Jaya Ekadashi: ಜಯ ಏಕಾದಶಿಯಂದು ರೂಪುಗೊಳ್ಳುತ್ತಿದೆ ವಿಶೇಷ ಯೋಗ
ಮಾಘ ಶುಕ್ಲ ಪಕ್ಷ ಏಕಾದಶಿಯನ್ನು ಜಯ ಏಕಾದಶಿ (Jaya Ekadashi) ಎಂದು ಕರೆಯಲಾಗುವುದು. ವಿಷ್ಣುವಿಗೆ ಸಮರ್ಪಿತವಾಗಿರುವ ಈ ಏಕಾದಶಿ ದಿನದಂದು ಉಪವಾಸ ವ್ರತಾಚರಣೆಗಳನ್ನು ಮಾಡಲಾಗುತ್ತದೆ. ಈ ದಿನ ಶ್ರೀ ಕೃಷ್ಣನ ಪೂಜೆ ಮತ್ತು ಆರಾಧನೆ. ಪ್ರತಿ ಕ್ಷಣವೂ ಶ್ರೀಕೃಷ್ಣನ ನಾಮ ಸಂಕೀರ್ತನೆ ನಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಮನುಷ್ಯರು ದುಷ್ಟಶಕ್ತಿಗಳಿಂದ ಮುಕ್ತರಾಗುತ್ತಾರೆ. ಇಷ್ಟು ಮಾತ್ರವಲ್ಲದೆ ಜನ್ಮ ಜನ್ಮಾಂತರದ ದೋಷಗಳು ಮತ್ತು ಬ್ರಹ್ಮ ಮೊದಲಾದ ಅನಿಷ್ಟಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ.
ಈ ಬಾರಿ ಜಯ ಏಕಾದಶಿ ಇನ್ನಷ್ಟು ವಿಶೇಷದಿಂದ ಕೂಡಿದೆ. ಈ ದಿನ ವಿಶೇಷ ಯೋಗವೊಂದು ಕೂಡ ಬಂದಿರುವ ಹಿನ್ನಲೆ ಈ ಬಾರಿ ಜಯ ಏಕಾದಶಿ ಹೆಚ್ಚು ಮಹತ್ವ ಇದೆ. ವಾಸ್ತವವಾಗಿ ಏಕಾದಶಿ ತಿಥಿಯಂದು ಮಕರ ರಾಶಿಯಲ್ಲಿ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತದೆ.
2/ 5
ಅಲ್ಲದೆ, ಚಂದ್ರ ಮತ್ತು ಮಂಗಳ ಸಂಬಂಧದಿಂದ ಮಹಾಲಕ್ಷ್ಮಿ ಯೋಗವು ರೂಪುಗೊಳ್ಳುತ್ತದೆ. ಇದಲ್ಲದೇ ಶನಿಯು ತನ್ನ ಸ್ವಂತ ರಾಶಿಯಲ್ಲಿ ಇರುವುದರಿಂದ ಷಷಯೋಗವು ರೂಪುಗೊಳ್ಳುತ್ತದೆ. ಅದೇ ಸಮಯದಲ್ಲಿ, ಚಂದ್ರ ಮತ್ತು ಗುರುವಿನ ದೃಷ್ಟಿ ಕೂಡ ಮಂಗಳಕರವಾಗಿರುತ್ತದೆ.
3/ 5
ಜಯ ಏಕಾದಶಿ ಉಪವಾಸದ ಸಮಯದಲ್ಲಿ, ಹಣ್ಣುಗಳನ್ನು ಮಾತ್ರ ತಿನ್ನಲಾಗುತ್ತದೆ. ಉಪವಾಸದ ಈ ದಿನದಂದು ಧಾನ್ಯಗಳು, ಕೆಂಪು ಮೆಣಸಿನಕಾಯಿಗಳು, ಸಾಮಾನ್ಯ ಉಪ್ಪು ಮತ್ತು ಮಸಾಲೆಗಳನ್ನು ತಿನ್ನಬಾರದು.
4/ 5
ಏಕಾದಶಿ ಉಪವಾಸದ ಸಮಯದಲ್ಲಿ ಹಾಲು-ಮೊಸರು, ಹಣ್ಣುಗಳು ಇತ್ಯಾದಿಗಳನ್ನು ಬಳಸಬಹುದು. ದ್ವಾದಶಿಯ ದಿನದಂದು ಅಕ್ಕಿ, ಹಿಟ್ಟು, ಬೇಳೆಕಾಳು, ಉಪ್ಪು, ತುಪ್ಪ ಮತ್ತು ಸ್ವಲ್ಪ ಹಣವನ್ನು ದಾನ ಮಾಡಬೇಕು.
5/ 5
ಏಕಾದಶಿಯ ದಿನ, ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶ್ರೀ ಹರಿ ವಿಷ್ಣುವಿಗೆ ನಮಸ್ಕರಿಸಿ ದಿನವನ್ನು ಪ್ರಾರಂಭಿಸಬೇಕು. ವಿಷ್ಣುವಿಗೆ ಹಳದಿ ಹೂವುಗಳು, ಹಳದಿ ಹಣ್ಣುಗಳು, ಹಳದಿ ಸಿಹಿತಿಂಡಿಗಳು, ಧೂಪ-ದೀಪ, ಕುಂಕುಮ ಇತ್ಯಾದಿಗಳಿಂದ ಪೂಜಿಸಬೇಕು.