Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

Bengaluru Mysuru Expressway ಹೆದ್ದಾರಿಯ ವಿಶೇಷತೆಗಳೇನು? ಈ ಹೆದ್ದಾರಿ ಯಾಕೆ ಅಷ್ಟೊಂದು ಸುದ್ದಿ ಮಾಡಿತ್ತು? ಈ ದಶಪಥ ಹೆದ್ದಾರಿಯಿಂದ ಏನೆಲ್ಲ ಅನುಕೂಲ? ಎಲ್ಲಾ ವಿವರ ಇಲ್ಲಿದೆ ನೋಡಿ

First published:

  • 110

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಬಹು ನಿರೀಕ್ಷಿತ ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ ವೇಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಂಡಿದೆ. ಇಡೀ ದೇಶವನ್ನೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಈ ದಶಪಥ ಹೆದ್ದಾರಿ ಕಳೆದ ಕೆಲ ತಿಂಗಳಿಂದಲೂ ಭಾರೀ ಸುದ್ದಿ ಮಾಡುತ್ತಿದೆ.

    MORE
    GALLERIES

  • 210

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಈ ಹೆದ್ದಾರಿ ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಕಡಿಮೆ ಮಾಡಲಿದೆ. ಸದ್ಯ ಈ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ಕೆಎಸ್ಆರ್​ಟಿಸಿ ಬಸ್​ಗಳು ಸೇರಿದಂತೆ ವಾಹನಗಳು ಎರಡು ಗಂಟೆಗಳ ಕಾಲ ತೆಗೆದುಕೊಳ್ಳುತ್ತಿವೆ.

    MORE
    GALLERIES

  • 310

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಮಾರ್ಚ್ 2014 ರಲ್ಲಿ, ಕೇಂದ್ರ ಮೇಲ್ಮೈ ಸಾರಿಗೆ ಸಚಿವಾಲಯವು ದೇಶಾದ್ಯಂತ ಕೆಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳಾಗಿ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿತ್ತು. ಈ ಪೈಕಿ ಬೆಂಗಳೂರು-ಮೈಸೂರು ಮಾರ್ಗವು ಸಹ ಒಂದಾಗಿತ್ತು. 2014ರಲ್ಲಿ ಯೋಜನೆಯ ಅಂದಾಜು ವೆಚ್ಚ 4,100 ಕೋಟಿ ರೂ.ಗಳಾಗಿದ್ದು, ಈಗ ಅದು ದುಪ್ಪಟ್ಟಾಗಿದೆ.

    MORE
    GALLERIES

  • 410

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಈ ಹೆದ್ದಾರಿಯು ಒಟ್ಟು 44 ಸಣ್ಣ ಸೇತುವೆಗಳನ್ನು ಹೊಂದಿದ್ದು 4 ರೈಲು ಮೇಲ್ಸೇತುವೆಗಳಿವೆ. ಈ ಹೆದ್ದಾರಿಯಲ್ಲಿ ಅಲ್ಲಲ್ಲಿ ಫುಡ್ ಕೋರ್ಟ್​ಗಳು, ವಿಶ್ರಾಂತಿಗೆ ಕೊಠಡಿಗಳು ಸಹ ನಿರ್ಮಾಣವಾಗಿವೆ.

    MORE
    GALLERIES

  • 510

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಈ ಎಕ್ಸ್​ಪ್ರೆಸ್​ವೇ ಕಾಮಗಾರಿಯು ಎರಡು ಹಂತಗಳಲ್ಲಿ ನಡೆದಿತ್ತು. ಬೆಂಗಳೂರಿನಿಂದ ಮದ್ದೂರು ತಾಲೂಕಿನ ನಿಡಘಟ್ಟಕ್ಕೆ ಸುಮಾರು 56 ಕಿ.ಮೀ ಕಾಮಗಾರಿ ಮೊದಲ ಹಂತದಲ್ಲಿ ನಡೆದರೆ, 61 ಕಿ. ಮೀ ಉದ್ದದ ಎರಡನೇ ಪ್ಯಾಕೇಜ್, ನಿಡಘಟ್ಟದಿಂದ ಮೈಸೂರಿಗೆ ಸಂಪರ್ಕಿಸಿದೆ.

