Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

ಈ ಎಲ್ಲ ವಿದ್ಯಾರ್ಥಿಗಳು ಶಿಕ್ಷಕರ ಜೊತೆಗೂಡಿ ತಮ್ಮ ಕಲಿಕೆಯ ದಿನಗಳ ಹಲವು ಸವಿನೆನಪುಗಳನ್ನು ಹಂಚಿಕೊಂಡರು.

First published:

  • 17

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    ವಿದ್ಯಾರ್ಥಿಗಳ ಜೀವನ ರೂಪಿಸುವವರೇ ಶಿಕ್ಷಕರು. ತಮ್ಮ ಇಡೀ ಜೀವನವನ್ನೇ ವಿದ್ಯಾರ್ಥಿಗಳಿಗಾಗಿ ಮುಡಿಪಾಗಿಡುವ ಶಿಕ್ಷಕರನ್ನು ಎಷ್ಟೋ ವರ್ಷಗಳ ನಂತರ ಹಿಂದೆ ಕಲಿತಿದ್ದ ವಿದ್ಯಾರ್ಥಿಗಳು ಭೇಟಿ ಮಾಡಿದ್ರೆ ಆ ಭಾವುಕ ಸನ್ನಿವೇಶದ ಮಹತ್ವವೇ ಬೇರೆ. ಅಂತಹದೇ ಒಂದು ವಿಶಿಷ್ಟ ಕಾರ್ಯಕ್ರಮ ರಾಮನಗರದಲ್ಲಿ ನಡೆದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    ಅಂದು ಪುಟಾಣಿಯಾಗಿದ್ದವರೆಲ್ಲ ಇಂದು ಭವ್ಯ ಭಾರತದ ಸಾರ್ವಜನಿಕರು. ತಮ್ಮ ಕಿವಿ ಹಿಂಡಿದ್ದ ಶಿಕ್ಷಕರಿಗೆ ವಿದ್ಯಾರ್ಥಿಗಳೇ ಸೇರಿ ಆಯೋಜಿಸಿದ್ರು ನೋಡಿ ಸನ್ಮಾನ ಕಾರ್ಯಕ್ರಮ! ರಾಮನಗರ ತಾಲೂಕಿನ ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆದ ಸ್ನೇಹ ಸಂಗಮದ ಸಂಭ್ರಮವೇ ಈಭಾವುಕ ಕ್ಷಣ. ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ 1998ನೇ ಸಾಲಿನ ಹೈಸ್ಕೂಲ್ ವಿದ್ಯಾರ್ಥಿಗಳ ಸಮಾಗಮ ಆಗಿತ್ತು.

    MORE
    GALLERIES

  • 37

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    1998ನೇ ಸಾಲಿನಲ್ಲಿ ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಕಲಿತ 35 ವಿದ್ಯಾರ್ಥಿಗಳು, 21 ವಿದ್ಯಾರ್ಥಿನಿಯರು ಸೇರಿ ಒಟ್ಟು 56 ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    MORE
    GALLERIES

  • 47

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    ಬರೋಬ್ಬರಿ 25 ವರ್ಷಗಳಲ್ಲಿ ದೂರದ ಊರುಗಳಲ್ಲಿ ತಮ್ಮ ತಮ್ಮ ಜೀವನ ಕಟ್ಟಿಕೊಂಡಿದ್ದ ಈ ವಿದ್ಯಾರ್ಥಿಗಳ ಸಮಾಗಮಕ್ಕೆ ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆ ಸಾಕ್ಷಿಯಾಯಿತು.

    MORE
    GALLERIES

  • 57

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    ಈ ಎಲ್ಲ ವಿದ್ಯಾರ್ಥಿಗಳು ಶಿಕ್ಷಕರ ಜೊತೆಗೂಡಿ ತಮ್ಮ ಕಲಿಕೆಯ ದಿನಗಳ ಹಲವು ಸವಿನೆನಪುಗಳನ್ನು ಹಂಚಿಕೊಂಡರು. ಸ್ನೇಹಿತರ ಸ್ನೇಹ ಸಂಗಮವಷ್ಟೇ ಅಲ್ಲ, 25 ವರ್ಷಗಳ ಹಿಂದೆ ಕಲಿಸಿದ ಶಿಕ್ಷಕರನ್ನೂ ಸನ್ಮಾನಿಸಲಾಯಿತು. 

    MORE
    GALLERIES

  • 67

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯ ಹಿಂದಿ ಶಿಕ್ಷಕರಾಗಿದ್ದ ವೇಣುಗೋಪಾಲ್, ಸಮಾಜ ಶಿಕ್ಷಕರಾಗಿದ್ದ ವೆಂಕಟಪ್ಪ, ಗಣಿತ ಶಿಕ್ಷಕಿ ಶಾರದಾ ಅವರನ್ನು ಸನ್ಮಾನಿಸಲಾಯಿತು. ಸುಗ್ಗನಹಳ್ಳಿಯ ಗ್ರಾಮಾಂತರ ಪ್ರೌಢಶಾಲೆಯ ಪ್ರಸ್ತುತ ಶಿಕ್ಷಕರ ಪರವಾಗಿ ಗಣಿತ ಶಿಕ್ಷಕ ಮುತ್ತುರಾಜ್, ನಿಂಗರಾಜು ಸರ್​​ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ, 1998ರ ಈ ಬ್ಯಾಚ್​ನಲ್ಲಿ ಕಲಿತು ಕಳೆದ 20 ವರ್ಷಗಳಿಂದಲೂ CRPF ಯೋಧನಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾಂತರಾಜು ಅವರನ್ನೂ ಗೌರವಿಸಲಾಯಿತು.

    MORE
    GALLERIES

  • 77

    Ramanagara: 25 ವರ್ಷಗಳ ಹಿಂದೆ ಪಾಠ ಹೇಳಿದ್ದ ಶಿಕ್ಷಕರನ್ನು ಮರೆಯದ ವಿದ್ಯಾರ್ಥಿಗಳು!

    1998ರಲ್ಲಿ ಜೊತೆಗಿದ್ದು ಈಗ ಅಗಲಿರುವ ವಿದ್ಯಾರ್ಥಿಗಳು, ಅಗಲಿರುವ ಶಿಕ್ಷಕರು ಹಾಗೂ ಶಾಲೆ ಸಿಬ್ಬಂದಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ‘ಸ್ನೇಹ ಸಂಗಮ’ದ ಅಂಗವಾಗಿ ಶಾಲೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ನೀಡಿ, ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಲಾಯಿತು.

    MORE
    GALLERIES