Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

Guru Gochar: ಗುರು ಗ್ರಹ 22ನೇ ಏಪ್ರಿಲ್ 2023 ರಂದು ತನ್ನ ರಾಶಿಯನ್ನು ಬದಲಾಯಿಸಿದ್ದು, ಇದರಿಂದ ಕೆಲ ರಾಶಿಯವರಿಗೆ ಸಮಸ್ಯೆ ಆಗಲಿದೆ. ಆದರೆ ಜ್ಯೋತಿಷ್ಯದಲ್ಲಿ ಕೆಲ ಪರಿಹಾರಗಳಿದ್ದು, ಗುರು ಗ್ರಹದಿಂದ ಸಮಸ್ಯೆಗಳಾಗಬಾರದು ಎಂದರೆ ಏನು ಪರಿಹಾರ ಮಾಡಬೇಕು ಎಂಬುದು ಇಲ್ಲಿದೆ.

First published:

  • 19

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಗುರು ಗ್ರಹವು 22ನೇ ಏಪ್ರಿಲ್ 2023 ರಂದು ತನ್ನ ರಾಶಿಯನ್ನು ಬದಲಾಯಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದು ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಪರಿಣಾಮ ಮೇ ತಿಂಗಳ ಪೂರ್ತಿ ಇರುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು

    MORE
    GALLERIES

  • 29

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಗಳ ಮೇಲೆ ಈ ಕೆಟ್ಟ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಹಾಗಾಗಿ ಈ ಸಮಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ಆದರೆ ಈ ಗುರುವಿನ ಕಾಟದಿಂದ ಮುಕ್ತಿ ಬೇಕು ಎಂದರೆ ಕೆಲ ಪರಿಹಾರವಿದ್ದು, ಅದನ್ನು ಪಾಲಿಸಿದರೆ ಸಾಕು.

    MORE
    GALLERIES

  • 39

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಮೇಷ ರಾಶಿಗೆ ಪರಿಹಾರ: ಗುರುವಾರದಂದು ತುಳಸಿ ಗಿಡಕ್ಕೆ 11 ದೀಪಗಳನ್ನು ಹಚ್ಚಿ ಮತ್ತು ಅದರ ಮುಂದೆ ಲಕ್ಷ್ಮಿ ಚಾಲೀಸವನ್ನು ಓದಬೇಕು. ಇದರೊಂದಿಗೆ ಇನ್ನೂ ಒಂದು ಕೆಲಸ ಮಾಡಬೇಕು, ಒಂದಿಷ್ಟು ಗಂಗಾಜಲ, ಅರಿಶಿನ ಮತ್ತು ನಾಣ್ಯವನ್ನು ಪಾತ್ರೆಯಲ್ಲಿ ಹಾಕಿ 7 ಗುರುವಾರಗಳ ಕಾಲ ಅಡ್ಡ ದಾರಿಯಲ್ಲಿಟ್ಟರೆ ಗುರುಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ.

    MORE
    GALLERIES

  • 49

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ವೃಷಭ ರಾಶಿ ಪರಿಹಾರ: ಗುರುವಾರದಂದು ತುಳಸಿ ಗಿಡಕ್ಕೆ ನೀರನ್ನು ಅರ್ಪಿಸಿ, 11 ದೀಪಗಳನ್ನು ಹಚ್ಚಿ ಅದರ ಮುಂದೆ ಲಕ್ಷ್ಮಿ ಚಾಲೀಸವನ್ನು ಪಠಿಸಿ ಮತ್ತು ಏಳು ಗುರುವಾರಗಳ ಕಾಲ ಸ್ವಲ್ಪ ಅರಿಶಿನ ಮತ್ತು ನಾಣ್ಯವನ್ನು ಪಾತ್ರೆಯಲ್ಲಿ ಹಾಕಿ ಗಂಗಾಜಲವನ್ನು ನಿಮ್ಮ ತಲೆಯನ್ನು 11 ಬಾರಿ ಸುತ್ತಿದ ನಂತರ ಅದನ್ನು ಅಡ್ಡ ರಸ್ತೆಯಲ್ಲಿ ಚೆಲ್ಲಿ.

