Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

Kala Sarpa Dosha: ದೋಷಗಳಲ್ಲಿ ಹಲವು ವಿಧಗಳಿದೆ. ಅವುಗಳಲ್ಲಿ ಕಾಳಸರ್ಪ ದೋಷ ತುಂಬಾ ಅಪಾಯಕಾರಿ. ಈ ದೋಷ ಹಾವಿನ ಜೊತೆ ಸಂಬಂಧ ಹೊಂದಿದೆ. ಈ ದೋಷ ಇದ್ದರೆ ಹಾವಿನಿಂದ ಸಮಸ್ಯೆ ಆಗಲಿದೆ ಎನ್ನಲಾಗುತ್ತದೆ. ಇಷ್ಟಕ್ಕೂ ಈ ಕಾಳಸರ್ಪ ದೋಷ ಎಂದರೇನು? ಈ ಸಮಸ್ಯೆಗೆ ಪರಿಹಾರವೇನು ಎಂಬುದು ಇಲ್ಲಿದೆ.

First published:

  • 18

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ಜಾತಕದಲ್ಲಿ ಅತ್ಯಂತ ಭಯಪಡುವ ದೋಷ ಎಂದರೆ ಅದು ಕಾಳಸರ್ಪ ದೋಷ. ಇದು ಎರಡು ದೋಷಪೂರಿತ ಗ್ರಹಗಳಿಂದ ಉಂಟಾಗುತ್ತದೆ. ವಿಷಕಾರಿ ಸರ್ಪಗಳಾದ ರಾಹು ಮತ್ತು ಕೇತು ಈ ದೋಷದ ಪ್ರಮುಖ ಅಂಶಗಳಾಗಿವೆ. ರಾಹು ಮತ್ತು ಕೇತುಗಳು ಏಳನೇ ರಾಶಿಯಲ್ಲಿ ಪರಸ್ಪರ ಸಾಗುತ್ತವೆ. ಅಂದರೆ, ರಾಹು ಮೊದಲ ರಾಶಿಯಲ್ಲಿದ್ದಾಗ, ಕೇತುವು ಏಳನೇ ರಾಶಿಯಲ್ಲಿ ಸಾಗುತ್ತದೆ. ಈ ಎರಡು ದುಷ್ಟ ಗ್ರಹಗಳ ನಡುವೆ ಉಳಿದ ಏಳು ಗ್ರಹಗಳು ಬಂದಾಗ ಕಾಳಸರ್ಪ ದೋಷ ಎಂಬ ಒಂದು ಗ್ರಹದೋಷ ಬರುತ್ತದೆ.

    MORE
    GALLERIES

  • 28

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ಜಾತಕದಲ್ಲಿ ಎಷ್ಟೇ ಅದೃಷ್ಟ ಯೋಗಗಳಿದ್ದರೂ ಕಾಳಸರ್ಪದೋಷ ಇದ್ದರೆ ಈ ಅದೃಷ್ಟ ಯೋಗಗಳ ಫಲ ಸಿಗುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ. ಇದರಲ್ಲಿ ರಾಹುವು ಸರ್ಪದ ಮುಖ್ಯಸ್ಥ, ಕೇತು ಆ ಸರ್ಪದ ಬಾಲ ಇದ್ದಂತೆ. ಹಾಗಾಗಿ ಕಾಳಸರ್ಪ ದೋಷದಿಂದಾಗಿ ಉತ್ತಮ ಯೋಗಗಳಿಗೂ ಭಂಗ ಉಂಟಾಗುತ್ತದೆ. ಹಾಗೆಯೇ ಜಾತಕದಲ್ಲಿ ರಾಹು ಅಥವಾ ಕೇತು ಸಮಸ್ಯೆ ಪ್ರಾರಂಭವಾದರೆ ಈ ದೋಷವು ಹೆಚ್ಚು ಸಮಸ್ಯೆ ಮಾಡುತ್ತದೆ.

    MORE
    GALLERIES

  • 38

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ಉತ್ತರ ಕಾಲಾಮೃತ, ಬೃಹಜ್ಜಾತಕಮುಂತಾದ ಪ್ರಮಾಣಿತ ಜ್ಯೋತಿಷ್ಯ ಗ್ರಂಥಗಳ ಪ್ರಕಾರ, ಈ ಕಾಳಸರ್ಪ ದೋಷವು ಜೀವನದ ಪ್ರಮುಖ ಘಟನೆಗಳ ಸಮಯದಲ್ಲಿ ಸಮಸ್ಯೆ ಉಂಟು ಮಾಡುತ್ತದೆ.ಈ ದೋಷವು ಹೆಚ್ಚಾಗಿ ಹಾವಿನಂತೆ ಕಚ್ಚುತ್ತದೆ. ಶಿಕ್ಷಣ, ಉದ್ಯೋಗ, ಮದುವೆ, ಮಗುವಿನ ಜನನದಂತಹ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ. ಜೀವನದಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗುತ್ತದೆ.

