡಿದ ಧರಣಿ ನಿರತರು..!

    ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಜೈಲಿಗೆ ಹೋಗಿದ್ದೇನೆ ನಿಜ. ಆದರೆ ಮಂಚದ ಕೇಸ್ ನಲ್ಲಿ ಒಳಕ್ಕೆ ಹೋಗಿಲ್ಲ ಎಂದರು. ಯಾವುದೇ ಕಾರಣಕ್ಕೂ ಹೆದರೋ ಮಗಾನೇ ಅಲ್ಲ ನಾನು. ನಿಮ್ಮ ಕೈಯಲ್ಲಿ ಏನು ಮಾಡೋಕೆ ಆಗಲ್ಲ ಎಂದು ಬಿಜೆಪಿಗೆ ಸವಾಲು ಹಾಕಿದರು.

    MORE
    GALLERIES