Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

ಸಾಮಾನ್ಯವಾಗಿ ನಮ್ಮ ಇಷ್ಟಾರ್ಥಗಳು ಈಡೇರುವ ಸಲುವಾಗಿ ಹಲವಾರು ರೀತಿಯ ಹರಕೆ ಕಟ್ಟಿಕೊಳ್ಳುತ್ತೇವೆ. ಆದರೆ ಇಲ್ಲೊಂದು ಬಹಳ ವಿಶೇಷವಾದ ಸಂಪ್ರದಾಯವಿದ್ದು, ಅದನ್ನು ಅನುಸರಿಸಿದರೆ ನಿಮ್ಮೆಲ್ಲಾ ಆಸೆ ಈಡೇರುತ್ತದೆ.

First published:

  • 110

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಭಕ್ತರು ತಾವು ಪೂಜಿಸುತ್ತಾ ಬಂದ ದೇವರಿಗೆ ತೆಂಗಿನಕಾಯಿ ಒಡೆದು, ತೆಂಗಿನ ನೀರನ್ನು ಅರ್ಪಿಸುವುದು ವಾಡಿಕೆ. ಆದರೆ ಇದಕ್ಕೆ ಸಂಪೂರ್ಣವಾಗಿ ಬದಲಾಗಿ ದೇವಸ್ಥಾನದಲ್ಲಿ ಭಕ್ತರು ತೆಂಗಿನಕಾಯಿಯನ್ನು ದೇವಾಲಯದ ಆವರಣದಲ್ಲಿರುವ ಅರಳಿ ಮರಕ್ಕೆ ಕಟ್ಟುತ್ತಾರೆ.

    MORE
    GALLERIES

  • 210

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಈ ರೀತಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟು ಮೂಲಕ ಪ್ರಧಾನ ದೇವರಿಗೆ ಅರ್ಪಿಸುತ್ತಾರೆ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದು ನಿಜಕ್ಕೂ ಬಹಳ ವಿಶೇಷವಾದ ಆಚರಣೆ ಎನ್ನುವುದರಲ್ಲಿ ತಪ್ಪಿಲ್ಲ.

    MORE
    GALLERIES

  • 310

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಈ ರೀತಿ ಆಚರಣೆ ಇರುವುದು ಶ್ರೀಪಾದ ಶ್ರೀ ವಲ್ಲಭ ಮಹಾ ಸಂಸ್ಥಾನದಲ್ಲಿ. ಇದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಿಠಾಪುರದಲ್ಲಿದೆ. ಈ ಊರು ದೇವಾಲಯಗಳನ್ನು ಹೊಂದಿರುವ ಪಟ್ಟಣ ಎಂದು ಜನಪ್ರಿಯವಾಗಿದ್ದು, ಇದು ಶ್ರೀಪಾದ ಶ್ರೀ ವಲ್ಲಭರ ಜನ್ಮಸ್ಥಳ ಎಂಬುದು ಭಕ್ತ ನಂಬಿಕೆಯಾಗಿದೆ.

    MORE
    GALLERIES

  • 410

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ತೆಲುಗು ರಾಜ್ಯಗಳಲ್ಲದೇ, ಮಹಾರಾಷ್ಟ್ರ, ಗುಜರಾತ್, ಒಡಿಶಾ ಮತ್ತು ಕರ್ನಾಟಕ ರಾಜ್ಯಗಳಿಂದ ನೂರಾರು ಯಾತ್ರಾರ್ಥಿಗಳು ಪ್ರತಿದಿನ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಶ್ರೀಪಾದ ಶ್ರೀ ವಲ್ಲಭ ಮಹಾ ಸಂಸ್ಥಾನದಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಪದಗಳಲ್ಲಿ ವಿವರಿಸಲಾಗದ ಆಧ್ಯಾತ್ಮಿಕ ಅನುಭವವನ್ನು ಪಡೆಯುತ್ತಾರೆ.

    MORE
    GALLERIES

  • 510

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಪವಿತ್ರ ಪೂಜಾ ಸ್ಥಳವು ದಶಕಗಳಿಂದ ಈ ವಿಶಿಷ್ಟ ಸಂಪ್ರದಾಯವನ್ನು ಅನುಸರಿಸುತ್ತಿದೆ. ದೇವರಿಗೆ ಒಡೆದ ತೆಂಗಿನಕಾಯಿಯನ್ನು ಅರ್ಪಿಸುವ ಬದಲು, ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಅರಳಿ ಮರಕ್ಕೆ ಪ್ರದಕ್ಷಿಣೆ ಹಾಕಿದ ನಂತರ ಮರಕ್ಕೆ ತೆಂಗಿನಕಾಯಿಯನ್ನು ಕಟ್ಟುತ್ತಾರೆ.

