Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

ಯಾಗಂಟಿ ಉಮಾ ಮಹೇಶ್ವರನ ದರ್ಶನ ಮಾಡಿದರೆ ತಮ್ಮ ಜೀವನದಲ್ಲಿ ದುರಾದೃಷ್ಟಗಳು ಮಾಯವಾಗುತ್ತವೆ ಎಂದು ಭಕ್ತರು ನಂಬುತ್ತಾರೆ.

  • Local18
  • |
  •   | Andhra Pradesh, India
First published:

  • 17

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ಹಸಿರು ಪರಿಸರದ ಪ್ರಕೃತಿಯ ನಡುವೆ ಇರುವ ಅದ್ಭುತ ದೇವಾಲಯವೊಂದು ಭಕ್ತರ ಗಮನ ಸೆಳೆಯುತ್ತಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಪರ್ವತಗಳ ಮಧ್ಯೆ ಇರುವ ಯಗಂಟಿ ದೇಗುಲದ ಕುತೂಹಲಕರ ಸಂಗತಿಗಳ ಬಗ್ಗೆ ನೀವು ತಿಳಿದುಕೊಳ್ಳಿ.

    MORE
    GALLERIES

  • 27

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ಅಗಸ್ತ್ಯ ಋಷಿ ಈ ಸ್ಥಳದಲ್ಲಿ ವೆಂಕಟೇಶ್ವರನಿಗೆ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು ಎಂದು ನಂಬಲಾಗಿದೆ. ಆದರೆ ವಿಗ್ರಹದ ಕಾಲ್ಬೆರಳ ಉಗುರು ಮುರಿದು ಬಿದ್ದಿದ್ದರಿಂದ ದೇಗುಲಕ್ಕೆ ನಿರ್ಮಿಸಲಾಗಿದ್ದ ಮೂರ್ತಿಯನ್ನು ಸ್ಥಾಪಿಸಲಾಗಲಿಲ್ಲ. ಇದರಿಂದ ಅಸಮಾಧಾನಗೊಂಡ ಅಗಸ್ತ್ಯ ಋಷಿ ತಪಸ್ಸು ಮಾಡಲು ನಿರ್ಧರಿಸಿದರು.

    MORE
    GALLERIES

  • 37

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ಅಗಸ್ತ್ಯರ ತಪಸ್ಸಿನಿಂದ ಸಂತೋಷಗೊಂಡ ಶಿವನ ಪ್ರತ್ಯಕ್ಷನಾಗಿ ಆ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವಂತೆ ತಿಳಿಸಿದನು. ನಂತರ ಅಲ್ಲೇ ಶಿವನಿಚ್ಛೆಯಂತೆ ಉಮಾ ಮಹೇಶ್ವರಿ ದೇವಿಯ ದೇವಾಲಯವನ್ನು ನಿರ್ಮಿಸಲಾಯಿತು.

    MORE
    GALLERIES

  • 47

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ವೈಷ್ಣವ ಸಂಪ್ರದಾಯದ ಪ್ರಕಾರ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವು ಶಿವ ಮತ್ತು ಪಾರ್ವತಿ ದೇವಿಯ-ಅರ್ಧನಾರೀಶ್ವರ ಸಂಯೋಜಿತ ವಿಗ್ರಹವನ್ನು ಹೊಂದಿದೆ. ಇಲ್ಲಿನ ಬಸವನ ಮೂರ್ತಿಯೊಂದು ನಿರಂತರವಾಗಿ ಬೆಳೆಯುತ್ತಿದೆ ಎಂದು ಹೇಳಲಾಗಿದೆ. ಪ್ರತಿ 20 ವರ್ಷಗಳಿಗೊಮ್ಮೆ ಒಂದು ಇಂಚಿನಷ್ಟು ಬೆಳೆಯುತ್ತಿದೆ ಎಂದು ಭಕ್ತರು ನಂಬುತ್ತಾರೆ.

