Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

Karnataka Assembly Election 2023: ರಾಜ್ಯದಲ್ಲಿ ಚುನಾವಣೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಎಲ್ಲಾ ಪಕ್ಷಗಳು ಭರದಿಂದ ಪ್ರಚಾರ ಕಾರ್ಯ ಆರಂಭಿಸಿದೆ. ಈ ಬಾರಿ ರಾಜ್ಯದ ಗದ್ದುಗೆ ಯಾವ ಪಕ್ಷದ ಪಾಲಾಗಲಿದೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ಇನ್ನು, ಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ವೆಂಕಟ ರಾಘವನ್ ಅವರು ಈ ಬಾರಿ ಯಾವ ಪಕ್ಷಕ್ಕೆ ಹೆಚ್ಚು ಮತ ಬರಲಿದೆ ಎಂಬುದನ್ನ ತಿಳಿಸಿದ್ದಾರೆ.

First published:

  • 17

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಕರ್ನಾಟಕ ವಿಧಾನಸಭೆ ಚುನಾವಣೆಯ ರಣರಂಗ ಸಿದ್ದವಾಗಿದ್ದು, ಈ ನಡುವೆ ಅಭ್ಯರ್ಥಿಗಳು ಸಹ ಭರದಿಂದ ಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಸಹ ಪ್ರಚಾರ ಕಣದಲ್ಲಿದ್ದು, ಗೆಲುವಿನ ಕುದುರೆ ಏರಲು ಭರ್ಜರಿ ತಯಾರಿ ನಡೆಸಿದ್ದಾರೆ.

    MORE
    GALLERIES

  • 27

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ ನಂತರದಿಂದ ರಾಜ್ಯದಲ್ಲಿ ದಿನಕ್ಕೊಂದು ಬಿರುಸಿನ ಚಟುವಟಿಕೆಗಳು ಆರಂಭವಾಗಿದ್ದು, ಪ್ರಮುಖ ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಎಷ್ಟು ಸಾಧ್ಯವೋ ಅಷ್ಟು ಮತದಾರರನ್ನು ಸೆಳೆಯಲು ಪ್ರಯತ್ಮ ಮಾಡುತ್ತಿವೆ.

    MORE
    GALLERIES

  • 37

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಈಗಾಗಲೇ ಹಲವಾರು ಸಮೀಕ್ಷೆಗಳು ಚುನಾವಣೆ ಕುರಿತಂತೆ ಕುತೂಹಲವನ್ನು ಹೆಚ್ಚಿಸಿದ್ದು, ಮುಖ್ಯವಾಗಿ ಕಾಂಗ್ರೆಸ್​, ಬಿಜೆಪಿ ಹಾಗೂ ಜೆಡಿಎಸ್​ ಅಧಿಕಾರ ಪಡೆಯಲು ಸರ್ಕಸ್​ ಮಾಡುತ್ತಿವೆ. ಆದರೆ ಜ್ಯೋತಿಷ್ಯದ ಪ್ರಕಾರ ಯಾವ ಪಕ್ಷಕ್ಕೆ ಹೆಚ್ಚು ಸೀಟ್​ ಬರಬಹುದು ಎಂಬುದು ಇಲ್ಲಿದೆ.

    MORE
    GALLERIES

  • 47

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಖ್ಯಾತ ಸಂಖ್ಯಾಶಾಸ್ತ್ರಜ್ಞ ವೆಂಕಟ ರಾಘವನ್ ಅವರ ಪ್ರಕಾರ ಈ ಬಾರಿ ಕಾಂಗ್ರೆಸ್​ ಅತಿ ಹೆಚ್ಚು ಸೀಟು ಗೆಲ್ಲಲಿದೆ. 3 ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್​ ಮೊದಲ ಸ್ಥಾನದಲ್ಲಿ ಇರುತ್ತದೆಯಂತೆ. ಆದರೆ ಪೂರ್ಣ ಬಹುಮತ ಸಿಗಲಿದೆಯ ಎಂಬುದು ಕಾದು ನೋಡಬೇಕಿದೆ.

    MORE
    GALLERIES

  • 57

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಹಾಗೆಯೇ 2 ಸ್ಥಾನದಲ್ಲಿ ಭಾರತೀಯ ಜನತಾ ಪಾರ್ಟಿ ಇರಲಿದೆ ಎಂದು ಅವರು ತಿಳಿಸಿದ್ದು, ಮೂರನೇ ಸ್ಥಾನದಲ್ಲಿ ಜೆಡಿಎಸ್​ ಬರಲಿದೆಯಂತೆ. ಒಟ್ಟಾರೆ ರಾಜಕೀಯ ಜಿದ್ದಾ ಜಿದ್ದಿನಲ್ಲಿ ಕೈ ಮೇಲು ಗೈ ಸಾಧಿಸಲಿದೆ ಎಂದು ಅವರು ತಿಳಿಸಿದ್ದಾರೆ.

    MORE
    GALLERIES

  • 67

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಚುನಾವಣೆಯಲ್ಲಿ ಗೆಲ್ಲಲು ರಾಜಕಾರಣಿಗಳು ಯಾವುದೇ ಹಂತಕ್ಕೆ ಬೇಕಾದರೂ ತಲುಪುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಹಾಗಾಗಿ ಅನೇಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಸಗ ಜ್ಯೋತಿಷಿಗಳ ಸಲಹೆ ಪಡೆದು ಸಲ್ಲಿಸಿದ್ದು, ಈ ಬಾರಿ ಗೆಲುವು ಯಾರ ಪಾಲಾಗಲಿದೆ ಎಂಬುದು ಮಾತ್ರ ಕುತೀಹಲ ಮೂಡಿಸಿದೆ.

    MORE
    GALLERIES

  • 77

    Karnataka Election 2023: ಯಾರ ಪಾಲಾಗುತ್ತೆ ಕರ್ನಾಟಕದ ಗದ್ದುಗೆ? ಜ್ಯೋತಿಷಿಗಳು ಹೇಳಿದ ಭವಿಷ್ಯವಿದು

    ಒಟ್ಟಾರೆಯಾಗಿ ರಾಜಕಾರಣಿಗಳು ಈ ಬಾರಿ ಗೆಲುವಿನ ಕುದುರೆ ಏರಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದು, ಅದಕ್ಕೆ ಜ್ಯೋತಿಷ್ಯ ಸೇರಿದಂತೆ ಎಲ್ಲಾ ರೀತಿಯ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ ಕೊನೆಯಲ್ಲಿ ಮತದಾರ ಪ್ರಭು ಯಾರ ಕೈ ಹಿಡಿಯುತ್ತಾನೆ ಎಂಬುದನ್ನ ಮಾತ್ರ ಕಾದುನೋಡಬೇಕಿದೆ.

    MORE
    GALLERIES