    MORE
    GALLERIES

  • 48

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ರಾಹು ಮತ್ತು ಕೇತುಗಳ ನಡುವೆ ಯಾವುದೇ ಗ್ರಹ ಹೊರಗೆ ಇದ್ದರೆ ಕಾಳಸರ್ಪ ದೋಷ ಅನ್ವಯಿಸುವುದಿಲ್ಲ ಎಂದು ಜ್ಯೋತಿಷ್ಯ ಗ್ರಂಥಗಳು ಹೇಳುತ್ತವೆ. ಮತ್ತೊಂದು ಅಂಶ ಎಂದರೆ ಚಂದ್ರ ರಾಹು ಹಾಗೂ ಕೇತು ಮಧ್ಯೆ ಸಿಲುಕದಿದ್ದರೆ ಸಹ ಈ ದೋಷ ಸಮಸ್ಯೆ ಉಂಟು ಮಾಡುವುದಿಲ್ಲ. ಹಾಗೆಯೇ ಗುರುವಿನ ದೃಷ್ಟಿ ಈ 2ರ ಮೇಲಿದ್ದರೆ ಸಹ ತೊಂದರೆ ಇಲ್ಲ. ಆದರೆ ಜಾತಕದಲ್ಲಿ ರಾಹು ದಶಾ, ಕೇತು ದಶಾ ನಡೆಯುತ್ತಿರುವಾಗ ಮಾತ್ರ ಕಾಳಸರ್ಪ ದೋಷದ ಪರಿಣಾಮ ಹೆಚ್ಚು.

    MORE
    GALLERIES

  • 58

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ಕಾಳಸರ್ಪ ದೋಷದ ಪರಿಣಾಮವನ್ನು ಜಾತಕದಲ್ಲಿ ಪ್ರಮುಖ ದೋಷವೆಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ರಾಹು ಅಥವಾ ಕೇತು ದಶಾ ಸಂಭವಿಸಿದಾಗ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ರಾಹು ಮತ್ತು ಕೇತು ವಕ್ರ ಗ್ರಹಗಳು. ಎಲ್ಲಾ ಇತರ ಗ್ರಹಗಳು ಮುಂದೆ ಸಾಗುತ್ತಿರುವಾಗ, ಈ ಎರಡು ಗ್ರಹಗಳು ಹಿಮ್ಮುಖವಾಗಿ ಹೋಗುತ್ತವೆ. ಅಂದರೆ ಈ ದುಷ್ಟ ಗ್ರಹಗಳ ಪ್ರಭಾವ ಉಳಿದ ಗ್ರಹಗಳ ಮೇಲೂ ಪರಿಣಾಮ ಬೀರುತ್ತದೆ.

    MORE
    GALLERIES

  • 68

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ಎಲ್ಲಾ ಜ್ಯೋತಿಷ ಗ್ರಂಥಗಳು ರಾಹು ಮತ್ತು ಕೇತುಗಳ ನಡುವೆ ಇತರ ಎಲ್ಲಾ ಗ್ರಹಗಳು ಬರುವುದರಿಂದ ಕಾಳಸರ್ಪ ದೋಷ ಉಂಟಾಗುತ್ತದೆ. ಆದರೆ ಎಲ್ಲಾ ಗ್ರಹಗಳು ಕೇತು ಮತ್ತು ರಾಹುಗಳ ನಡುವೆ ಬಂದಾಗ ಉಂಟಾಗುವ ಕಾಳಸರ್ಪ ದೋಷ 32 ವರ್ಷಗಳವರೆಗೆ ಮಾತ್ರ ಇರುತ್ತದೆ.

    MORE
    GALLERIES

  • 78

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    ಪರಿಹಾರ: ಜಾತಕದಲ್ಲಿ ಕಾಳಸರ್ಪ ದೋಷ ಇರುವವರು ಅಥವಾ ರಾಹು ಅಥವಾ ಕೇತು ದಶಾ ಇರುವವರು ಈ ದೋಷದಿಂದ ಪರಿಹಾರ ಪಡೆಯಲು ರಾಹು ಕೇತು ಪೂಜೆಯನ್ನು ಮಾಡಬೇಕು. ಶ್ರೀಕಾಳಹಸ್ತಿ ಹಾಗೂ ಸುಬ್ರಹ್ಮಣ್ಯ ಮುಂತಾದ ದೇವಸ್ಥಾನಗಳಲ್ಲಿ ಈ ದೋಷಕ್ಕೆ ಪೂಜೆಗಳು ನಡೆಯುತ್ತಿವೆ. ಈ ಪೂಜೆಗಳ ಜೊತೆಗೆ ದೋಷವನ್ನು ತಡೆಗಟ್ಟಲು ಸುಬ್ರಹ್ಮಣ್ಯಾಷ್ಟಕಂ ಅಥವಾ ಸುಂದರಕಾಂಡವನ್ನು ಮನೆಯಲ್ಲಿ ಪಠಿಸುವುದು ಉತ್ತಮ.

    MORE
    GALLERIES

  • 88

    Kala Sarpa Dosha: ಕಾಳಸರ್ಪ ದೋಷ ಇದ್ರೆ ಈ ಸಮಸ್ಯೆ ತಪ್ಪಲ್ಲ, ಪರಿಹಾರವೂ ಇಲ್ಲಿದೆ ನೋಡಿ

    (Disclaimer: ಮೇಲಿನ ಲೇಖನದ ವರದಿಯು ಧಾರ್ಮಿಕ ನಂಬಿಕೆಗಳು ನಡೆದು ಬಂದ ಶಾಸ್ತ್ರದ ಪ್ರಕಾರವಾಗಿದೆ. ಇವುಗಳನ್ನು ನ್ಯೂಸ್ 18 ಕನ್ನಡ ಖಚಿತಪಡಿಸುವುದಿಲ್ಲ)

    MORE
    GALLERIES