    MORE
    GALLERIES

  • 57

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ವಿಶೇಷ ಅಂದರೆ ಈ ದೇಗುಲದಲ್ಲಿ ಕಾಗೆಗಳೇ ಇರುವುದಿಲ್ಲವಂತೆ. ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಅನಾದಿ ಕಾಲದಿಂದಲೂ ಈ ಗುಹಾಂತರ ದೇವಾಲಯದಲ್ಲಿ ಕಾಗೆಗಳು ಕಾಣಸಿಗುವುದಿಲ್ಲ. ಅಗಸ್ತ್ಯ ಋಷಿ ಧ್ಯಾನ ಮಾಡುತ್ತಿದ್ದಾಗ ಕಾಗೆಗಳ ಗುಂಪೊಂದು ಈ ಪ್ರದೇಶಕ್ಕೆ ಇಳಿದು ಜೋರಾಗಿ ಕೂಗಲು ಪ್ರಾರಂಭಿಸಿತು. ಇದರಿಂದ ಅವನ ತಪಸ್ಸಿಗೆ ಭಂಗವುಂಟಾಯಿತು. ಆ ಶಬ್ದದಿಂದ ಸಿಟ್ಟಿಗೆದ್ದ ಅಗಸ್ತ್ಯನು ಕಾಗೆಗಳಿಗೆ ಶಾಪವಿತ್ತನು. ಇದರಿಂದ ಈ ದೇಗುಲದ ಸುತ್ತ ಕಾಗೆಗಳು ಕಾಣಿಸುವುದಿಲ್ಲ ಎನ್ನಲಾಗುತ್ತದೆ.

    MORE
    GALLERIES

  • 67

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ಯಾಗಂಟಿ ಉಮಾ ಮಹೇಶ್ವರನ ದರ್ಶನ ಮಾಡಿದರೆ ತಮ್ಮ ಜೀವನದಲ್ಲಿ ದುರಾದೃಷ್ಟಗಳು ಮಾಯವಾಗುತ್ತವೆ ಎಂದು ಭಕ್ತರು ನಂಬುತ್ತಾರೆ. ಯಾಗಂಟಿಯ ಮುಖ್ಯ ದೇವಾಲಯದ ಪಕ್ಕದಲ್ಲಿ ಹಲವಾರು ಗುಹಾ ದೇವಾಲಯಗಳಿವೆ. ಇವು ಅಗಸ್ತ್ಯ ಗುಹೆಯು ಶಿವನ ಆಶೀರ್ವಾದವನ್ನು ಪಡೆಯಲು ಅಗಸ್ತ್ಯರು ತಪಸ್ಸು ಮಾಡಿದ ಸ್ಥಳವೆಂದು ನಂಬಲಾಗಿದೆ.

    MORE
    GALLERIES

  • 77

    Yaganti Temple: ಈ ದೇಗುಲದ ಸುತ್ತ ಕಾಗೆಗಳು ಕಾಣಿಸಲ್ಲ, ಅಪರೂಪದ ತಾಣದ ಪರಿಚಯ ಮಾಡಿಕೊಳ್ಳಿ

    ವೆಂಕಟೇಶ್ವರ ಗುಹೆಯು ಈ ಪ್ರದೇಶದ ಮತ್ತೊಂದು ಗುಹೆಯಾಗಿದೆ. ಗುಹೆಯಲ್ಲಿ ಕಂಡುಬರುವ ವೆಂಕಟೇಶ್ವರನ ವಿಗ್ರಹವು ತಿರುಪತಿಯಲ್ಲಿರುವ ವಿಗ್ರಹಕ್ಕಿಂತ ಬಹಳ ಹಳೆಯದು ಎಂದು ಸ್ಥಳೀಯರು ನಂಬುತ್ತಾರೆ. ವೀರ ಬ್ರಾಹ್ಮಣ ಗುಹೆಯು ಭಾರತದ ನಾಸ್ಟ್ರಡಾಮಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪೊಟುಲುರಿ ವೀರ ಬ್ರಹ್ಮಂ ತನ್ನ ಭವಿಷ್ಯವಾಣಿಯ ಪುಸ್ತಕದ ಕಾಲಜ್ಞಾನದ ಕೆಲವು ಅಧ್ಯಾಯಗಳನ್ನು ಬರೆದ ಸ್ಥಳವೆಂದು ನಂಬಲಾಗಿದೆ.

    MORE
    GALLERIES