    MORE
    GALLERIES

  • 59

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಮಿಥುನ ರಾಶಿ ಪರಿಹಾರ: ಗುರುವಾರದಂದು ಹಳದಿ ಬಟ್ಟೆಯನ್ನು ಧರಿಸಿ, 1.25 ಕೆಜಿ ಕಡಲೆಕಾಯಿ, 11 ರೂಪಾಯಿ, ಗೋಮತಿ ಚಕ್ರ ಮತ್ತು ಶಂಖವನ್ನು ಹಳದಿ ಬಟ್ಟೆಯಲ್ಲಿ ಸುತ್ತಿ ಐದು ಗಂಟುಗಳನ್ನು ಕಟ್ಟಿ. ನಂತರ ವಿಷ್ಣು-ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ, ಬ್ರಾಹ್ಮಣನಿಗೆ ಇದನ್ನು ದಾನ ಮಾಡಿ. ಇನ್ನು ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪುಸ್ತಕ, ಪೆನ್ನು, ಬ್ಯಾಗ್, ಪೆನ್ಸಿಲ್, ಎರೇಸರ್ ಮುಂತಾದ ಶಾಲಾ ಸಾಮಗ್ರಿಗಳನ್ನು ದಾನ ಮಾಡಿ,

    MORE
    GALLERIES

  • 69

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಕರ್ಕಾಟಕ ರಾಶಿಗೆ ಪರಿಹಾರ: ಗುರುವಾರದಂದು ಒಂದು ವರ್ಷಗಳ ಕಾಲ ಉಪವಾಸ ಮಾಡಿ. ಗುರುವಾರದಂದು ಹಳದಿ ಬಟ್ಟೆಗಳನ್ನು ಧರಿಸಿ, ಹಾಗೆಯೇ ಆ ದಿನ ಉಪ್ಪು ಆಹಾರ ಸೇವಿಸಬೇಡಿ. ಈ ದಿನ ಕೇವಲ ಸಿಹಿ ಮತ್ತು ಹಳದಿ ಪದಾರ್ಥಗಳನ್ನು ಮಾತ್ರ ತಿನ್ನಲು ಪ್ರಯತ್ನಿಸಿ. ಹಾಗೆಯೇ ಈ ದಿನ ಸಂಪೂರ್ಣ ವಿಧಿವಿಧಾನಗಳೊಂದಿಗೆ ವಿಷ್ಣು ಸಹಸ್ರನಾಮವನ್ನು ಪಠಿಸಿ, ನಂತರ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಪುಸ್ತಕ, ಪೆನ್ನು, ಬ್ಯಾಗ್, ಪೆನ್ಸಿಲ್, ರಬ್ಬರ್ ಮುಂತಾದ ಶಾಲಾ ಸಾಮಗ್ರಿಗಳನ್ನು ದಾನ ಮಾಡಿ.

    MORE
    GALLERIES

  • 79

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಸಿಂಹ ರಾಶಿಗೆ ಪರಿಹಾರ: ವಾರಕ್ಕೆ ನಾಲ್ಕು ಬಾರಿ ಕಡಲೆ ಹಿಟ್ಟು ಹಾಗೂ ಸ್ವಲ್ಪ ಬೆಲ್ಲ ಮತ್ತು ನೆನೆಸಿದ ಕಾಳುಗಳನ್ನು ಸೇರಿಸಿ ಹಸುವಿಗೆ ತಿನ್ನಿಸಿ. ಹಾಗೆಯೇ ಸಾಧ್ಯವಾದರೆ ಹಳದಿ ಬಟ್ಟೆಯಲ್ಲಿ ಅರಿಶಿನ ಅಥವಾ ಬಾಳೆಹಣ್ಣನ್ನು ಹಾಕಿ ಅದನ್ನು ದಾನ ಮಾಡಿ. ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಅಷ್ಟಗಂಧದಲ್ಲಿ ಸ್ವಸ್ತಿಕ ಎಂದು ಬರೆಯಿರಿ.

    MORE
    GALLERIES

  • 89

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    ಕನ್ಯಾ ರಾಶಿಗೆ ಪರಿಹಾರ: 11 ಗುರುವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಶಿವಲಿಂಗಕ್ಕೆ ಕುಂಕುಮ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಿ. ಹಳದಿ ಹೂವುಗಳು ಮತ್ತು ಹಣ್ಣುಗಳ ಮಾಲೆಗಳನ್ನು ಮತ್ತು ಕಡಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸಿ.

    MORE
    GALLERIES

  • 99

    Dosha Remedy: ಗುರು ಗ್ರಹದ ಕಾಟದಿಂದ ಮುಕ್ತಿ ಬೇಕು ಅಂದ್ರೆ 5 ರಾಶಿಯವರು ಈ ಪರಿಹಾರ ಮಾಡಲೇಬೇಕು

    (ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಜನರ ನಂಬಿಕೆಗಳು ಮತ್ತು ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿದೆ. ನ್ಯೂಸ್ 18 ಇದನ್ನು ಖಚಿತಪಡಿಸಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.)

    MORE
    GALLERIES