    MORE
    GALLERIES

  • 610

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಮಾಹಿತಿಯ ಪ್ರಕಾರ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಗ್ರೀನ್​ಫೀಲ್ಡ್​ ಕಾರಿಡಾರ್ ಯೋಜನೆಯ ಭಾಗವಾಗಿದೆ.

    MORE
    GALLERIES

  • 710

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಪ್ರಯಾಣ ಸಮಯ ಇಳಿಕೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಹೆದ್ದಾರಿ ಈ ಭಾಗಕ್ಕೆ ಭರ್ಜರಿ ಕೊಡುಗೆ ನೀಡಲಿದೆ ಎಂದು ವ್ಯಾಖ್ಯಾನಿಸಲಾಗಿದೆ.

    MORE
    GALLERIES

  • 810

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಈ ಹೆದ್ದಾರಿಯ ಟೋಲ್ ಸಂಗ್ರಹದ ಬಗ್ಗೆಯೂ ಭಾರೀ ವಿವಾದ ಉಂಟಾಗಿತ್ತು. ದಶಪಥ ಹೆದ್ದಾರಿ ಉದ್ಘಾಟನೆ ಆಗುವ ಮುನ್ನವೇ ಟೋಲ್ ಸಂಗ್ರಹ ಆರಂಭದ ಬಗ್ಗೆ ಘೋಷಣೆಯಾಗಿತ್ತು. ಆದರೆ ವಿರೋಧದ ನಂತರ ಟೋಲ್ ಸಂಗ್ರಹ ನಿಲ್ಲಿಸಲಾಗಿತ್ತು.

    MORE
    GALLERIES

  • 910

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಅಷ್ಟೇ ಅಲ್ಲದೇ, ಬೆಂಗಳೂರು ಮೈಸೂರು ಹೆದ್ದಾರಿಗೆ ಯಾವ ಹೆಸರಿಡಬೇಕು ಎಂಬ ಚರ್ಚೆಗಳು ನಡೆದಿದ್ದವು. ಮೈಸೂರು ಒಡೆಯರ್ ಹೆಸರು, ಮಾಜಿ ಪ್ರಧಾನಿ ದೇವೇಗೌಡ, ನಟ ಅಂಬರೀಶ್ ಸೇರಿದಂತೆ ಹಲವರ ಹೆಸರನ್ನು ಇಡಬೇಕೆಂದು ಆಗ್ರಹ ಕೇಳಿಬಂದಿತ್ತು. ಆದರೆ ಸಂಸದ ಪ್ರತಾಪ್ ಸಿಂಹ್ ಕಾವೇರಿ ನದಿಯ ಹೆಸರನ್ನು ಇಡುವುದಾಗಿ ತಿಳಿಸಿದ್ದರು.

    MORE
    GALLERIES

  • 1010

    Bengaluru Mysuru Expressway: ಬೆಂಗಳೂರು-ಮೈಸೂರು ದಶಪಥದಿಂದ ಜನರಿಗೆ ಏನೇನು ಲಾಭ? ಇಲ್ಲಿದೆ ನೋಡಿ

    ಬೆಂಗಳೂರು ಮೈಸೂರು ಹೆದ್ದಾರಿಯ ನಿರ್ಮಿಸಿದ್ದು ಯಾರು ಎಂಬ ಕುರಿತು ಚರ್ಚೆ, ಟೀಕೆ ಎಲ್ಲವೂ ನಡೆದಿತ್ತು. ಇತ್ತ ಸಂಸದ ಪ್ರತಾಪ್ ಸಿಂಹ ಬಿಜೆಪಿಗೆ ಈ ಹೆದ್ದಾರಿಯ ಕ್ರೆಡಿಟ್ ನೀಡಿದರೆ ಮಾಜಿ ಪ್ರಧಾನಿ ಕನಸಿನ ಕೂಸು ಈ ಹೆದ್ದಾರಿ ಎಂದು ಜೆಡಿಎಸ್ ಪ್ರತಿಪಾದಿಸಿತ್ತು. ಜೊತೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರೂ ಈ ಹೆದ್ದಾರಿ ನಿರ್ಮಾಣದ ಕ್ರೆಡಿಟ್​ ಕೊಡುಗೆ ಕುರಿತು ಮಾತನಾಡಿದ್ದರು.

    MORE
    GALLERIES