    MORE
    GALLERIES

  • 610

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಇಚ್ಛಾಶಕ್ತಿಯಿಂದ ತೆಂಗಿನಕಾಯಿಯನ್ನು ಕಟ್ಟಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇಲ್ಲಿಯದು. ದೂರದ ಊರುಗಳಿಂದ ಬರುವ ಭಕ್ತರು ಶ್ರೀ ಪಾದ ಶ್ರೀ ವಲ್ಲಭರ ಜೀವನ ಚರಿತ್ರೆ ಮತ್ತು ಲೀಲೆಗಳನ್ನು ವಿವರಿಸುವ ಶ್ರೀ ಪಾದ ಶ್ರೀ ವಲ್ಲಭ ಚರಿತಾಮೃತಂ ಪಠಿಸಿದ ನಂತರ ಮರಕ್ಕೆ ತೆಂಗಿನಕಾಯಿ ಕಟ್ಟುತ್ತಾರೆ.

    MORE
    GALLERIES

  • 710

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಅವರ ಕನಸುಗಳ ಪಟ್ಟಿ ಉದ್ದವಾಗಿದ್ದು ಉದ್ಯೋಗ ಸಿಗಲಿ, ಮದುವೆ, ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳುವುದು ಮತ್ತು ಕುಟುಂಬ ಸದಸ್ಯರ ಸಮಸ್ಯೆಗೆ ಪರಿಹಾರ ಹೀಗೆ ಒಟ್ಟಾರೆ ತಮ್ಮೆಲ್ಲಾ ಆಸೆಗಳು ಈಡೇರಲಿ ಎಂಬುದು ಇವರ ಬಯಕೆ.

    MORE
    GALLERIES

  • 810

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಇನ್ನು ಈ ಪವಿತ್ರ ಮರಕ್ಕೆ ತೆಂಗಿನಕಾಯಿ ಕಟ್ಟಲು ಇತರ ಭಕ್ತರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ದೇವಾಲಯದ ಅರ್ಚಕರು ರಾತ್ರಿ ಸಮಯದಲ್ಲಿ ಮರಕ್ಕೆ ಕಟ್ಟಿದ ತೆಂಗಿನಕಾಯಿಗಳನ್ನು ತೆಗೆಯುತ್ತಾರೆ.

    MORE
    GALLERIES

  • 910

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ

    ಭಕ್ತರು ತಮ್ಮ ಆಸೆಗಳು ಈಡೇರಿಸ ನಂತರ ಮತ್ತೆ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಹಾಗೂ ಪ್ರಧಾನ ದೇವರಿಗೆ ಅಭಿಷೇಕದಂತಹ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಅಲ್ಲದೇ, ಇಲ್ಲಿ ಆನ್‌ಲೈನ್ ಬುಕಿಂಗ್‌ನೊಂದಿಗೆ ಭಕ್ತರಿಗೆ ಉಚಿತ ವಸತಿ ಸಿಗುತ್ತದೆ.

    MORE
    GALLERIES

  • 1010

    Unique Tradition: ಇಲ್ಲಿ ಅರಳಿ ಮರಕ್ಕೆ ತೆಂಗಿನಕಾಯಿ ಕಟ್ಟಿದ್ರೆ ಸಾಕು, ಬಯಸಿದ್ದೆಲ್ಲಾ ಸಿಗುತ್ತೆ


    ದೇಗುಲದ ಅಧಿಕಾರಿಗಳು ಭಕ್ತರಿಗೆ ಎರಡು ಹೊತ್ತು ಉಚಿತ ಅನ್ನಸಂತರ್ಪಣೆ ಮಾಡುತ್ತಿದ್ದಾರೆ. ವಿಶಾಖಪಟ್ಟಣಂ, ವಿಜಯವಾಡ ಮತ್ತು ಹೈದರಾಬಾದ್‌ನಿಂದ ಬಸ್ ಅಥವಾ ರೈಲಿನ ಮೂಲಕ ಪಿಠಾಪುರವನ್ನು ತಲುಪಬಹುದು. ರಾಜಮಹೇಂದ್ರವರಂ ಬಳಿ ಇರುವ ಮುಧರಪುಡಿ ವಿಮಾನ ನಿಲ್ದಾಣವು ಕ್ಕೆ ಹತ್ತಿರದ ವಿಮಾನ ನಿಲ್ದಾಣವಾಗಿದೆ.

    MORE
    GALLERIES